ಉತ್ತರಪ್ರಭ
ಆಲಮಟ್ಟಿ
: ಗಾಡಿವಾಲಾ ಆಯಾ ಜರಾ ಕಚರಾ ನಿಕಾಲ್ ಸದ್ದಿನೊಂದಿಗೆ ಕಸವಿಲೇವಾರಿಯ ಹೊಸದಾದ ವಾಹನವೊಂದು ರಸ್ತೆಗೆ ಇಳಿಯಲಿದೆ. ಈ ಮೊದಲು ಒಂದೇ ವಾಹನ ಇದಿದ್ದರಿಂದ ಕಸ ಸಂಗ್ರಹದ ತಾಪತ್ರಯ ಇಲ್ಲಿ ಹೆಚ್ಚಾಗಿತ್ತು. ಆ ಸಮಸ್ಯೆ ಸ್ವಲ್ಪ ಮಟ್ಟಿಗೆ ತಗ್ಗಿಸಲು ಸ್ಥಳೀಯ ಗ್ರಾಮ ಪಂಚಾಯತಿ ಇದೀಗ ಮುಂದಾಗಿದೆ. ಉಂಟಾಗಿದ್ದ ತೊಂದರೆ ಇನ್ಮುಂದೆ ಹೆಚ್ಚು ಕಡಿಮೆ ದೂರಾಗಲಿದೆ. ಕಸವಿಲೇವಾರಿ ಎರಡನೇ ಹೊಸ ವಾಹನ ಗ್ರಾಪಂ ಖರೀದಿಸಿದ್ದು ಬುಧವಾರ ಪೂಜೆಯೊಂದಿಗೆ ಚಾಲನೆ ನೀಡಲಾಗಿದೆ.
ಆಲಮಟ್ಟಿ ಗ್ರಾಮ ಪಂಚಾಯ್ತಿಯ ವಿದ್ಯುತ್ ಬಿಲ್ ಉಳಿತಾಯದಲ್ಲಿ 6 ಲಕ್ಷ ರೂ ವೆಚ್ಚದಲ್ಲಿ ಕಸವಿಲೇವಾರಿ ವಾಹನ ಖರೀದಿಸಲಾಗಿದೆ.
ಬುಧವಾರ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆ ವಾಹನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯ್ತಿಯಿಂದ ಗ್ರಾಮ ಪಂಚಾಯ್ತಿಯ ವಿವಿಧ ಯೋಜನೆಗಳ ವಿದ್ಯುತ್ ಬಿಲ್ ಪಾವತಿಗಾಗಿ ನೀಡಿದ ಹಣದಲ್ಲಿ, ಉಳಿತಾಯ ಮಾಡಿ, 6 ಲಕ್ಷ ರೂ ಮೌಲ್ಯದ ವಾಹನ ಖರೀದಿಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಈ ಸಂದರ್ಭದಲ್ಲಿ ತಿಳಿಸಿದರು.
ಆಲಮಟ್ಟಿ ಗ್ರಾಮ ಪಂಚಾಯ್ತಿಯ ವಿಸ್ತಾರ ಹೆಚ್ಚಿದೆ. ಎಲ್ಲೆಡೆಯೂ ನಿತ್ಯ ಸಂಚರಿಸಿ ಕಸ ಸಂಗ್ರಹಿಸಲು ಈ ಮೊದಲು ಕೇವಲ ಒಂದೇ ವಾಹನವಿತ್ತು. ಇದರಿಂದ ಬಹಳಷ್ಟು ತೊಂದರೆಯಾಗುತ್ತಿತ್ತು. ಇನ್ನೊಂದು ವಾಹನದ ಅವಶ್ಯಕತೆ ಮನಗಂಡು ಈ ವಾಹನ ಖರೀದಿಸಲಾಗಿದೆ. ಇನ್ನೂ ಮುಂದೆ ವಾರದ ಆರು ದಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಗಳ ಮನೆ ಮನೆಗೂ ಸಂಚರಿಸಿ ಕಸ ಸಂಗ್ರಹಿಸಲಾಗುವುದು ಎಂದು ಮಂಜುನಾಥ ತಿಳಿಸಿದರು.
ಇಲ್ಲಿಯ ಕಸ ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆ ಕಾರ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಹನಕ್ಕೆ ಪೂಜೆ ಸಲ್ಲಿಸಿ, ನಂತರ ಪ್ಲ್ಯಾಸ್ಟಿಕ್ ತ್ಯಜಿಸಿ ಆಂದೋಲನವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮೀನಾಕ್ಷಿ ಉಪ್ಪಾರ, ಪಿಡಿಓ ಜಿ.ಬಿ. ಕಲ್ಯಾಣಿ, ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಜಿನುಗು ಧಾರೆಯಲ್ಲಿ ನಾಗ ಪಂಚಮಿ ಸಂಭ್ರಮ

ಉತ್ತರಪ್ರಭಆಲಮಟ್ಟಿ: ಬೆಳ್ಳಂ ಬೆಳಿಗ್ಗೆ ಜಿಟಿಜಿಟಿ ಮಳೆ. ಧಾರಾಕಾರವಾಗಿ ಜಿನುಗುತ್ತಿದ್ದ ವರ್ಷಧಾರೆಯ ಹಿತಕರ ಹನಿಯ ಸಿಂಚನದಲ್ಲಿ ನಾಗರ…

ಕೃಷ್ಣಾ ಯೋಜನೆ ಜೆಡಿಎಸ್ ಪಾಲು ಶೂನ್ಯ- ಮೊಯ್ಲಿ ಟೀಕೆ

ಉತ್ತರಪ್ರಭಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೆಲಸ ಕಾರ್ಯ ಕಾಮಗಾರಿಗಳು ಸಮರ್ಪಕವಾಗಿ, ನಿದಿ೯ಷ್ಟವಾಗಿ ನಡೆಯುತ್ತಿಲ್ಲ. ಅದರಲ್ಲೂ…

ಸಿದ್ದನಾಥ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಉತ್ತರಪ್ರಭ ಸದ್ದಿಆಲಮಟ್ಟಿ: ಇಲ್ಲಿಗೆ ಸಮೀಪದ ಸಿದ್ದನಾಥ ಸಕಾ೯ರಿ ಪ್ರೌಢಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತೋತ್ಸವ ಸೋಮವಾರ…

ಆರೋಗ್ಯ ಬಲವರ್ಧನೆಗೆ ಆಟೋಟಗಳು ಸಹಕಾರಿ

ಉತ್ತರಪ್ರಭಕ್ರೀಡೆಗಳಿಗೆ ಸ್ಪೂರ್ತಿ ನೀಡಿ- ಬಿಇಒ ಸಂಗಮೇಶ ಪೂಜಾರಿವರದಿ: ಗುಲಾಬಚಂದ ಜಾಧವಆಲಮಟ್ಟಿ: ಬಲವರ್ಧನೆಗೆ ಕ್ರೀಡೆಗಳು ಮಹತ್ತರ ಪಾತ್ರವಹಿಸುತ್ತವೆ.…