ಗದಗ: ಕುರಿಗಾರರಿಗೆ ಅನುಕೂಲಕರವಾಗಿದ್ದ ಅನುಗ್ರಹ ಯೋಜನೆಯನ್ನು ಮುಂದುವರೆಸಬೇಕು. ಜೊತೆಗೆ ಯೋಜನೆಯಡಿ ಬಾಕಿ ಇರುವ ಇರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕುರಿಗಾರರು ಕುರಿ, ಮೇಕೆ ಸಾಕಾನಣಿಕೆಯಿಂದ ತಮ್ಮ ಬದುಕನ್ನು ಜಿಲ್ಲೆಯಿಂದ ಜಿಲ್ಲೆಗೆ ತಾಲೂಕಿನಿಂದ ತಾಲೂಕಿಗೆ ಹೀಗೆ ಕುರಿಗಳ ಹಿಂಡನ್ನು ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ಕುರಿಗಳು ಯಾವುದೇ ರೋಗಕ್ಕೆ ತುತ್ತಾಗಿ ಮರಣ ಹೊಂದಿದಲ್ಲಿ ಕುರಿಗಾರರಿಗೆ ಪರಿಹಾರ ೊದಗಿಸುವ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿತ್ತು.  

ಯೋಜನೆಯಿಂದ ಸಾವನ್ನಪ್ಪಿದ ಕುರಿಗಳಿಗೆ 5000 ರೂಪಾಯಿ ಸಹಾಯಧನ ನೀಡಿತ್ತು. ಇದರಿಂದ ಇದರಿಂದ ಕುರಿಗಾರರಿಗೆ ಅಲ್ಪಮಟ್ಟಿಗಾದರೂ ಅನುಕೂಲವಾಗಿತ್ತು. ಆದರೆ ಈ ಯೋಜನೆಯಲ್ಲಿ 3 ಕೋಟಿ 62 ಲಕ್ಷ ಅನುದಾನ ನೀಡುವುದು ಬಾಕಿಯಿದೆ. ಈ ಅನುದಾನವನ್ನು ಇತ್ತಿಚಿಗೆ ವಿವಿಧ ರೋಗಗಳಿಂದ ಸಾವನ್ನಪ್ಪಿದ ಕುರಿ ಮತ್ತು ಮೇಕೆಗಳಿಗೆ ಅನುದಾನ ಬಿಡುಗಡೆ ಮಾಡಿಕೊಡಬೇಕು. ಹಾಗೂ ಇತ್ತಿಚಿನ ಅವಧಿಯಲ್ಲಿ ಈ ಅನುಗ್ರಹ ಯೋಜನೆಯನ್ನು ಬಂದ್ ಮಾಡಿ ಕುರಿಗಾರರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಕೂಡಲೇ ಯೋಜನೆ ಮುಂದುವರೆಸುವ ಮೂಲಕ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

ಈ ವೇಳೆ ಮಂಜುನಾಥ ಜಡಿ, ಎಸ್.ಜಿ.ಹೇಮಂತ್, ರವಿ ಹುಡೇದ್, ಲಕ್ಷ್ಮಣ್ ಜಂತ್ಲಿ, ಕುಮಾರ್ ಮಾರನಬಸರಿ, ರವಿ ಜೋಗಿನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.  

Leave a Reply

Your email address will not be published. Required fields are marked *

You May Also Like

ಕೋವಿಡ್ ಸೋಂಕು ನಿಯಂತ್ರಣ:ಹೆಚ್ಚುವರಿ ನಿಯಂತ್ರಣ ಕ್ರಮಗಳ ಪಾಲನೆಗೆ ಜಿಲ್ಲಾಧಿಕಾರಿಗಳ ಆದೇಶ

ಗದಗ : ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಿಲ್ಲಾದ್ಯಂತ…

ಹುಬ್ಬಳ್ಳಿ ಗುರುಸ್ವಾಮಿ ಬೆತ್ತಲೆ ವಿಡಿಯೋಗೆ ಸಿಕ್ಕ ಸ್ಪಷ್ಟನೆ!

ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿಂದು 1843 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1843 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 25317…

ತಾಂಡಾ ಅಭಿವೃದ್ಧಿ ನಿಗಮದ ಉಪಯೋಗ ಪಡೆದುಕೊಳ್ಳಿ: ಶಾಸಕ ರಾಮಣ್ಣ ಲಮಾಣಿ

ಪ್ರತಿಯೊಂದು ಗ್ರಾಮಗಳಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಸಿಸಿ ರಸ್ತೆ, ಸಮುದಾಯ ಭವನ ಸೇರಿದಂತೆ ಅನೇಕ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು ತಾಂಡಾದ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.