ಪಿಪಿಡಿ ಹಾಸ್ಟೆಲ್ ಬೆಟಗೇರಿ-೨

ಉತ್ತರಪ್ರಭ
ಗದಗ:
ನಿನ್ನೆ ರಾತ್ತಿಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನ ಹತ್ತಿರವಿರುವ ಪೋಸ್ಟ್ ಮೆಟ್ರಿಕ್ ಬಾಯ್ಸ್ ಹಾಸ್ಟೆಲ್ ಬೆಟಗೇರಿ ನಂ. 2ರಲ್ಲಿ ಹಾಸ್ಟೆಲ್ ಒಳಗೆ ನುಗ್ಗಿದ ಮಳೆಯ ನೀರಿನಿಂದಾಗಿ ರಾತ್ರಿಯಿಡಿ ವಿದ್ಯಾರ್ಥಿಗಳು ಮಲಗದೆ ಪರದಾಡಿದ ಘಟನೆ ನಡೆದಿದೆ.

ಹಾಸ್ಟೆಲಿನ ಡೈನಿಂಗ್ ಹಾಲ್ ನಲ್ಲಿ ನುಗ್ಗಿರುವ ನೀರು

ಎಷ್ಟೊ ಬಾರಿ ಮೆಲಧಿಕಾರಿಗಳಿಗೆ ವಿಧ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನ ತಿಳಿಸಿದರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಸಿಗದಿರುವದು ಕಾರಣವೆಂದು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ವಾಸ ಮಾಡುವ ರೂಮಿನಲ್ಲಿ ನುಗ್ಗಿರುವ ನೀರು

ಈ ಕುರಿತು ಹಾಸ್ಟೆಲ್ ವಾರ್ಡನ್ ರೊಂದಿಗೆ ಮಾತನಾಡಿದಾಗ ನಾನು ಕೆಲಸದ ಮೆಲೆ ಬೆಂಗಳೂರಿಗೆ ತೆರಳಿದ್ದು ಇಗತಾನೆ ಆಗಮಿಸಿದ್ದು ಸ್ವಚ್ಚ ಗೊಳಿಸಲು ಕ್ರಮ ಕೈಗೊಳ್ಳುತ್ತೆನೆ ಅಲ್ಲದೆ ಈ ಸಮಸ್ಯೆಯ ಕುರಿತು ಮೆಲಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಹಾಸ್ಟೆಲ್ ಡ್ರೈನೆಜ್ನಲ್ಲಿ ನೀರು ನುಗ್ಗಿ ಡ್ರೈನೆಜ್ ನೀರು ಹಾಸ್ಟೆಲ್ ನಲ್ಲಿ ಬರುತ್ತಿರುವ ದೃಶ್ಯ

ಈಗಲಾದರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ನೋಡಿ ಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಅಪ್ರಾಪ್ತೆ ಅಪಹರಿಸಿದ್ದವನಿಗೂ ಬಂತು ಕೊರೊನಾ – ಪೊಲೀಸರು ಕ್ವಾರಂಟೈನ್!

ಮಂಗಳೂರು : ಅಪ್ರಾಪ್ತೆಯನ್ನು ಅಪಹರಿಸಿ ಮದುವೆಯಾದ ಆರೋಪಿಗೆ ಕೊರೊನಾ ಸೋಂಕು ತಗುಲಿದ ಘಟನೆ ದಕ್ಷಿಣ ಕನ್ನಡ…

ಅರಣ್ಯ ಇಲಾಖೆಯಿಂದ ಸಹಸ್ರಾರು ಸಸಿ ನೆಡುವ ಕಾರ್ಯ ಜೋರು…! ಸಸ್ಯ ಪ್ರೇಮದಲ್ಲಿದೆ ನಮ್ಮೆಲ್ಲರ ಹಿತ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಮನುಷ್ಯನಿಗೆ ಉಸಿರು ಎಷ್ಟು ಮುಖ್ಯವೋ ಜೀವನ ಚೈತ್ರದ ನೆಮ್ಮದಿಗೆ ಸಸ್ಯ ಪ್ರೇಮ…

ನಮ್ಮ ಸಂಸ್ಕೃತಿ ಅನುಸರಿಸಿ : ಪ್ರಹ್ಲಾದ ಹೊಸಳ್ಳಿ

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶದ ಧರ್ಮ, ಸಂಸ್ಕೃತಿಯನ್ನು ಅನುಸರಿಸಿ, ಯುವ ಜನತೆ ಒಕ್ಕಟ್ಟಿನಿಂದ ಸಮಾಜಕ್ಕೆ ಗೌರವ ತರುವಂತಹ ಕಾರ್ಯಚಟುವಟಿಕೆಗಳನ್ನು ಮಾಡಬೇಕೆಂದು ತಾಲೂಕ ಪಂಚಾಯತ ಮಾಜಿ ಸದಸ್ಯ ಪ್ರಹ್ಲಾದ ಹೊಸಳ್ಳಿ ಹೇಳಿದರು.

ಅವ್ಯವಸ್ಥೆಯ ಆಗರವಾದ ಗದಗ ಜಿಲ್ಲಾ ಆಸ್ಪತ್ರೆ; ಬೆಸಿಗೆಯಲ್ಲಿ ಬಾಣಂತಿ ಹಾಗೂ ಹಸುಗುಸುಗಳ ಪರದಾಟ

ಉತ್ತರಪ್ರಭ, ಗದಗ :ಜಿಲ್ಲೆಯ ಪ್ರಮುಖ ಆರೋಗ್ಯ ಕೇಂದ್ರವಾದ ಗದಗ ಜಿಲ್ಲಾ ಆಸ್ಪತ್ರೆ, ಪ್ರಮುಖವಾಗಿ ಬೆಸಿಗೆಯ ದಿನಗಳಲ್ಲಿ…