ಉತ್ತರಪ್ರಭ

ಗದಗ: ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಗದಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶ, ವಿವೇಕ ವೇದಿಕೆ, ಯೂತ್ ಫಾರ್ ಚೇಂಜ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಜಿಲ್ಲಾಮಟ್ಟದ ನೆರೆಹೊರೆಯ ಸಂಸತ್ತನ್ನು ದಿನಾಂಕ 10 ಮಾರ್ಚ್ 2022 ರಂದು ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಆಯೋಜಿಸಲಾಗಿತ್ತು,

ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಎಂ ಸುಂದರೇಶ್ ಬಾಬು ಐಎಎಸ್ ಜಿಲ್ಲಾಧಿಕಾರಿಗಳು ಗದಗ್, ಶ್ರೀ ರವಿ ಗುಂಜೀಕರ್ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ಗದಗ್ ಡಾ. ಬಾಲಾಜಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಯೂತ್ ಅಸೋಸಿಯೇಷನ್ ಫೆಡರೇಶನ್ ರವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಂ. ಎನ್. ನಟರಾಜ್ ರವರು ನೆರವೇರಿಸಿ ಮಾತನಾಡುತ್ತಾ ನೆರೆಹೊರೆಯ ಸಂಸತ್ತಿನ ರೂಪುರೇಷ ಹಾಗೂ ಅದರ ವಿಶೇಷತೆ ಮತ್ತು ಉದ್ದೇಶಗಳ ಕುರಿತು ಯುವಕ ಮಂಡಳಿಗಳ ಸದಸ್ಯರು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ವಿಷ್ಣುಕಾಂತ ಎಸ್ ಚಟಪಲ್ಲಿ ಕುಲಪತಿಗಳು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಕಾರ್ಯಕ್ರಮದ ಯಶಸ್ಸಿಗೆ ಹಾಗೂ ದೇಶದ ಬಲಾಢ್ಯ ಬೆಳವಣಿಗೆಗೆ ಯುವಕರೆಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಜಯಂತ ಕೆ. ಎಸ್. ಪ್ರಾದೇಶಿಕ ಪ್ರಮುಖರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್. ಉತ್ತರ ಕರ್ನಾಟಕ, ಶ್ರೀ ಮಲ್ಲಿಕಾರ್ಜುನ್ ರೆಡ್ಡೇರ ಅಧ್ಯಕ್ಷರು. ವರದಶ್ರೀ ಫೌಂಡೇಶನ್, ಶ್ರೀ ಪ್ರಭಾಕರ್ ದೇಶಪಾಂಡೆ, ಸದಸ್ಯರು ಗ್ರಾಮವಿಕಾಸ ಪ್ರಾಂತ್ ಹಾಗೂ ಡಾ. ರಾಜೇಶ್ ಭದ್ರ ಶೆಟ್ಟಿ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಯುವಜನ ಮತ್ತು ಸಮುದಾಯ ಅಭಿವೃದ್ಧಿ ವಿಷಯದ ಕುರಿತು ಮಾತನಾಡಿದ ಶ್ರೀ ಜಯಂತ್ ಕೆ.ಎಸ್ ರವರು ಸಮುದಾಯದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತಿ ಅವಶ್ಯಕವಾದದ್ದು ಭಾರತವು ಪ್ರಪಂಚದಲ್ಲಿ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿದ್ದು ಇದು ಸಮುದಾಯದ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಹೇಳಿದರು. ಯುವ ಭಾರತ ಬಲಾಢ್ಯ ಭಾರತ ಎಂಬ ವಿಷಯದ ಕುರಿತು ವಿಷಯವನ್ನು ಮಂಡಿಸಿದ ಶ್ರೀ ಮಲ್ಲಿಕಾರ್ಜುನ ರೆಡ್ಡೇರ ರವರು ದೇಶದ ಸಂಸತ್ತಿನಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನಡೆಯುವ ಚರ್ಚೆ ಗಳಂತೆ ಈ ಕಾರ್ಯಕ್ರಮದಲ್ಲಿ ನಡೆದ ಚರ್ಚೆಗಳು ಕೂಡ ಯುವಜನತೆಯಲ್ಲಿ ಸ್ಫೂರ್ತಿಯನ್ನು ಮೂಡಿಸುವುದರ ಮೂಲಕ ದೇಶದ ಯುವಶಕ್ತಿಯ ಬಳಕೆಯಿಂದಾಗಿ ದೇಶ ವಿಶ್ವ ನಾಯಕ ನಾಗಿಸುವ ಕಾರ್ಯವಾಗಬೇಕು ಎಂದು ಹೇಳಿದರು. ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ವಿಷಯದ ಕುರಿತು ವಿಷಯವನ್ನು ಮಂಡಿಸಿದ ಶ್ರೀ ಪ್ರಭಾಕರ ದೇಶಪಾಂಡೆಯವರು ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದು ಇಲ್ಲಿನ ಯುವಜನತೆ ಗ್ರಾಮೀಣ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು ಗ್ರಾಮೀಣ ಅಭಿವೃದ್ಧಿಯಲ್ಲಿ ಯುವಜನತೆ ಹಾಗೂ ಯುವಜನ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಡಾ. ರಾಜೇಶ್ ಭದ್ರ ಶೆಟ್ಟಿ ಅವರು ದೇಸಿ ಆಯುರ್ವೇದ ಹಾಗೂ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ವಿಸ್ತೃತವಾಗಿ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು ಪ್ರೊ ಬಸವರಾಜ್ ಎಲ್. ಲಕ್ಕಣ್ಣವರ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಶ್ರೀ ಪ್ರಶಾಂತ್ ಮೇರವಾಡೆ, ಕು. ರಂಜಿನಿ ಎನ್ . ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ಗದಗ ಶ್ರೀ ಲಿಂಗರಾಜ ನಿಡುವಣಿ, ವಿವೇಕ ವೇದಿಕೆ ಗದಗ್, ಯೂತ್ ಫಾರ್ ಚೇಂಜ್ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಸದಸ್ಯರು, ವಿಶ್ವವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು ಕು. ನಮಿತಾ ಎಂ. ವೈ. ಶ್ರೀ ಪ್ರಕಾಶ್ ಮಾಚೇನಹಳ್ಳಿ ಶ್ರೀ ಅಭಿಷೇಕ್ ಎಚ್. ಈ. ನೆಹರೂ ಯುವ ಕೇಂದ್ರದ ಸ್ವಯಂಸೇವಕರು, ಸಿಬ್ಬಂದಿಗಳು, ಗದಗ ಜಿಲ್ಲೆಯ ಹಲವು ಯುವಕ ಸಂಸ್ಥೆಗಳ ಸದಸ್ಯರು ವಿಶ್ವವಿದ್ಯಾಲಯದ ಅಧಿಕಾರಿವರ್ಗ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಚಂದ್ರಪ್ಪ ಬಾರಂಗಿ, ಕನ್ನಡ ಪ್ರಾಧ್ಯಾಪಕರು ನಿರೂಪಿಸಿದರು.

