ಉತ್ತರಪ್ರಭ
ರೋಣ:
ರೋಣ ಬಸ್ ನಿಲ್ದಾಣದಲ್ಲಿ ಬಾಗಲಕೋಟೆ ಘಟಕಕ್ಕೆ ಒಳಪಟ್ಟ ಬಸ್ ಹೈಕೋರ್ಟ್ ಆದೇಶದ ಮೇರೆಗೆ ವಶಕ್ಕೆ ಪಡೆದು ಕೊಂಡ ಘಟನೆ ಬುಧವಾರ ನಡೆದಿದೆ.

ಬಾಗಲಕೋಟೆ ಘಟಕದ ಬಸ್ ಚೊಳಚಗೊಡ್ಡದ ಕ್ರಾಸ್ ಬಳಿ 2014ರಲ್ಲಿ ಅಪಘಾತ ಸಂಭವಿಸಿ ನಾಲ್ಕು ಜನ ಮರಣ ಹೊಂದಿದ್ದರು, ಅವರಲ್ಲಿ ಇಬ್ಬರು ಮೃತರ ಸಂಬಂಧಿಕರು. ರೋಣ ಕೋರ್ಟಿನಲ್ಲಿ ಧಾವೆ ಹುಡಲಾಗಿ ಹೈಕೋರ್ಟ್, ಮೃತರ ಸಬಂಧಿಕರಿಗೆ ಅಸಲು, ಬಡ್ಡಿ ಸೇರಿ ಸುಮಾರು ಇಪತ್ತೊಂದು ಲಕ್ಷ ಪರಿಹಾರ ನೀಡಲು ಆದೇಶ ಮಾಡಿತ್ತು ,ಆದರೂ ಕೂಡಾ ಬಾಗಲಕೋಟೆ ಘಟಕ ಬರೀ ಹನ್ನೊಂದು ಲಕ್ಷ ಮಾತ್ರ ಪರಿಹಾರ ನೀಡಿ ಇನ್ನುಳಿದ ಹಣ ನೀಡಲು ಸತಾಯಿಸುತ್ತಿರುವ ಕಾರಣ. ಹಿರಿಯ ನ್ಯಾಯಾಧೀಶರ ಆದೇಶದ ಮೇರೆಗೆ ಈ ಬಸ್ಸನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಮೃತರ ವಾದಿಪರ ವಕೀಲ ಬಿ ಎಚ್ ಮಾಡಲಗೇರಿ ಹೇಳಿದರು.

ಈ ಸಂದರ್ಭದಲ್ಲಿ ಏನ್ ಪಿ ನದಾಫ್, ಎಸ್ ಈ ಕಾಳೆ , ಬಿ ಎಂ ಯಲಬುರ್ಗಿ ಧಿಲಿಪರು(ಅಮೀನರು ) ಉಪಸ್ಥಿತರಿದ್ದರು.

2 comments
Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು ಇಂದು ಮತ್ತೆ 63 ಕೊರೊನಾ ಪಾಸಿಟಿವ್!

ಇಂದು ಕೂಡ ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ 50 ದಾಟುತ್ತಿದ್ದು, ಸೋಂಕಿನ ಸುಂಟರಗಾಳಿ ವ್ಯಾಪಕವಾಗುತ್ತಿದೆ.

ಮದುವೆ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳು ನಿಷೇಧಿಸಿದ ಜಿಲ್ಲಾಡಳಿತ

ಬಾಗಲಕೋಟೆ:ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಮದುವೆ ತುರ್ತು ನಡೆಸಲೇ ಬೇಕಿದ್ದರೆ…

ಪಕ್ಷದ ಬಲವರ್ಧನೆಗೆ ಸರ್ವರೂ ಶ್ರಮಿಸಿ: ಲಮಾಣಿ

ಕಾರ್ಯಕರ್ತರ ಉತ್ತಮ ಕಾರ್ಯದಿಂದ ಪಕ್ಷ ಉತ್ತುಂಗಕ್ಕೆರಿದ್ದು, ನೂತನ ಪದಾಧಿಕಾರಿಗಳು ಪಕ್ಷ, ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದರ ಮೂಲಕ ಪಕ್ಷದ ಸಂಪೂರ್ಣ ಬಲವರ್ಧನೆಗೆ ಶ್ರಮಿಸಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ವಿದ್ಯುತ್ ಸ್ಪರ್ಶ ವ್ಯಕ್ತಿ ಸಾವು

ಉತ್ತರಪ್ರಭ ಮುಳಗುಂದ: ಸಮೀಪದ ಬಸಾಪೂರ ಗ್ರಾಮದ ಹತ್ತಿರದ ತೋಟದಲ್ಲಿ ನೀರು ಹಾಯಿಸಲು ಮೋಟರ್ ಸ್ವಿಚ್ ಹಾಕುವ…