ಬಿಸ್ಲಾಗ ನಿಂತಕಿಯ ನೆರಳಿನಾಟ

ಇದು ‘ಸುದ್ದಿ ಕಾಲ’! ಹಾಗಂದರೆ ಏನೆಂದು ತಿಳಿದಿರಬೇಕಲ್ಲವೆ? ಹೌದು ಅದೇ ‘ಸುದ್ದಿ’ ವಿಷಯ. ಕೆಟ್ಟ ಸುದ್ದಿಯ ಸುರಿಮಳೆ. ಈಗ ತಿಳಿಯಿತಲ್ಲ ಸಾವಿನ ಸುದ್ದಿ ಎಂದು? ಇತ್ತೀಚೆಗೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮವರು, ತಮ್ಮವರು, ಬಹಳ ಹತ್ತಿರದಿಂದ ಕಂಡವರು, ಸಣ್ಣ ವಯಸ್ಸಿನವರು, ವಯಸ್ಸಾದವರು, ಹೀಗೆ ಒಬ್ಬರಲ್ಲ ಒಬ್ಬರು ನಿತ್ಯ ನಮ್ಮನ್ನಗಲುತ್ತಿದ್ದಾರೆ. ಇದಕ್ಕೆ ಕೊನೆ ಎಂದು? ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಉತ್ತರವಿಲ್ಲದ ಪ್ರಶ್ನೆಗೆ ‘ಕಾಲ’ವೇ ಉತ್ತರಿಸಬೇಕು.

ಆರೋಗ್ಯಕ್ಕೆ ಮಾರಕ ತಂಬಾಕು

ಹಾನಿಕಾರಕ ಎಂದು ತಂಬಾಕುಗಳಿoದ ಸಿದ್ಧವಾದ ಬಿಡಿ ಹಾಗೂ ಸಿಗರೇಟುಗಳ ಚೀಟು, ಪ್ಯಾಕೇಟು, ಕವರ್ ಹಾಗೂ ಬಾಕ್ಸ್ ಮೇಲೆ ಚೇಳಿನ ಚಿತ್ರದೊಂದಿಗೆ ಗಂಟಲು & ಬಾಯಿ ಕ್ಯಾನ್ಸರ್ ನ ಸ್ಪಷ್ಟ ಚಿತ್ರದೊಂದಿಗೆ ಮುದ್ರಿಸಿದ್ದರೂ ಜನರು ಹಗಲು ಕಂಡ ಬಾವಿಯಲ್ಲಿ ಇರುಳು ಹೋಗಿ ಬಿಳುವಂತ ಪರಸ್ಥಿತಿ ನಮ್ಮ ಮುಂದಿದೆ. ಒಂದು ವಯೋಮಾನದ ತರುಣರು, ತಂಬಾಕು ಮಿಶ್ರಿತ ಗುಟಕಾ, ಮಾವಾ, ಪಾನ್ ಬೀಡಾ, ಬೀಡಿ ಸಿಗರೇಟ್ ಗಳನ್ನು ಮೋಜು ಮಸ್ತಿಗಾಗಿ ಸೇವನೆ ಮಾಡುವುದು, ತಿಂದುಜಗಿಯುವುದು, ಅಗಿಯುವುದು,ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು, ಹುಡುಗಿಗೆ ಹಠ ಇರಬಾರದು, ಹುಡುಗರಿಗೆ ಚಟ ಇರಬಾರದು ಎಂಬ ಮಾತು ನಿತ್ಯಸತ್ಯವಾಗಿದೆ. ಹುಡುಗರುಜಿದ್ದಿಗೆ ಬಿದ್ದವರಂತೆ ಮುಗಿ ಬಿದ್ದುಕೊಂಡು ಸೇವನೆ ಮಾಡುವುದನ್ನು ನೋಡಿದರೆ ನಮ್ಮ ಯುವ ಜನತೆ ಎತ್ತ ಸಾಗುತ್ತಿದೆ ಎಂಬುದೇ ತೋಚುತ್ತಿಲ್ಲ.

ಜೂಜಾಟ: ಹತ್ತು ಜನರ ಬಂಧನ

ರೋಣ: ಇಲ್ಲಿನ ಬಿಸಿಎಂ ಹಾಸ್ಟೇಲ್ ಸಮೀಪದಲ್ಲಿರುವ ರಸ್ತೆಯ ಬದಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಹತ್ತು ಜನರನ್ನು ರೋಣ ಪೋಲಿಸರು ಬಂಧಿಸಿದ್ದಾರೆ, ಬಂಧಿತರಿಂದ 21,160 ರೂ, ವಶಪಡಿಸಿಕೊಳ್ಳಲಾಗಿದೆ.

ಲಾಕ್ ಡೌನ್ ಅವಧಿ ವಿಸ್ತರಣೆ: ಜೂ.7ರವರೆಗೆ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆ

ಜೂನ್ ಒಂದರವರೆಗೂ ಇದ್ದ ಲಾಕ್ ಡೌನ್ 7 ನೇ ತಾರೀಖಿನವರೆಗೂ ಮುಂದುವರಿಸಲಾಗುವುದು. ಕೆಲ ಸಡಿಲಿಕೆಯೊಂದಿಗೆ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಸಂಘಗಳಲ್ಲಿ ಪಡೆದ ಸಾಲದ ಪೂರ್ತಿಬಾಕಿ ಕಟ್ಟಬೇಕು ಎಂಬ ಆದೇಶ ಹಿಂಪಡೆಯಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ/ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಕೋವಿಡ್ ನಿಂದ ಮೃತ ಪಟ್ಟ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ಪರಿಹಾರ

