ಉತ್ತರಪ್ರಭ ಸುದ್ದಿ
ನಿಡಗುಂದಿ:
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಕೀಟ ಹಾಗೂ ರೋಗಗಳ ಭಾದೆ ಈ ಭಾಗದಲ್ಲಿ ವ್ಯಾಪಕ ಕಂಡು ಬಂದಿದ್ದು ಈಚೆಗೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಕೃಷಿ ಅಧಿಕಾರಿ ಎನ್.ಟಿ.ಗೌಡರ ತಾಲ್ಲೂಕಿನ ಗೊಳಸಂಗಿ ಹಾಗೂ ಬುದ್ನಿ ಗ್ರಾಮದ ಸೂರ್ಯಕಾಂತಿ ಮತ್ತು ಮಕ್ಕಜೋಳ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು. ಸೂರ್ಯಕಾಂತಿ ಬೆಳೆಗಳಿಗೆ ಕೋರಿ ಹುಳುವಿನ ಕೀಟ ಭಾದೆ ಹೆಚ್ಚಾಗಿದ್ದು, ಈ ಕೀಟವು ಪತಂಗ ಜಾತಿಗೆ ಸೇರಿದ ಎಲೆಯ ಕೆಳಭಾಗದಲ್ಲಿ ಗುಂಪು ಗುಂಪುಗಳಾಗಿ ಸುಮಾರು 200-300 ಮೊಟ್ಟೆಗಳನ್ನು ಇಡುತ್ತದೆ ನಂತರ ಇದರಿಂದ ಬರುವ ಮರಿ ಹುಳುಗಳು ಸೂರ್ಯಕಾಂತಿಯ ಎಲೆಗಳನ್ನು ಸಂಪೂರ್ಣವಾಗಿ ನಾಶಮಾಡುತ್ತವೆ. ಮರಿಹುಳಗಳು ಎಲೆಯ ಕೆಳಭಾಗದಲ್ಲಿ ವಾಸಿಸುವರಿಂದ ಮೊದಲು ಕೀಟಭಾದೆಗೆ ಒಳಗಾದ ಎಲೆಗಳನ್ನು ಕಿತ್ತುಹಾಕಿ ಮರಿ ಹುಳಗಳನ್ನು ನಾಶಪಡಿಸಬೇಕು, ನಂತರ ಸೈಪರ ಮೃಥಿನ್ ಅಥವಾ ಅಲ್ಲಾ ಮೈನ್ ಹೆಸರಿನ ಯಾವುದಾದರೊಂದು ಕೀಟನಾಶಕವನ್ನು ಲೀಟರ್ ನೀರಿಗೆ 0.5 ಮಿಲಿಯಷ್ಟು ಮಿಶ್ರಣಮಾಡಿ ಎಲೆಯ ಕೆಳಭಾಗ ಒದ್ದೆಯಾಗುವ ಹಾಗೆ ಸಿಂಪಡಿಸುವ ಮೂಲಕ ಕೀಟಬಾಧೆ ನಿಯಂತ್ರಿಸಬಹುದು, ಮತ್ತು ಹೊಲದ ಸುತ್ತಲೂ ಹರಿತಗೆದು 4% ರ ಫೆನವಲರೇಟೆ ಪುಡಿಯನ್ನು ಹರಿಯಲ್ಲಿ ಹಾಕಬೇಕು ಎಂದು ರೈತರಿಗೆ ಸಲಹೆ ನೀಡಿದರು.

Leave a Reply

Your email address will not be published. Required fields are marked *

You May Also Like

ಸುಮಲತಾಗೆ ಪಾಸಿಟಿವ್: ಸಂಪರ್ಕಿತರಿಂದ ಪರೀಕ್ಷೆಗೆ ರಶ್.!

ಮಂಡ್ಯ: ಸಂಸದೆ ಸುಮಲತಾ ತಮಗೆ ಪಾಸಿಟಿವ್ ಬಂದಿದೆ ಎಂದು ಸೋಮವಾರ ಘೋಷಿಸಿದ್ದರು. ತಮ್ಮ ಸಂಪರ್ಕಿತರ ಪಟ್ಟಿಯನ್ನು…

ಸ್ವಚ್ಛ ಪರಿಸರದ ಜಾಗೃತಿ ನಮ್ಮ ಆದ್ಯತೆಯಾಗಲಿ

ಉತ್ತರಪ್ರಭ ಇಂಡಿ: ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಇರುವುದರಿಂದ ಹೆಚ್ಚು ಹೆಚ್ಚು…

ನಟ ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್

ಬೆಂಗಳೂರು: ಜಗ್ಗೇಶ್ ವಿರುದ್ಧ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್ ಅಣಬೇರು ಸೈಬರ್ ಕ್ರೈಂ ಕೇಂದ್ರದಲ್ಲಿ…

ಗದಗ ನಗರ ಸಭೆ ಚುನಾವಣೆ: ವ್ಹಿಲ್ ಚೆರ್ ನಲ್ಲಿ ಬಂದು ಮತಚಲಾಯಿಸಿದ ವೃದ್ದರು

ಗದಗ: ನಗರಸಭೆ ಯ ಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಯ…