ಮಸ್ಕಿ: ಜೂನ್ 05 ಲಾಕ್ ಡೌನ್ ಪ್ರಯುಕ್ತ ನಮ್ಮ ಟ್ರಸ್ಟ್ ವತಿಯಿಂದ ಮಸ್ಕಿ ತಾಲೂಕಿನ ಕೆಲವೊಂದು ಆಯ್ದ ಹಳ್ಳಿಗಳಾದ ಸಾನಬಾಳ,ರಾಮಲದಿನ್ನಿ, ಜಿನ್ನಾಪೂರ, ಹಿರೇ ಕಡಬೂರು, ಮಸ್ಕಿ,ನಾಗರಬೆಂಚಿ, ಮೆದಿಕಿನಾಳ,ಅಂತರಗಂಗಿ, ಹಸಮಕಲ್, ದೀನಸಮುದ್ರ, ಕಣ್ಣೂರು, ಹೆಡಗಿನಾಳ, ಮುದಬಾಳ, ಕಾಟಗಲ್, ಹೀಗೆ 50 ಜನ ಫಲಾನುಭವಿಗಳನ್ನೂ ಗುರುತಿಸಿ ಮತ್ತು ಯಾರಿಗೆ ಪಡಿತರ ಚೀಟಿ ಇರುವುದಿಲ್ಲವೋ ಅಂತವೃದ್ಧರು, ಅಂಗವಿಕಲರು,ವಿಧವೆಯರಿಗೆ ಹಾಗೂ ಖಾಸಗಿ ಶಾಲೆಯ ಶಿಕ್ಷಕರಿಗೆ 25ಕೆಜಿ ಅಕ್ಕಿ, 2ಕೆಜಿ ಸಕ್ಕರೆ, 2ಕೆಜಿ ಬೇಳೆ, 250ಗ್ರಾಂ ಚಹಾ ಪುಡಿ, ಕಾರದ ಪುಡಿ, ಜೀರಿಗೆ ಮತ್ತು ಸಾಸಿವೆ ಹೀಗೆ ಒಂದು ತಿಂಗಳ ಮಟ್ಟಿಗೆ ಕುಟುಂಬಗಳಿಗೆ ತಗಲುವ ಆಹಾರ ಧಾನ್ಯದ ಕಿಟ್ ಗಳನ್ನೂ ಮಸ್ಕಿಯ ಸೇಂಟ್ ಜಾನ್ಸ್ ಚರ್ಚ್ ಶಾಲೆಯ ಆವರಣದಲ್ಲಿ ಹಿಂದು, ಮುಸ್ಲಿಂ ಕ್ರೈಸ್ತ ಹಾಗೆಯೇ ವಿವಿಧ ಧರ್ಮದ ಮುಖಂಡರ ನೇತೃತ್ವದಲ್ಲಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಬಲರಾಮಕಟ್ಟಿಮನಿ, ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಥೋಡ್, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ , ಶ್ರೀ ಮಹಾಂತ ಸ್ವಾಮೀಜಿ ಕಲ್ಯಾಣ್ ಆಶ್ರಮ ಮುದ್ಗಲ್, ಜಿಲಾನಿ ಖಾಜಿ ಮುಸ್ಲಿಂ ಧರ್ಮ ಗುರುಗಳು ಮಸ್ಕಿ, ಸಿಸ್ಟರ್ ಲಿಲ್ಲಿ ಆಮರ ಪ್ರೇಮಾಶ್ರಮ ಮಸ್ಕಿ, ಚಿನ್ನಪ್ಪ ಹೆಡಗಿಬಾಳ – ಗೌರವ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್!

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್! ಬಾಗಲಕೋಟೆ : ಬಾದಾಮಿ ಮೂಲದ…

ಶತಾಯಿಷಿ ಸ್ವಾತಂತ್ರ್ಯ ಹೋರಾಟಗಾರ್ತಿ ಶಾಂತಾಬಾಯಿಗೆ ಸನ್ಮಾನ ಮಾಡಿದ ಅನಿಲ ಮೆಣಸಿನಕಾಯಿ

ಗದಗ: ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಮಹಾತ್ಮ ಗಾಂಧೀಜಿಯವರಿಗೆ ತಮ್ಮ ಕೈಯಾರ ಅಡುಗೆ ಮಾಡಿದ ಬಡಿಸಿದ ಮಹಾತಾಯಿ ಸದ್ಯ…

ವಿಧಾನ ಸಭೆಯಲ್ಲಿ ಚರ್ಚಿಸಬೇಕಿದ್ದ ನೈತಿಕತೆ, ಚರ್ಚೆ ಆಗಲೇ ಇಲ್ಲ

ಮಾನವ ತನ್ನ ಜೀವನದಲ್ಲಿ ಕೆಲವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಮೌಲ್ಯ ಇಲ್ಲದ ಜೀವನ, ಜೀವನವೇ ಅಲ್ಲ. ನಂಬಿಕೆ. ವಿಶ್ವಾಸ,ತತ್ವ,ಸಿದ್ಧಾಂತ’ ನೈತಿಕತೆ, ಇವು ಮಾನವೀಯ ಮೌಲ್ಯಗಳು. ಇವುಗಳಲ್ಲಿ ಶ್ರೇಷ್ಠವಾದದ್ದು ನೈತಿಕತೆ.

ನೀಟ್ (NEET) ಪರೀಕ್ಷೆಯ ದಿನಾಂಕ ಘೋಷಣೆ!

ಈ ಪರೀಕ್ಷೆಯು ದೇಶದಾದ್ಯಂತ ನಡೆಯಲಿದ್ದು ಕೋವಿಡ್ ಸೋಂಕು ಹರಡುತ್ತಿರುವುದರಿಂದ ಪರೀಕ್ಷೆಯ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಹಾಗೂ ಈ ಮುಂಚೆ 155 ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈಗ 198 ನಗರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಹಾಗೂ 3862 ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದ್ದಾರೆ.