ಲಖನೌ: ಕೋವಿಡ್-19 ವೇಳೆ ಕರ್ತವ್ಯ ನಿಷ್ಠೆ ಮೆರೆದು ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಸಹಕಾರ ಬ್ಯಾಂಕ್ ಗಳ ಮೂಲಕ ರೈತರಿಗೆ 20,810 ಕೋಟಿ ಬೆಳೆ ಸಾಲ-ಸಚಿವ ಸೋಮಶೇಖರ್

ಬೆಂಗಳೂರು: ಸಹಕಾರ ಬ್ಯಾಂಕ್ ಗಳ ಮೂಲಕ ಈ ವರ್ಷ20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುರಿ ತಲುಪಲು ರಾಜ್ಯದ 212 ಡಿಸಿಸಿ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ. 303 ಲಕ್ಷ ರೈತರನ್ನು ತಲುಪಲು ಹೇಳಿದ್ದೇವೆ ಎಂದರು.

ತುರ್ತು ವಾಹನ ಸೇವೆ ಒದಗಿಸಿ ಜನರಿಂದ ಸೈ ಎನಿಸಿಕೊಂಡ ಗ್ರಾಪಂ ಸದಸ್ಯ ಜಹೀರ್

ಮುಂಡರಗಿ: ಕೊರೊನಾದ ಈ ಸಂಕಷ್ಟದಲ್ಲಿ ಜನಸಾಮಾನ್ಯರ ಬದುಕು ತೀರಾ ಸಂಕಷ್ಟಕ್ಕೀಡಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಮೂಲಕ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಸೇವಾ ಕಾರ್ಯಕ್ಕೆ ಅಣಿಯಾಗಿದ್ದಾರೆ. ಹೌದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ದೀನ್ ಮುಲ್ಲಾ, ಗ್ರಾಮದಲ್ಲಿ ಉಚಿತ ತುರ್ತು ಸೇವಾ ವಾಹನದ ವ್ಯವಸ್ಥೆಯನ್ನು ಮಾಡಿದ್ದಾರೆ.

ಗದಗನಲ್ಲಿ ಮಾಶಾಸನ ಪಡೆಯಲು ಎರಡು ಕಿಲೋಮಿಟರ್ ನಡೆದು ಬಂದ ಅಜ್ಜಿ

ಗದಗ: ಕೊರೊನಾದ ಸಂಕಷ್ಟದ ದಿನಗಳು ಕೇವಲ ಬಡ ಜನರಿಗಷ್ಟೆ ಅಲ್ಲದೇ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣದಿಂದ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ತುತ್ತಿನ ಚೀಲ ತುಂಬಿಕೊಳ್ಳಲು ದಿನದ ದುಡಿಮೆಯನ್ನೇ ನಂಬಿಕೊಂಡಿರುವವರ ಪಾಡಂತೂ ಹೇಳತೀರದು. ಇದೆಲ್ಲದಕ್ಕಿಂತ ಮುಖ್ಯವಾಗಿ ಅದೆಷ್ಟೋ ವೃದ್ಧರು, ವಿಕಲಚೇತನರು, ವಿದವೆಯರು ಮಾಶಾಸನವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಅಂತಹವರ ಪಾಡಂತೂ ಹೇಳತೀರದು

ರೈತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದ ಕಣ್ಣು, ಹೃದಯ ಇಲ್ಲ : ಡಿಕೆಶಿ ಕಿಡಿ

ಧಾರವಾಡ : ರಾಜ್ಯ ಬಿಜೆಪಿ ಸರ್ಕಾರ ನೀಡಿದ ಪರಿಹಾರ ಇಲ್ಲಿಯವರೆಗೂ ರೈತರಿಗೆ ಸಿಕ್ಕೇಯಿಲ್ಲ ,ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ ಎರಡೂ ಗಂಟೆ ಅವಕಾಶ ನೀಡುವ ಈ ಸರ್ಕಾರ ,ಆದರೆ ಮದ್ಯ ಮಾರಾಟ ಮಾಡಲು ಸಂಜೆ 4 ಗಂಟೆಯವರೆಗೂ ಅವಕಾಶ ನೀಡಿದೆ. ಈ ಸರ್ಕಾರಕ್ಕೆ ನಿಮಗೆ ಕಣ್ಣು,ಹೃದಯ ಎಂಬುದು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಿಡಿ ಕಾರಿದರು .

ಸಮಸ್ಯೆಗಳ ಕುರಿತು ಪ್ರತ್ಯೇಕ ಸಾರಿಗೆ ಇಲಾಖೆಯ ಸಹಾಯವಾಣಿ : ಲಕ್ಷ್ಮಣ ಸವದಿ

ಬೆಂಗಳೂರು: ಕೋವಿಡ್ ತಡೆಯುವ ಉದ್ದೇಶದಿಂದ ಸಾರಿಗೆ ಸೇವೆ, ಆಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ಸಾರಿಗೆ ಇಲಾಖೆ ಪ್ರತ್ಯೇಕ ಸಹಾಯವಾಣಿಯನ್ನು ಆರಂಭಿಸಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ರಾಜ್ಯದಲ್ಲಿ ಸಿಎಮ್ ಬದಲಾವಣೆಗೆ ಪ್ರಯತ್ನ ನಡೆದಿಲ್ಲಾ: ಸಚಿವ ಶಟ್ಟರ್

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಯತ್ನ ನಡೆದಿಲ್ಲ. ಈ ವರೆಗೆ ರಾಜ್ಯ, ನಾಯಕರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಖಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.