ಉತ್ತರಪ್ರಭ ಸುದ್ದಿ
ನಿಡಗುಂದಿ:
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಕೀಟ ಹಾಗೂ ರೋಗಗಳ ಭಾದೆ ಈ ಭಾಗದಲ್ಲಿ ವ್ಯಾಪಕ ಕಂಡು ಬಂದಿದ್ದು ಈಚೆಗೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಕೃಷಿ ಅಧಿಕಾರಿ ಎನ್.ಟಿ.ಗೌಡರ ತಾಲ್ಲೂಕಿನ ಗೊಳಸಂಗಿ ಹಾಗೂ ಬುದ್ನಿ ಗ್ರಾಮದ ಸೂರ್ಯಕಾಂತಿ ಮತ್ತು ಮಕ್ಕಜೋಳ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು. ಸೂರ್ಯಕಾಂತಿ ಬೆಳೆಗಳಿಗೆ ಕೋರಿ ಹುಳುವಿನ ಕೀಟ ಭಾದೆ ಹೆಚ್ಚಾಗಿದ್ದು, ಈ ಕೀಟವು ಪತಂಗ ಜಾತಿಗೆ ಸೇರಿದ ಎಲೆಯ ಕೆಳಭಾಗದಲ್ಲಿ ಗುಂಪು ಗುಂಪುಗಳಾಗಿ ಸುಮಾರು 200-300 ಮೊಟ್ಟೆಗಳನ್ನು ಇಡುತ್ತದೆ ನಂತರ ಇದರಿಂದ ಬರುವ ಮರಿ ಹುಳುಗಳು ಸೂರ್ಯಕಾಂತಿಯ ಎಲೆಗಳನ್ನು ಸಂಪೂರ್ಣವಾಗಿ ನಾಶಮಾಡುತ್ತವೆ. ಮರಿಹುಳಗಳು ಎಲೆಯ ಕೆಳಭಾಗದಲ್ಲಿ ವಾಸಿಸುವರಿಂದ ಮೊದಲು ಕೀಟಭಾದೆಗೆ ಒಳಗಾದ ಎಲೆಗಳನ್ನು ಕಿತ್ತುಹಾಕಿ ಮರಿ ಹುಳಗಳನ್ನು ನಾಶಪಡಿಸಬೇಕು, ನಂತರ ಸೈಪರ ಮೃಥಿನ್ ಅಥವಾ ಅಲ್ಲಾ ಮೈನ್ ಹೆಸರಿನ ಯಾವುದಾದರೊಂದು ಕೀಟನಾಶಕವನ್ನು ಲೀಟರ್ ನೀರಿಗೆ 0.5 ಮಿಲಿಯಷ್ಟು ಮಿಶ್ರಣಮಾಡಿ ಎಲೆಯ ಕೆಳಭಾಗ ಒದ್ದೆಯಾಗುವ ಹಾಗೆ ಸಿಂಪಡಿಸುವ ಮೂಲಕ ಕೀಟಬಾಧೆ ನಿಯಂತ್ರಿಸಬಹುದು, ಮತ್ತು ಹೊಲದ ಸುತ್ತಲೂ ಹರಿತಗೆದು 4% ರ ಫೆನವಲರೇಟೆ ಪುಡಿಯನ್ನು ಹರಿಯಲ್ಲಿ ಹಾಕಬೇಕು ಎಂದು ರೈತರಿಗೆ ಸಲಹೆ ನೀಡಿದರು.

Leave a Reply

Your email address will not be published. Required fields are marked *

You May Also Like

ವಾರದಲ್ಲಿ ಸಮಸ್ಯೆ ಬಗೆಹರಿಸಲು ಕರವೆ ಆಗ್ರಹ

ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಶನಿವಾರ ಹೆಬ್ಬಾಳ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಯಿತು.

ರಾಜ್ಯ ವಿಧಾನಪರಿಷತ್ ಚುನಾವಣೆಗೆ ಮುಹೂರ್ತ ನಿಗದಿ

ದೆಹಲಿ/ಬೆಂಗಳೂರು: ಇದೇ ಜೂನ್ 30ರಂದು ಅವಧಿ ಮುಕ್ತಾಯವಾಗಲಿರುವ 7 ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ವಿಷಯವನ್ನು ಚುನಾವಣಾ ಆಯೋಗ ಘೋಷಿಸಿದೆ.

ಲಾಕ್ ಡೌನ್ ತೆರವಿನಿಂದ ಕೊರೊನಾ ಪ್ರಮಾಣದಲ್ಲಿ ಹೆಚ್ಚಳ: ಕೇಜ್ರಿವಾಲ್

ಲಾಕ್ ಡೌನ್ ತೆರವಿನಿಂದಾಗಿ ದೆಹಲಿಯಲ್ಲಿ ಕೊರೊನಾ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಜಯ ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಉತ್ತರಪ್ರಭ ಲಕ್ಷ್ಮೇಶ್ವರ: ಧಾರವಾಡ ವಿಧಾನ ಪರಿಷತ್ ಚುಣಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್…