ಬರಹ : ಗುಲಾಬಚಂದ ಆರ್. ಜಾಧವ, ಚಿತ್ರಕಲಾ ಶಿಕ್ಷಕ, ಆಲಮಟ್ಟಿ
ಆಲಮಟ್ಟಿ :
ಊಟ,ನಿದಿರೆಯ ಪರಿವಿಲ್ಲ. ಕೆಲಸಗಳನ್ನು ನಿಭಾಯಿಸುವರೆಗೆ ವಿಶ್ರಮಿಸುವ ಮಾತೆ ಇಲ್ಲ. ಸದಾ ಕಾಯಕ ತತ್ಪರದಲ್ಲಿ ಮಗ್ನ.ದಣಿವರಿಯದ, ಬಿಡುವಿಲ್ಲದ ಕಾಯಕ ಸೇವಾಭಾವ ನಿಷ್ಠುರತೆಯಿಂದ ಮೇಳೈಸಿಕೊಂಡಿದ್ದಾರೆ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ,ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಆಡಳಿತಾಧಿಕಾರಿ ಮಾನ್ಯಶ್ರೀ ಶಿವಾನಂದ ಪಟ್ಟಣಶೆಟ್ಚರ !


ನಿಜ ! ಅವರು ಅಕ್ಷರಶಃ ದಿಟ್ಟ,ದಕ್ಷ ಆಡಳಿತಾಧಿಕಾರಿ. ಸಹಜತೆಯ ಬದುಕಲ್ಲಿ ನೈಜ ಸಮಾಜಮುಖಿ ಪರವಾದ ಹಲವಾರು ಸ್ವರೂಪದ ಭಿನ್ನ, ವಿಭಿನ್ನ ಕಾಯಕದ ಅನಂದ ಸವಿದು ಸಂತುಷ್ಟಿಭಾವ ಅನುಭವಿಸಿದ್ದಾರೆ.ಅಲ್ಲದೇ ಸಮಾಜಕ್ಕೆ ಧಾರೆಯರೆದಿದ್ದಾರೆ. ಕೈಗೊಂಡ ಕೆಲಸ,ಕಾರ್ಯಗಳನ್ನು ತಮ್ಮ ಆರಾಧ್ಯ ದೇವ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳ ಸ್ಪೂರ್ತಿಯಿಂದ ಪ್ರೇರಿತರಾಗಿ ಪೂಜ್ಯರ ಪ್ರೇರಣೆಯಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕಾಯಕ ಸಮರ್ಪಣಾ ಮನೋಭಾವ ಅನನ್ಯ. ಸಹಜತೆ ಸಾಂಗತ್ಯ ತಮ್ಮ ದೈನಂದಿನ ಕಾಯಕದ ದಿನಚರಿಯಲ್ಲಿ ಅಚ್ಚಳಿಯಾಗಿ ಮೂಡಿಸಿದ್ದಾರೆ ! 64 ರ ಅಸುಪಾಸಿನಲ್ಲಿಯೂ ಕಾಯಕ ನಿಷ್ಠೆ ಮೆರೆದಿದ್ದಾರೆ. ಇಂದಿಗೂ ಅವು ಸಹಜ ಮಾರ್ಗದಲ್ಲಿ ಸಾಗುತ್ತಿದೆ. ನಿಜಕ್ಕೂ ಅನುಕರಣೀಯ !


ಕಾಯಕ ತತ್ವಕ್ಕೆ ಅಪಿ೯ತರಾಗಿ ತಮ್ಮ ಜೀವನ ಮುಡಿಪಾಗಿಟ್ಟಿರುವ ಗದುಗಿನ ಶ್ರೀ ತೋಂಟದಾರ್ಯ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಆಲಮಟ್ಟಿಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಆಡಳಿತಾಧಿಕಾರಿಗಳಾಗಿ ಹಗಲಿರುಳು ಅಮೋಘ ಸೇವಾಭಾವದ ಕೈಂಕರ್ಯ ಗೈದು ಶ್ರೀಮಠ,ಶಿಕ್ಷಣ ಸಂಸ್ಥೆಗಳನ್ನು ಉಚ್ಚಾಯ ಮಟ್ಟದ ಖ್ಯಾತಿಗೆ ಕೊಂಡೊಯ್ಯುವಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿರುವ ವಿಶ್ರಾಂತ ಪ್ರಾಚಾರ್ಯರಾದ ಶ್ರೀ ಶಿವಾನಂದ ಪಟ್ಟಣಶೆಟ್ಚರ ಅವರನ್ನು ಆಲಮಟ್ಟಿಯಲ್ಲಿ ದಿ.25 ರಂದು ಶುಕ್ರವಾರ ಎಂ.ಎಚ್.ಎಂ.ಪ.ಪೂ.ಕಾಲೇಜು ವತಿಯಿಂದ ಏರ್ಪಡಿಸಿರುವ ಅಭಿನಂದನಾ ಸಮಾರಂಭದಲ್ಲಿ ಗೌರವ ಸತ್ಕಾರ ನೀಡಿ ಸನ್ಮಾನಿಸುತ್ತಿರುವ ಪ್ರಯುಕ್ತ ಈ ಲೇಖನ


