ಉತ್ತರಪ್ರಭ ಸುದ್ದಿ
ಶಿರಹಟ್ಟಿ: ಸಾಲದ ಹೊರೆ ತಾಳಲಾರದೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ ರೈತನೊಬ್ಬ ನೇಣಿಗೆ ಶರಣಾದ ಘಟನೆ ಗುರುವಾರ ಜರುಗಿದೆ.
ಗ್ರಾಮದ ಪ್ರವೀಣಗೌಡ ನಿಂಗನಗೌಡ ಪಾಟೀಲ(೪೦) ಮೃತ ದುರ್ದೈವಿ. ಕಳೆದ ೫-೬ ವರ್ಷದಿಂದ ಬೆಳ್ಳಟ್ಟಿಯ ಕೆ.ವಿ.ಜಿ, ಲಕ್ಷ್ಮೇಶ್ವರದ ಪಿಎಲ್ಡಿ, ಮುಂಡರಗಿಯ ಐಡಿಎಫ್ಸಿ ಬ್ಯಾಂಕ್ಗಳಲ್ಲಿ ಸುಮಾರು ೬-೭ ಲಕ್ಷ ಬೆಳೆಸಾಲ ತೆಗೆದುಕೊಂಡಿದ್ದ. ಬೆಳೆ ಚೆನ್ನಾಗಿ ಬಾರದೆ ಮಾಡಿದ ಸಾಲವನ್ನು ಹೇಗೆ ತಿರಿಸುವುದು ಎಂದು ಮನನೊಂದು ತನ್ನ ಹೊಲದಲ್ಲಿರುವ ಗಿಡಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದು, ಈ ಕುರಿತು ಶಿರಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.