ಉತ್ತರಪ್ರಭ

ನರೆಗಲ್ಲ: ಸಮೀಪದ ಮಜರೆ ಗ್ರಾಮವಾದ ಕೊಡಿಕೊಪ್ಪದ ಪ್ರಗತಿಶೀಲ ಶಿಕ್ಷಣ ಸಂಸ್ಥೆಯ ಮುಂಬಾಗದಲ್ಲಿ ಕಡಲೆ ಹೊಟ್ಟು ಹಾಗೂ ಜೋಳದ ಮೇವಿನ ಬಣವೆಗೆ ಶನಿವಾರ ಬೆಂಕಿ ತಗುಲಿದ್ದು ಸುಮಾರು 9 ಟ್ರಾಕ್ಟರಗಳಷ್ಡು ಹೊಟ್ಡು ಮೇವು ಸುಟ್ಡಿದೆ.

ಸ್ಥಳೀಯ ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ, ವರ್ಷ ಪೂರ್ತಿ ದನ ಕರುಗಳಿಗೆ ಮೇವಿಗಾಗಿ ಸಂಗ್ರಹಿಸಿದ್ದ ಹೊಟ್ಟಿನ ಬಣವೆಗೆ ದುರುಳರ ಬೆಂಕಿ ಹಚ್ಚಿದ್ದಾರೆ ಈ ಹಿಂದೆ ನಮ್ಮ ಜಮೀನಿನಲ್ಲಿ ಗೋಧಿ ಹುಲ್ಲಿಗೂ ಬೆಂಕಿ ಹಾಕಿದ್ದರು, ಈಗ ಮತ್ತೆ ಬಣವೆಗೆ ಬೆಂಕಿ ಹಚ್ಚುವ ಮೂಲಕ ದುಷ್ಕ್ರತ್ಯವೆಸಗಿದ್ದಾರೆ, ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಬಣವೆಗಳ ಮಾಲೀಕರಾದ ಮಂಜಪ್ಪ ಹೊಸಳ್ಳಿ,ಉಮೇಶಪ್ಪ ಹೆಬ್ಬಳ್ಳಿ,ಆಗ್ರಹಿಸಿದರು.

ದನಕರುಗಳಿಗೆ ವರ್ಷಾನು ಗಟ್ಟೆ ಮೆಯಿಸಲು ಎರಡು ಬಣವೆಗಳ ಹೊಟ್ಡುಗಳನ್ನು ಸಂಗ್ರಹಿಸಿ ಹಾಕಿದ್ದೆವು ಆದರೆ ದುರುಳರು ಬೆಂಕಿ ಹಚ್ಚಿ ಸುಟ್ಟಿದ್ದಾರೆ.

-ಮಂಜುನಾಥ ಹೊಸಳ್ಳಿ.

Leave a Reply

Your email address will not be published. Required fields are marked *

You May Also Like

ಅಂದಪ್ಪ ಸಂಕನೂರ ಹುಟ್ಟು ಹಬ್ಬ ಪ್ರಯುಕ್ತ ರಕ್ತದಾನ: ರಕ್ತದಾನದಿಂದ ಜೀವ ಉಳಿಸಿದ ಪುಣ್ಯಪ್ರಾಪ್ತಿ

ದಾನಗಳಲ್ಲಿಯೇ ಶ್ರೇಷ್ಠತೆಯನ್ನು ಪಡೆದ ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವ ಮೂಲಕ ಅಂದಪ್ಪ ಸಂಕನೂರ ಅವರ ಜನ್ಮದಿನ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ

ಕುರಿಗಾಹಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ರಾಜ್ಯದಲ್ಲಿ ಕುರಿಗಾಹಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಸ್ಥಳೀಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಬ್ಲಾಕ್ ಫಂಗಸ್ ಯಾರಲ್ಲಿ ಕಂಡು ಬರುತ್ತದೆ? ಡಾ. ಚಂದ್ರಶೇಖರ್ ಬಳ್ಳಾರಿ ನೀಡಿದ ಮಾಹಿತಿ

ಜಗತ್ತನ್ನೇ ತಲ್ಲೇನಿಸಿ ಲಕ್ಷಾಂತರ ಜನರ ಪ್ರಾಣವನ್ನೇ ಕಸಿದುಕೊಂಡ ಮಹಾಮಾರಿ ಕೊರೊನ ಇದೀಗ ಮತ್ತೊಂದು ಗಂಡಾತರ ತಂದಿದೆ. ಅದುವೇ ‘ಕಪ್ಪು ಫಂಗಸ್’ ಇಂಗ್ಲಿಷ್ ನಲ್ಲಿ ಇದಕ್ಕೆ ” MUCORMYCOSIS ” ಅಂತ ಕರಿಯುತ್ತಾರೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಕಂಡುಹಿಡಿದು ಗುಣಪಡಿಸದಿದ್ದರೆ, ರೋಗಿಗಳ ಪ್ರಾಣಕ್ಕೆ ಹಾನಿಕಾರವಾಗಬಲ್ಲದು. ಇದು ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಫಂಗಸ್’ ಒಂದು ಜೀವ – ಪರಾವಲಂಬಿ, ಪರನ್ನಜೀವಿ ಹಾಗೂ ಕೆಟ್ಟಕಳೆ. ಇದು ಹೆಚ್ಚಾಗಿ ಕೊರೊನದಿಂದ ಗುಣಮುಖವಾಗುತ್ತಿರುವ ಅಥವಾ ಗುಣಮುಖವಾಗಿರುವರಲ್ಲಿ ಕಾಣಬಹುದು.

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

ನಗರದ ಹೊರವಯದಲ್ಲಿರುವ ಪಶು ವೈದ್ಯಕೀಯ ಕಾಲೇಜು ಎದುರು ಚಾಲಯಕನ ನಿಯಂತ್ರನ ತಪ್ಪಿ ಟಿಪ್ಪರ ಪಲ್ಟಿಯಾಗಿದೆ.