ಕೃಷ್ಣಾ ನದಿಗೆ ಜಿಗಿದು ಯುವಕ ಆತ್ಮಹತ್ಯೆ !

ಉತ್ತರಪ್ರಭ
ಆಲಮಟ್ಟಿ:
ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿ ಅಮೂಲ್ಯ ಜೀವತೆತ್ತಿರುವ ಘಟನೆಯೊಂದು ಭಾನುವಾರ ಇಲ್ಲಿ ನಡೆದಿದೆ.
ಕುಡಿದ ಅಮಲಿನ ಮತ್ತಿನಲ್ಲಿ ಇತ ಕೃಷ್ಣಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನ್ನೆಲಾಗಿದೆ.
ಇಂಥ ದುಸ್ಸಾಹಸಕ್ಕೀಳಿದವನು ಬಾಗಲಕೋಟ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಇಲ್ಲಿಗೆ ಸಮೀಪದ ಸೀತಿಮನಿ ತಾಂಡಾದ ಯುವಕನೆಂದು ಹೇಳಲಾಗಿದೆ. ಆ ತಾಂಡಾ ನಿವಾಸಿ ಸುನೀಲ ಸೋಮಲ್ಲಪ್ಪ ಚವ್ಹಾಣ(24) ಎಂದು ಗುರುತಿಸಲಾಗಿದೆ.
ಮೃತನು ಸರಾಯಿ ಚಟಕ್ಕೆ ಅಂಟಿಕೊಂಡಿದ್ದ. ಆಮಲಿನ ದಾಸನಾಗಿ ಇತ್ತೀಚೆಗೆ ಅತೀ ಹೆಚ್ಚು ಮದ್ಯ ಸೇವನೆ ಮಾಡುತ್ತಿರುವದರಿಂದ ಅವರ ಕುಟುಂಬ ವರ್ಗದವರು ಕುಡಿತವನ್ನು ಬಿಡುವಂತೆ ಒತ್ತಾಯಿಸಿದ್ದಾರೆನ್ನಲಾಗಿದೆ. ಅದಕ್ಕೆ ಅತ ಒಪ್ಪಲಿಲ್ಲ. ಇದನ್ನೇ ಮಾನಸಿಕವಾಗಿ ಕೌಟುಂಬಿಕ ಕಲಹ ಮಾಡಿಕೊಂಡು ಆತ್ಮಹತ್ಯೆ ದಾರಿ ತುಳಿದಿದ್ದಾನೆ. ಹಳೆ ರಾಷ್ಟ್ರೀಯ 13 ಕೃಷ್ಣಾ ಸೇತುವೆಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನ ಶವ ದೊರೆತಿದ್ದು ನಿಯಮಾನುಸಾರ ಶವ ಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಾಗಲಕೋಟ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಎಂ.ಎಚ್.ಎಂ. ಚಿಣ್ಣರು…!

ಉತ್ತರಪ್ರಭ ಸುದ್ದಿಆಲಮಟ್ಟಿ: ಆಲಮಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯ ವಿವಿಧ ಸ್ಪಧೆ೯ಗಳಲ್ಲಿ ಸ್ಥಳೀಯ…

ಶಿಕ್ಷಕ ಸ್ನೇಹಿ ಸಚಿವ ನಾಗೇಶ್ ಗೆ ಅಭಿನಂದಿಸಿದ ಶಿಕ್ಷಕರ ಸಂಘ

ಉತ್ತರಪ್ರಭ ಸುದ್ದಿಆಲಮಟ್ಟಿ: ಶಿಕ್ಷಕ ಸ್ನೇಹಿ ವರ್ಗಾವಣಾ ಕಾಯ್ದೆಯನ್ನು ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡ ಶಾಲಾ…

ಆಲಮಟ್ಟಿ : ಕೋಟಿ ಕಂಠ ಗೀತ ಗಾಯನ ಸಂಭ್ರಮ

ಆಲಮಟ್ಟಿ:  ಇಲ್ಲಿನ ಶಾಲಾ,ಕಾಲೇಜುಗಳಲ್ಲಿ ಶುಕ್ರವಾರ ಕನ್ನಡ ಸಿರಿತನದ ಗೀತೆಗಳು ಮೊಳಗಿದವು. ಕನ್ನಡಮ್ಮನ ಜ್ಞಾನ ದೀಪದ ಗೀತಗಾನ…

ಶೇ 40 ರಷ್ಟು ಮಧ್ಯಂತರ ಪರಿಹಾರಕ್ಕೆ ಆಗ್ರಹ : ಮಾ.1 ರಿಂದ ನೌಕರರ ಮುಷ್ಕರ-ದಳವಾಯಿ

ಆಲಮಟ್ಟಿ: ಶೇ 40 ರಷ್ಟು ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ…