ಮುಳಗುಂದ : ಮಕ್ಕಳ ಮತ್ತು ಯುವಕರಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗ ತಡೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವದು ಮುಖ್ಯವಾಗಿದ್ದು, ಆಯುರ್ವೇದದಲ್ಲಿ ಉಲ್ಲೇಖಿಸಿರುವ ಅಮೃತ ಬಳ್ಳಿ, ಬೆಟ್ಟದ ನೆಲ್ಲಿ, ಹಿರೇಮದ್ದಿನ ಬೇರು ಸೇರಿದಂತೆ ಮನೆಯಲ್ಲಿ ಲಭ್ಯವಿರುವ ಆಯುರ್ವೇದ ಗುಣವುಳ್ಳ ಔಷಧಗಳನ್ನ ಬಳಸಿಕೊಳ್ಳಬೇಕು. ಎಂದು ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಎಸ್.ಎನ್.ಬೆಳವಡಿ ಹೇಳಿದರು.
ಅವರು ಇಲ್ಲಿನ ಕೆ.ಎಸ್.ಎಸ್. ಪ್ರೌಢ ಶಾಲೆಯಲ್ಲಿ ಅಮೃತ ಕಾ ಆಜಾದಿ ಮಹೋತ್ಸವದ ಅಂಗವಾಗಿ ಗದಗ ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸ್ನಾತಕೋತ್ತರ ಸಂಶೋಧನಾ ಕೇಂದ್ರದ ವತಿಯಿಂದ ಸೋಮವಾರ ನಡೆದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಆಯುರ್ವೇದ ಸಸ್ಯಗಳ ಮಾಹಿತಿ ಮತ್ತು ಬಳಕೆ ವಿಧಾನ ಕುರಿತು ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.


ಡಾ. ಅಶ್ವಿನಿ ಸಜ್ಜನರ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆÉ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು. ಎಂದರು. ನಂತರ ಆಯುರ್ವೇದ ಔಷಧ ಗುಣವುಳ್ಳ ಹತ್ತಾರು ಬಗೆಯ ಸಸ್ಯಗಳ ಪ್ರದರ್ಶನ ಹಾಗೂ ವಿದ್ಯಾರ್ಥಿಳ ಆರೋಗ್ಯ ತಪಾಸಣೆ ನಡೆಯಿತು.


ಈ ಸಂದರ್ಭದಲ್ಲಿ ಡಾ.ಎಂ.ಡಿ.ಸಮುದ್ರಿ, ಡಾ.ಕುಮಾರ ಚೌಡಪ್ಪನವರ, ಡಾ.ಯು.ವಿ.ಪುರದ, ಡಾ.ಮಮತಾ ಕಟಾವಕರ, ಪ್ರಾಚಾರ್ಯ ಡಿ.ವೈ.ಹುಡೆದ, ಶಿಕ್ಷಕರಾದ ಎಸ್.ವೈ.ಕುರಿ, ಎಸ್.ಎ.ಯಳವತ್ತಿ, ಜಿ.ಬಿ.ಮುಳಗುಂದ ಇದ್ದರು.

Leave a Reply

Your email address will not be published. Required fields are marked *

You May Also Like

ಕೋವಿಡ್ ನಿಯಂತ್ರಣಕ್ಕಾಗಿ ನೂತನ ನಿಯಮಗಳು ಜಾರಿ

ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡನೇ ಅಲೆ ಬರದಂತೆ ನಿಯಂತ್ರಿಸಲು ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಯ ಗುರಿಯನ್ನು ಹೆಚ್ಚಿಸಲಾಗಿದೆ.

ಮಗಳ ಬದುಕು ಸರಿ ಮಾಡಲು ಬಂದ ಅತ್ತೆಯ ಮೇಲೆಯೇ ಕಲ್ಲು ಹಾಕಿದ ವ್ಯಕ್ತಿ!

ಕಲಬುರಗಿ : ಪತ್ನಿಯ ವಿಷಯದಲ್ಲಿ ನಡೆದ ಗಲಾಟೆ ಅತ್ತೆಯ ಸಾವಿನಲ್ಲಿ ಅಂತ್ಯವಾಗಿದೆ.

ಕುರಿ ಮತ್ತು ಮೇಕೆಗಳ ಅನುಗ್ರಹ ಯೋಜನೆ ಮುಂದುವರೆಸಲು ಮನವಿ

ಕುರಿಗಾರರಿಗೆ ಅನುಕೂಲಕರವಾಗಿದ್ದ ಅನುಗ್ರಹ ಯೋಜನೆಯನ್ನು ಮುಂದುವರೆಸಬೇಕು. ಜೊತೆಗೆ ಯೋಜನೆಯಡಿ ಬಾಕಿ ಇರುವ ಇರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನರೆಗಲ್ ಗಾರ್ಡನ್ ಕಥೆ: ಲಕ್ಷ ಖರ್ಚು ಮಾಡಿದರು ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ..?

ಗದಗ: ಜಿಲ್ಲೆಯ ನರೇಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಶ್ರೀ ಅನ್ನದಾನೇಶ್ವರ ಕಾಲೆಜು ಪಕ್ಕದಲ್ಲಿ ನಾಲ್ಕು ವರ್ಷಗಳ…