ಉತ್ತರಪ್ರಭ

ನರೆಗಲ್ಲ: ಸಮೀಪದ ಮಜರೆ ಗ್ರಾಮವಾದ ಕೊಡಿಕೊಪ್ಪದ ಪ್ರಗತಿಶೀಲ ಶಿಕ್ಷಣ ಸಂಸ್ಥೆಯ ಮುಂಬಾಗದಲ್ಲಿ ಕಡಲೆ ಹೊಟ್ಟು ಹಾಗೂ ಜೋಳದ ಮೇವಿನ ಬಣವೆಗೆ ಶನಿವಾರ ಬೆಂಕಿ ತಗುಲಿದ್ದು ಸುಮಾರು 9 ಟ್ರಾಕ್ಟರಗಳಷ್ಡು ಹೊಟ್ಡು ಮೇವು ಸುಟ್ಡಿದೆ.

ಸ್ಥಳೀಯ ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ, ವರ್ಷ ಪೂರ್ತಿ ದನ ಕರುಗಳಿಗೆ ಮೇವಿಗಾಗಿ ಸಂಗ್ರಹಿಸಿದ್ದ ಹೊಟ್ಟಿನ ಬಣವೆಗೆ ದುರುಳರ ಬೆಂಕಿ ಹಚ್ಚಿದ್ದಾರೆ ಈ ಹಿಂದೆ ನಮ್ಮ ಜಮೀನಿನಲ್ಲಿ ಗೋಧಿ ಹುಲ್ಲಿಗೂ ಬೆಂಕಿ ಹಾಕಿದ್ದರು, ಈಗ ಮತ್ತೆ ಬಣವೆಗೆ ಬೆಂಕಿ ಹಚ್ಚುವ ಮೂಲಕ ದುಷ್ಕ್ರತ್ಯವೆಸಗಿದ್ದಾರೆ, ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಬಣವೆಗಳ ಮಾಲೀಕರಾದ ಮಂಜಪ್ಪ ಹೊಸಳ್ಳಿ,ಉಮೇಶಪ್ಪ ಹೆಬ್ಬಳ್ಳಿ,ಆಗ್ರಹಿಸಿದರು.

ದನಕರುಗಳಿಗೆ ವರ್ಷಾನು ಗಟ್ಟೆ ಮೆಯಿಸಲು ಎರಡು ಬಣವೆಗಳ ಹೊಟ್ಡುಗಳನ್ನು ಸಂಗ್ರಹಿಸಿ ಹಾಕಿದ್ದೆವು ಆದರೆ ದುರುಳರು ಬೆಂಕಿ ಹಚ್ಚಿ ಸುಟ್ಟಿದ್ದಾರೆ.

-ಮಂಜುನಾಥ ಹೊಸಳ್ಳಿ.

Leave a Reply

Your email address will not be published. Required fields are marked *

You May Also Like

ಪಕ್ಷ ವಿರೋದಿ ಚಟುವಟಿಕೆ; ಬಿಜೆಪಿ ಪಕ್ಷದ ನಾಲ್ವರ ಕಾರ್ಯಕರ್ತರ ಉಚ್ಚಾಟನೆ

ಉತ್ತರಪ್ರಭ ಸುದ್ದಿಮುಳಗುಂದ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಮಹಾಂತೇಶ ಬಾತಾಖಾನಿ, ಎಂ.ಡಿ.ನರಗುoದ, ಸಿ.ಎಸ್.ಪತ್ರಿ, ಮಂಜುನಾಥ ಮಜ್ಜಿಗುಡ್ಡ…

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ

ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಡಿಪಿಇಪಿ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವನ್ನು ಶಾಲೆಯ ಪ್ರಧಾನ ಶಿಕ್ಷಕ ಎಂ.ಟಿ.ಕಟ್ಟಿಮನಿ ಸಸಿಗಳಿಗೆ ನೀರು ಹಾಕುವ ಮೂಲಕ ಆಚರಿಸಲಾಯಿತು.

ವಾರದಲ್ಲಿ ಸಮಸ್ಯೆ ಬಗೆಹರಿಸಲು ಕರವೆ ಆಗ್ರಹ

ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಶನಿವಾರ ಹೆಬ್ಬಾಳ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಯಿತು.

ಗದಗನಲ್ಲಿಂದು 18 ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 78 ಕ್ಕೆ ಏರಿಕೆ

ಗದಗ: ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 78…