Leave a Reply

Your email address will not be published. Required fields are marked *

You May Also Like

ಶಿವಯೋಗಿ ಸಿದ್ಧರಾಮೇಶ್ವರರು ಕಾಯಕ ತತ್ವದ ಪ್ರತಿಪಾದಕರು:ಜಿ.ಎಸ್.ಪಾಟೀಲ

ಪಟ್ಟಣದ ಭೋವಿ ಸಮಾಜದವರು ಹಮ್ಮಿಕೊಂಡ ಸಿದ್ದರಾಮಶ್ವರ ಜಯಂತಿ ಉತ್ತರಪ್ರಭ ನರೆಗಲ್ಲ: “ಶರಣರಲ್ಲಿ ಬಸವಣ್ಣವರಷ್ಟೇ ಪ್ರಮುಖರಾಗಿದ್ದವರು ಶ್ರೀ…

ದಿ. ಮಲ್ಲನಗೌಡ ಫ ಪಾಟೀಲ ಅವರ ದ್ವೀತಿಯ ಪುಣ್ಯಸ್ಮರಣೆಯಲ್ಲಿ ಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ

ಪುಣ್ಯಾಶ್ರಮದ ಗುರುಬಂಧುಗಳಾದ ಸಾಸರವಾಡ ಗ್ರಾಮದ ಮಲ್ಲನಗೌಡ ಪಾಟೀಲರು ಉತ್ತಮ ಸಂಗೀತ ಕಲಾವಿದರಾಗಿದ್ದರು. ಜೊತೆಗೆ ಸಾತ್ವಿಕ ಗುಣವುಳ್ಳವರಾಗಿದ್ದರು. ಅವರು ಸರಳತೆ ಹಾಗೂ ಆದರ್ಶಪ್ರಾಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಪುಣ್ಯಸ್ಮರಣೆಯ ನಿಮಿತ್ಯವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಪೂಜ್ಯ ಕಲ್ಲಯ್ಯಜ್ಜನವರು ಹೇಳಿದರು.

ವಿದ್ಯುತ್ ಸ್ಪರ್ಶ ವ್ಯಕ್ತಿ ಸಾವು

ಉತ್ತರಪ್ರಭ ಮುಳಗುಂದ: ಸಮೀಪದ ಬಸಾಪೂರ ಗ್ರಾಮದ ಹತ್ತಿರದ ತೋಟದಲ್ಲಿ ನೀರು ಹಾಯಿಸಲು ಮೋಟರ್ ಸ್ವಿಚ್ ಹಾಕುವ…

ಗದಗ, ನರಗುಂದ, ರೋಣ, ಮುಂಡರಗಿ ತಾಲೂಕಿನಲ್ಲಿಂದು ಸೋಂಕಿರು ಪತ್ತೆ

ಗದಗ: ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಮದೆನಗುಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ(ಪಿ-23121)…