ರೋಣ: ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯಿಂದ ಕೊರೋನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಈ ವೇಳೆಯಲ್ಲಿ ಗ್ರಾಮಸ್ಥರಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣೆ ಮಾಡಿ, ಯಾರು ಅನಗತ್ಯವಾಗಿ ಹೊರಗಡೆ ಬರಬೇಡಿ, ಅನಿವಾರ್ಯ ಕಾರಣದಿಂದ ಹೊರಗಡೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಹಾಗೂ ಮರಳಿ ಮನೆಗೆ ಹೋದ ತಕ್ಷಣ ಕೈ ಕಾಲುಗಳನ್ನು ಸ್ವಚ್ಛವಾಗಿ ಸೋಪ್ ಬಳಸಿ ತೊಳೆದುಕೊಳ್ಳಿ ಎಂದು ತಿಳಿ ಹೇಳಿದರು. ಅಷ್ಟೇ ಅಲ್ಲದೇ ಧ್ವನಿ ವರ್ಧಕದ ಮುಖಾಂತರ ಜಾಗೃತಿ ಮೂಡಿಸುವದರೊಂದಿಗೆ ಮಹಾಮಾರಿ ಕರೋನ ನಿಯಂತ್ರಣಕ್ಕೆ ಮುಂದಾದರು.
ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಬೇಕು. ಹೋಟೆಲ್ ಗಳು ಬಂದ್ ಮಾಡಬೇಕು. ಯಾರಾದ್ರೂ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನು ಕಟ್ಟೆಗಳ ಮೇಲೆ ಸಾಮಾಜಿಕ ಅಂತರ ಮರೆತು ಯಾರು ಕೂರದಂತೆ ಸುಟ್ಟ ಎಣ್ಣೆಯನ್ನು ಹಾಕಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನೇತ್ರಾ ಕಡಿಯವರ, ಉಪಾಧ್ಯಕ್ಷ ಲಲಿತಾ ಕೊರನವರ, ಸದಸ್ಯರಾದ ಜಿ.ಎಸ್. ಮೊಂಡಸೊಪ್ಪಿ, ಆರ್.ಬಿ.ಗೂಳಪ್ಪನವರ, ಎಮ್.ಎಸ್. ಉಮಚಗಿ, ಬಿ.ಸಿ.ಹಿರೇಕಲ್ಲಪ್ಪನವರ, ಕಾರ್ಯದರ್ಶಿ ಎಮ್.ಎಸ್. ಜಂಗಣ್ಣವರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಎಸ್.ಬಿ.ಪಾಟೀಲ, ಆರೋಗ್ಯ ಸಿಬ್ಬಂದಿ ಯಶೋಧ ಚೆನ್ನಿ, ಬಸವಂತಪ್ಪ ತಳವಾರ, ಅಂಗನವಾಡಿ ಕಾರ್ಯಕರ್ತೆ ಕವಿತಾ ತಳವಾರ್, ನಾಗಮ್ಮ ನವಚಿದ್ರ, ಗುರುಶಾಂತಮ್ಮ ಹಿರೇಮಠ, ಶಾಂತಾ ಪಾಟೀಲ, ಎಎಸ್ಐ ಎಮ್.ಎಫ್. ಹೆರಕಲ್, ಪೊಲೀಸ್ ಪೇದೆ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.