ಲಿಂ,ತೋಂಟದ ಸಿದ್ದಲಿಂಗ ಶ್ರೀಗಳ ಅನುಯಾಯಿಗಳಾಗಿ, ಅತ್ಯಂತ ಸನಿಹದಿಂದ ಆತ್ಮೀಯ ಒಡನಾಡಿಗಳಾಗಿ ಶ್ರೀಮಠದ ಪ್ರಫುಲ್ ಏಳಿಗೆಗಾಗಿ, ಉನ್ನತ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸಿ ಜೀವ ಹಣ್ಣಾಗಿಸಿದ್ದು ಯಾರು ಮರೆಯುವಂತಿಲ್ಲ.
ಪರಿಪಕ್ವ ವಿಚಾರ,ಅದ್ಭುತ ಸ್ಮರಣಶಕ್ತಿ,ಸೂಕ್ಷ್ಮತೆಯ ಆಲೋಚನಾ ಚಿಂತನೆ, ಗ್ರಹಿಕೆಗಳ ದಿವ್ಯ ಸಮ್ಮೋಹದಲ್ಲಿ ಪ್ರಗತಿ,ಅಭಿವೃದ್ಧಿ, ಸಾಧನೆಯ ತೀರುವುಗಳನ್ನು ಯಶಸ್ವಿಯಾಗಿ ನಿಭಾಯಿಸಿ ತೋಂಟದಾರ್ಯ ಸಂಸ್ಥಾನಮಠಕ್ಕೆ ನವದಿಸೆ ತೋರಿದ್ದಾರೆ. ಶ್ರೀಯುತರ ತೇಜಸ್ ದೀಪ್ತಿ ಅನುಭವಜನ್ಯದಿಂದ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳಗುತ್ತಲಿವೆ. ಬೇರೆಬೇರೆ ಆಯಾಮಗಳಲ್ಲಿ ಸ್ಪರ್ಶನೀಡಿ ಪ್ರಗತಿದತ್ತ ಕೊಂಡೊಯ್ಯುತ್ತಲ್ಲಿದ್ದಾರೆ. ಸರಳ ಸಭ್ಯತೆಯ ಆದರ್ಶಗಳಿಂದ ಪ್ರತಿಪಾದಿಸಿರುವ ನಿಲುವುಗಳು ಮೌಲ್ಯದ ಸಿಂಚನ ಬಿರುತ್ತಲಿವೆ. ಮಾನ್ಯರ ಬದುಕು,ಬವಣೆಯ ಬದುಕಿನ ಪುಟಗಳು ಅಪರೂಪ, ಆದರ್ಶನೀಯವಾಗಿವೆ.
ಉನ್ನತ ಸ್ಥಾನದಲ್ಲಿದ್ದಾಗ್ಯೂ ಹೊಮ್ಮು ಬಿಮ್ಮು ಸನಿಹದಲಿಲ್ಲ. ಎಂದಿಗೂ ಮಾನ ಸಮ್ಮಾನಕ್ಕಾಗಿ ಅಪೇಕ್ಷೆ ಪಟ್ಟವರಲ್ಲ. ಅದಕ್ಕೆ ಆಸ್ಪದ ಕೊಡುವವರಲ್ಲ. ನಿಲಿ೯ಪ್ತಭಾವ,ತೇಜಸ್ ವಿಚಾರ, ಅವರು ಅನುಸರಿಸುವ ಸೂಕ್ಷ್ಮತೆಯ ಬದುಕಿನ ಮಾರ್ಗ ಕಾಯಕ ಪ್ರೀತಿಪೂರ್ವಕ ಮುಕುಟವಾಗಿವೆ. ಹೀಗಾಗಿ ಎಲ್ಲದರಲ್ಲೂ ಶ್ರೇಷ್ಠ ಚಿಂತನೆಯ ಕಣಗಳು ಕಾಯಕ ತತ್ಪರತೆಯಲ್ಲಿ ಮೆರೆದಿವೆ.ಇದರಿಂದ ಮಾನ,ಸಂಮಾನಗಳ ಗರಿ ಶ್ರೀಮಠಕ್ಕೆ ಸ್ಪಶಿ೯ಸಿವೆ.
ಮನವತೆಯ ತುಡಿತ, ಸಮಷ್ಟಿಭಾವ, ಹಗಲು ರಾತ್ರಿಯನ್ನದೆ ಗೈದ ಅಪೂರ್ವ ಕಾರ್ಯ, ತನುಮನದಿ ತೋಂಟದ ಶ್ರೀಮಠಕ್ಕೆ ಟೊಂಕುಕಟ್ಟಿಕೊಂಡು ಅಪಿ೯ಸಿದ ತಪಸ್ಸಿನ ಫಲ ಲೋಕಾರ್ಥವಾಗಿ ವಿನಿಯೋಗಿಸಿ ಲಿಂ,ಸಿದ್ದಲಿಂಗ ಶ್ರೀಗಳು ಕಂಡ ಕನಸುಗಳನ್ನು ಶ್ರೀಯುತರು ಸಾಕಾರಗೊಳಿಸಿ ಧನ್ಯತೆ,ವಿನಮ್ರತೆ ಪದಗಳಿಗೆ ಮತ್ತಿಷ್ಟು ಮೌಲ್ಯಗಂಧ ಲೇಪಿಲಿದ್ದಾರೆ. ಅಮೂಲ್ಯ ಕಾಯಕ ಸೇವೆಯಿಂದ ಸ್ಪೂರ್ತಿಯ ಸೆಲೆಯಾಗಿ,ನೆಲೆಯಾಗಿ ಗದುಗಿನ ಜೆಟಿವಿಪಿಯ ಹಾಗು ಆಲಮಟ್ಟಿ ಎಸ್.ವ್ಹಿ.ವ್ಹಿ.ಸಂಸ್ಥೆಯ ಅಚ್ಚುಮೆಚ್ಚಿನ ಆಡಳಿತಾಧಿಕಾರಿಗಳಾಗಿ. ಕಾರ್ಯದರ್ಶಿಗಳಾಗಿ ಜನಾನುರಾಗಿದ್ದಾರೆ.
ದಯಾಳು,ಪರೋಪಕಾರ ಮನೋಭಾವ, ಚೇತನಪೂರ್ಣ ಮಾರ್ಗದರ್ಶನದ ಸಲಹೆಗಳಿಂದ ಸಂಸ್ಥೆಯ ಅಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರ ಬಳಗಕ್ಕೆ ಪ್ರಕಾಶಪುಂಜವಾಗಿ ಆಭಯ ನೀಡಿದ್ದಾರೆ. ಅಂಧಕಾರದ ತಾಮಸದಲ್ಲಿರುವ ಮನಸ್ಸುಗಳಿಗೆ ಸಹಜತೆಯ ಸನಿಹದ ಸಾನಿದ್ಯ ಕಲ್ಪಿಸಿದ್ದಾರೆ. ಅರಿವಿನ ಹಣತೆಯಲ್ಲಿ ಹೃದಯ ಬಾಂದಾಳದ ಬೆಳಕು ಚೆಲ್ಲಿ ನೆಮ್ಮದಿಯ ಭಾವ ಬಿತ್ತಿರುವ ಅಪರೂಪದ ಆಡಳಿತಾಧಿಕಾರಿಗಳೆಂದು ಹೆಮ್ಮೆಯಿಂದ ಹೇಳಲು ಅತಿಶೋಕ್ತಿ ಎನಿಸದು.
ಶ್ರೀಮಠದಿಂದ ಸಮಾಜಕ್ಕೆ ವಿನಿಯೋಗವಾಗುವಂಥ ಅನೇಕ ಜನೋಪಯೋಗಿ ಕಾರ್ಯಗಳನ್ನು ಅನುಷ್ಟಾನಗೊಳಿಸುವಲ್ಲಿ ಮುಂಚೂಣಿ ವಿಚಾರ ಶ್ರೀಯುತರದ್ದು.
ಲಿಂ, ಸಿದ್ದಲಿಂಗ ಶ್ರೀಗಳ ಹಾಗು ಡಾ.ಸಿದ್ದರಾಮ ಪೂಜ್ಯರ ವಿಚಾರಧಾರೆಯ ಸಿಂಚನದ ಪರಂಪರೆಯಲ್ಲಿ ಸಾಗಿರುವ ಮಾನ್ಯ ಆಡಳಿತಾಧಿಕಾರಿಗಳ ಶ್ರಮ ಫಲಪ್ರದವಾಗಿವೆ. ಎಲ್ಲ ಗುರುಬಳಗ ಸಾಥ್ ನೀಡಿ ಸಹಕರಿಸುತ್ತಿದ್ದಾರೆ.
ತೋಂಟದಾರ್ಯ ಶ್ರೀಮಠಕ್ಕೆ ಮೌಲಿಕವಾದ ಕೊಡುಗೆ ನೀಡಿದ್ದು ಮಠದ ಪರಂಪರೆ ಹಿಂದಿರಿಗಿಸುವಲ್ಲಿ ಶ್ರೀಯುತರವರ ಪಾತ್ರ ಪ್ರಮುಖ. ಹಲವು ಬಾರಿ ಅಧಿಕಾರಯುತವಾಗಿ ನಡೆಯದೇ ಸಂಪ್ರೀತಿಯಿಂದ ಮನ ಗೆದ್ದಿದ್ದಾರೆ.
ಆಡಳಿತಾಧಿಕಾರಿ ಹುದ್ದೆಗೆ ಹೊಸಭಾಷ್ಯೆಯ ತೋರಣ ಕಟ್ಟಿರುವ ಪಟ್ಟಣಶೆಟ್ಚರ ಗುರುಗಳು ಸುದೀರ್ಘ ಕಾಲ ಪ್ರಾಚಾರ್ಯರಾಗಿ ಲಕ್ಷಾಂತರ ವಿಧ್ಯಾರ್ಥಿಗಳ ಸಮೂಹಕ್ಕೆ ಪಾಠ ಪ್ರವಚನ ಗೈದಿದ್ದಾರೆ. ಅವರ ಕೈಯಲ್ಲಿ ವಿದ್ಯಾರ್ಜನೆ ಪೂರೈಸಿರುವ ಅದೆಷ್ಟೋ ವಿದ್ಯಾರ್ಥಿಗಳು ನಾನಾ ಇಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣಶೆಟ್ಚರ ಗುರುಗಳು ಪ್ರಾಚಾರ್ಯರ ಹುದ್ದೆಯಿಂದ 31-05-2018 ರಲ್ಲಿ ಸೇವಾ ನಿವೃತ್ತರಾಗಿ ಪೂರ್ಣ ಪ್ರಮಾಣದಲ್ಲಿ ಶ್ರೀಮಠದ ಮತ್ತಿಷ್ಟು ಉನ್ನತೀಕರಣಕ್ಕೆ ಅಪಿ೯ತರಾಗಿದ್ದಾರೆ. ಪ್ರಾಂಶುಪಾಲರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಬರಹಗಾರರಾಗಿ,ಲೇಖನರಾಗಿ,ಒಳ್ಳೆ ವಾಗ್ಮಿಗಳಾಗಿ ಹೀಗೆ ಅನನ್ಯ ಬಗೆಬಗೆಯ ವಿರಳಾತಿ ಮುಖದರ್ಪಣ ಶ್ರೀ ಶಿವಾನಂದ ಪಟ್ಟಣಶೆಟ್ಚರ ಗುರುಗಳಲ್ಲಿ ಹೊಂಕರಿಸಿದ್ದನ್ನು ಕಾಣಬಹುದು.‌ ಇಂಥ ಬಹುಮುಖ ಸರಳ ಸಜ್ಜನಿಕೆಯ ಎಡಿಎಂ ಅವರನ್ನು ಪಡೆದಿರುವುದೇ ನಮ್ಮಪುಣ್ಯ ಭಾಗ್ಯ! ಆ ಹೆಗ್ಗಳಿಕೆ ಸಹಸ್ರಾರು ಮಿಡಿತಗಳಲ್ಲಿ ಸಂಚಲನವನ್ನುಂಟು ಮಾಡುತ್ತಿವೆ.
ಎಲ್ಲರನ್ನೂ ನಗೆ ಸೌಖ್ಯದಿಂದಲೇ ಗ್ರಹಿಸುವ ಗುಣ ಅವರಲ್ಲಿದೆ. ಜೊತೆಗೆ ಡಾಂಭಿಕತನದ ನಡೆ ನುಡಿ ,ಅಪ್ರಾಮಾಣಿಕತೆ ಬಲು ಸೂಚ್ಯದಿಂದ ಎಲ್ಲವನ್ನು ಗಮನಿಸುತ್ತಿರುತ್ತಾರೆ.ಸಮಯ ಬಂದಾಗ ಬುದ್ದಿವಾದ ಹೇಳಿ ಸರದಾರಿಗೆ ಕರೆತರಲು ಪ್ರಯತ್ನಿಸುತ್ತಾರೆ.‌ ನಂಬಿಕೆಗೆ ನಿಷ್ಟುರಾಗಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಮಾನ್ಯರ ನಡೆನುಡಿ, ಕಾಯಕ ಆದರ್ಶಗಳು ಸ್ಪೂರ್ತಿಯಾಗಿವೆ.

ಜಾಹಿರಾತು
ಜಾಹೀರಾತು
ಜಾಹೀರಾತು


ನೆಮ್ಮದಿಯ ನೆಲೆ ಕಲ್ಪಿಸಿರುವ ತೋಂಟದಾರ್ಯ ಸಂಸ್ಥಾನಮಠ ಜಾತ್ಯಾತೀತ ಪದ ಪೋಷಿಸಿಕೊಂಡು ಜನಪರ ಧೋರಣೆ,ಕಾಳಜಿ ತೋರಿದೆ. ಶ್ರೀಮಠದ ಸೆಲೆಯ ತರಂಗ ಪರಿಮಳಗಳ ಸ್ವಾದಿಷ್ಟ ಇನ್ನಷ್ಟು ಪೂಜ್ಯಲಿಂ, ತೋಂಟದ ಸಿದ್ದಲಿಂಗ ಶ್ರೀಗಳ ಹಾಗು ತೋಂಟದ ಡಾ.ಸಿದ್ದರಾಮ ಶ್ರೀಗಳ ಕೃಪಾಶೀವಾ೯ದ ದಿಂದ ಶಿವಾನಂದ ಪಟ್ಟಣಶೆಟ್ಚರ ಗುರುಗಳಿಂದ ಸಾಗಲಿ. ಧಾಮಿ೯ಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ರಂಗಕ್ಕೆ ಇನ್ನಷ್ಟು,ಮತ್ತಿಷ್ಟು ಮೆರಗು ಲಭಿಸಲಿ.
ಆಲಮಟ್ಟಿಯಲ್ಲಿಂದು ಸಂಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಈ ಅಪರೂಪದ ಕಾಯಕ ತತ್ವದ ಆರಾಧಕ,ಅದಮ್ಯ ಚೈತನ್ಯರಾಗಿರುವ ಶ್ರೀ ಶಿವಾನಂದ ಪಟ್ಟಣಶೆಟ್ಚರ ಅವರನ್ನು ಗುರುಬಳಗ ಸನ್ಮಾನಿಸಿ ಗೌರವಿಸುತ್ತಿರುವದು ಸಂತಸ ಔಚಿತ್ಯಪೂರ್ಣವಾಗಿದೆ.

Leave a Reply

Your email address will not be published. Required fields are marked *

You May Also Like

ಅಮ್ಮನ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ತೆಲಂಗಾಣ: ವಿಧಿ ಎಂಥ ಕ್ರೂರಿ ಅಲ್ಲವೇ..? ಯಾರ ಬಾಳಲ್ಲಿ ಹೇಗೆಲ್ಲಾ ಆಟ ಆಡುತ್ತೋ ಗೊತ್ತೇ ಆಗುವುದಿಲ್ಲ. ಅದರಲ್ಲೂ ಕೊರೊನಾದ ಈ ದಿನಗಳಲ್ಲಿ ಇಂದು ಮಾತಾಡಿದವರು ನಾಳೆ ಇಲ್ಲವಾಗುತ್ತಿದ್ದಾರೆ. ಈಗ ಮಾತಾಡಿದವರು ಆ ಕ್ಷಣಕ್ಕೆ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಕನೋರ್ವ ತಾಯಿಯ ಮೃತದೇಹದ ದುರಿಗೆ ದಾಂಪತ್ಯಕ್ಕೆ ಕಾಲಿಟ್ಟು ಸಪ್ತಪದಿ ತುಳಿದ ಘಟನೆ ನಡೆದಿದೆ. ಈ ಮನಕಲಕುವ ಘಟನೆ ಕಂಡ ಗ್ರಾಮಸ್ಥರು ದೂರದಿಂದಲೇ ಕಣ್ಣೀರಿಟ್ಟಿದ್ದಾರೆ.

ಇಲಿಗಳೂ ಸಾರಾಯಿ ಕುಡಿಯುತ್ತವೆ.

ಆ ಟ್ಯೂಬ್ ನಲ್ಲಿ ಇದ್ದ ಸಾರಾಯಿಯನ್ನು ಮುದ್ದೆ ಮಾಲು ಕೊಠಡಿಯಲ್ಲಿ ಇದ್ದ ಇಲಿಗಳು ಕುಡಿದಿವೆ ಅಂತ ಹೇಳಿದ. ಆ ಕೊಠಡಿಯಲ್ಲಿ ಇಲಿ ಇದ್ದದ್ದು ನಿಜ ಆದರೆ ಇಲಿ ಸಾರಾಯಿ ಕುಡಿದಿದ್ದು ಯಾರು ಗಮನಿಸಿಲ್ಲ. ಆದರೂ ಇಲಿ ಸಾರಾಯಿ ಕುಡಿದಿದ್ದು, ನಿಜ..!

ಕರುಳ ಕುಡಿಯ ಜೋಗುಳದಲಿ

ನೋವು! ಯಾತನೆ! ಯಮಯಾತನೆ! ಇಡೀ ದೇಹವನ್ನೇ ಒಳ್ಳಲ್ಲಿ ಹಾಕಿ ಕುಟ್ಟಿದ ಅನುಭವ. ಸಾಕಪ್ಪ ಸಾಕು ಈ ಜೀವನ ಎನಿಸುವಷ್ಟು ವೈರಾಗ್ಯ.ಈ ಬದುಕೇ ಬೇಡ. ತಡೆದುಕೊಳ್ಳಲಾರೆ… ಸಹಿಸಲಾರೆ… ಅನುಭವಿಸಲಾರೆ. ಕಣ್ಣು ಬಿಡಲೂ ತ್ರಾಣವಿಲ್ಲ. ಯಾವುದೋ ಕೈಗಳು ಬಂದು ತಡವುತ್ತಿವೆ. ಹಣೆ ಮುಟ್ಟಿ ನೋಡಿದ ಸ್ಪರ್ಶದ ಅನುಭವ. ಆದರೂ ಕಣ್ಗಳು ಮೆತ್ತಿಕೊಂಡಿವೆ. ನರಳುವುದು, ಮುಲುಗುವುದು, ಒದ್ದಾಡುವುದ ಬಿಟ್ಟರೆ ಏನೂ ಮಾಡಲಾಗದ ಅಸಹಾಯಕತೆ.

ಮದ್ಯ ಮಾರಾಟದ ನಿರ್ಧಾರ ಸದ್ಯಕ್ಕೆ ಇಲ್ವಂತೆ

ಬೆಂಗಳೂರು : ಸದ್ಯ ಮದ್ಯ ಮಾರಾಟ ಮಾಡುವುದಿಲ್ಲ ಎಂಬ ಸುಳಿವನ್ನು ಸಚಿವ ಆರ್. ಅಶೋಕ್ ಹೇಳಿದ್ದಾರೆ.…