ಗದಗ: ಜಿಲ್ಲೆಯ ನರೇಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಶ್ರೀ ಅನ್ನದಾನೇಶ್ವರ ಕಾಲೆಜು ಪಕ್ಕದಲ್ಲಿ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿದ್ದ ಉದ್ಯಾನವನ ಇದ್ದು ಇಲ್ಲದಂತಾಗಿದೆ. ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಗೆ ನಿತ್ಯವೂ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲೆಯಲು ಬರುತ್ತಾರೆ. ಈ ಶಿಕ್ಷಣ ಸಂಸ್ಥೆಯಲ್ಲಿ ಹಲವು ಅಂಗ ಸಂಸ್ಥೆಗಳಿವೆ. ಇದೇ ಉದ್ಯಾನವನ ಎದರಿಗೆ ಮೂರ್ನಾಲ್ಕು ವಿದ್ಯಾರ್ಥಿನಿಯರ ವಸತಿ ನಿಲಯಗಳು ಇವೆ. ಹಾಗೂ ಕಿವುಡ & ಮೂಕರ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಇದೆ ಇವರಿಗೆಲ್ಲ ಪ್ರಶಾಂತ ವಾತವರಣ ಸಿಗಲಿ. ಬಿಡುವಿನ ಸಮಯವನ್ನು ಉದ್ಯಾನವನದಲ್ಲಿ ಕಳೆಯಲಿ ಹಾಗೂ 17ನೇ ವಾರ್ಡಿನ ನಾಗರಿಕರ ಆರೋಗ್ಯಕ್ಕೆ ಪೂರಕವಾಗಲಿ ಎಂದು 2016ನೇ ಈ ಉದ್ಯಾನವನ ನಿರ್ಮಿಸಲಾಯಿತು.

ಲಕ್ಷಲಕ್ಷ ಖರ್ಚು ನೀರಿನಲ್ಲಿ ಹೋಮ
ಅಂದಾಜು ವೆಚ್ಚ 11.60 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಉದ್ಯಾನವನದಲ್ಲಿ ಒಂದು ಗಿಡವೂ ಬೆಳೆದಿಲ್ಲ. ಹಾಗೂ ಬೆಳೆಯಲು ನೀರಿನ ವ್ಯವಸ್ಥೆಯೂ ಇಲ್ಲ. ಹೀಗಾಗಿ ಎಲ್ಲಿಯೂ ಹಸಿರಿಲ್ಲ. ಕುಳಿತುಕೊಳ್ಳಲು ಹಾಕಿದ ಕುರ್ಚಿಗಳು ಇಲ್ಲ. ಕಸ, ಕಡ್ಡಿ ಜಾಲಿಕಂಟಿ ಬೆಳೆದು ಈಗ ಈ ಉದ್ಯಾನವನವೂ ಹಂದಿಗಳ, ದನಕರುಗಳ ತಂಗುದಾಣವಾಗಿದೆ.

ಹಲವು ವರ್ಷಗಳೇ ಕಳೆದರು ಒಂದು ಗಿಡವನ್ನು ನೆಡದ ಸಿಬ್ಬಂದಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಉದ್ಯಾನವನ ಹಚ್ಚಹರಿಸಿನಿಂದ ಕಂಗೊಳಿಸುವಂತೆ ಆಗಲಿ

– ಡಾ. ಶಿವಕುಮಾರ ಮಹಾಸ್ವಾಮಿಗಳು, ಪಿಠಾಧಿಪತಿಗಳು ಸಿದ್ದಕೊಳ್ಳಮಠ


ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಸಾರ್ವಜನಿಕರ ಹಣದಿಂದ ನಿರ್ಮಿಸಲ್ಪಟ್ಟಿದ್ದ ಉದ್ಯಾನವನ ಇಂದು ಪಾಳು ಬಿಳಲು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬುದು ಸ್ಥಳೀಯರ ಆರೋಪ.

ಹಲವು ವರ್ಷಗಳೇ ಕಳೆದರು ಒಂದು ಗಿಡವನ್ನು ನೆಡದ ಸಿಬ್ಬಂದಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಉದ್ಯಾನವನ ಹಚ್ಚಹರಿಸಿನಿಂದ ಕಂಗೊಳಿಸುವಂತೆ ಆಗಲಿ
– ಡಾ. ಶಿವಕುಮಾರ ಮಹಾಸ್ವಾಮಿಗಳು, ಪಿಠಾಧಿಪತಿಗಳು ಸಿದ್ದಕೊಳ್ಳಮಠ

Leave a Reply

Your email address will not be published. Required fields are marked *

You May Also Like

ಬಸ್ ನಿಲ್ದಾಣದಲ್ಲಿ ಶೌಚಾಲಯ ಅವ್ಯವಸ್ಥೆ ಸಾರಿಗೆ ಅಧಿಕಾರಿ ತರಾಟೆಗೆ

ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಅವ್ಯವಸ್ಥೆಯನ್ನು ಸಾರಿಗೆ ಇಲಾಖೆ ಸಂಚಾರಿ ನಿರೀಕ್ಷಕರಿಗೆ ತೋರಿಸುವ ಮೂಲತ ಜೈ ಭೀಮ ಆರ್ಮಿ ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…

ಸೋಂಕು ಉಲ್ಬಣ: ಬೆಂಗಳೂರಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್!

ಜುಲೈ 14ರಿಂದ 7 ದಿನ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರ ಸಿಎಂ ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಬೆಳಗಾವಿ : ಬೆಳಗಾವಿ ನಮ್ಮದು. ಬೆಳಗಾವಿಯ ಒಂದಿಂಚು ಜಾಗ ಬಿಟ್ಟುಕೊಡಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಹಾರಾಷ್ಟ್ರ ಸಿಎಂ ಗೆ ನೀಡಿದ್ದಾರೆ.