ಬೆಂಗಳೂರು: ಗುತ್ತಿಗೆಯಡಿಯಲ್ಲಿ ನೀಡಿದ್ದ ಸರ್ಕಾರಿ ಜಮೀನನ್ನು ಖಾಯಂ ಆಗಿ ಅವರ ಹೆಸರಿಗೆ ಮಾರ್ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶಿಕ್ಷಣ ಸಂಸ್ಥೆ, ವೈದ್ಯಕೀಯ, ಕೈಗಾರಿಕೆ ಹಾಗೂ ವ್ಯವಸಾಯ ಮೊದಲಾದ ಚಟುವಟಿಕೆಗಳು ನಡೆಸಲು ಖಾಸಗಿಯವರಿಗೆ ನೀಡಿರುವ ಸರ್ಕಾರಿ ಜಮೀನನ್ನು ಶಾಶ್ವತವಾಗಿ ಅವರಿಗೆ ಮಾರಾಟ ಮಾಡುವ ನಿರ್ಧಾರ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಖಾಸಗಿ ಕಂಪನಿಗಳಿಗೆ, ವ್ಯಕ್ತಿಗಳಿಗೆ ಗುತ್ತಿಗೆಯಡಿಯಲ್ಲಿ ನೀಡಿದ್ದ ಸರ್ಕಾರಿ ಜಮೀನನ್ನು ಖಾಯಂ ಆಗಿ ಅವರ ಹೆಸರಿಗೆ ಮಾರ್ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಂಜೂರು ಮಾಡಲಾದ ಉದ್ದೇಶಗಳಿಗೆ ಜಮೀನನ್ನು ಬಳಸದವರಿಂದ ಜಮೀನನ್ನು ಹಿಂಪಡೆಯುವುದಾಗಿ ನಿಯಮ ರೂಪಿಸಲಾಗಿದೆ. ಜಮೀನು ಪಡೆದುಕೊಂಡ ಉದ್ದೇಶಕ್ಕೆ ಬಳಸುವವರಿಗೆ ಜಮೀನಿನ ಮೌಲ್ಯ ಪಡೆದು ಅವರ ಹೆಸರಿಗೆ ವರ್ಗಾಯಿಸಲು ಅವಕಾಶ ನೀಡಲಾಗಿದೆ.
ಇದರಿಂದ ಪದೇ ಪದೇ ನವೀಕರಣಗೊಳಿಸುವ ಕೆಲಸ ಕಡಿಮೆಯಾಗುತ್ತದೆ. ಹಾಗಾಗಿ ಅವರಿಗೆ ಶಾಶ್ವತವಾಗಿ ನೀಡುವ ಯೋಜನೆ ರೂಪಿಸಲಾಗಿದೆ. ಉದ್ದೇಶಿತ ಕಾರ್ಯಗಳಿಗೆ ಬಳಸದೆ ಇದ್ದರೆ ಮರು ಪಡೆಯುವ ಲೀಸ್‌ ಅಗ್ರಿಮೆಂಟ್‌ ಅನ್ನು ಹಾಗೆಯೇ ಉಳಿಸಲಾಗುತ್ತದೆ.

Leave a Reply

Your email address will not be published. Required fields are marked *

You May Also Like

ತ್ರಿಪುರಾದಲ್ಲಿ ಸೈನಿಕರಿಗೆ ಮಾತ್ರ ಕಂಡು ಬಂದ ಸೋಂಕು!

ತ್ರಿಪುರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಮತ್ತೆ 24 ಜನ ಬಿಎಸ್ ಎಫ್ ಯೋಧರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣ 88 ಕ್ಕೆ ತಲುಪಿವೆ .

ಕೋವಿಡ್-19 ನಿಯಂತ್ರಣ : ಜಿಲ್ಲೆಯಲ್ಲಿ 2 ವಾರ ಪ್ರತಿಬಂಧಕಾಜ್ಞೆ ಮುಂದುವರಿಕೆ

ಕೋವಿಡ್ -19 ಹರಡದಂತೆ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಮುಂದಿನ ಎರಡು ವಾರಗಳವರೆಗೆ ನಿಗದಿತ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚಾರ ನಿಷೇಧಿಸಿದೆ.

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!! ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು…