ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರಭದ್ರಪ್ಪ ಮ. ಶಿಗ್ಲಿ, ಉಪಾಧ್ಯಕ್ಷರಾಗಿ ಮಹಾಂತೇಶ ಬ. ಹವಳದ ಮತ್ತು ನಿರ್ದೇಶಕರಾಗಿ ಮರಬಸಪ್ಪ ಯ ಚಿಕ್ಕಣ್ಣವರ, ಬಸಪ್ಪ ಪಂ. ಸಗರದ, ಧರ್ಮಣ್ಣ ಮಾ. ಸಿದ್ಧಾಪುರ, ಸೋಮಣ್ಣ ಬ. ಭಂಗಿ, ಷಣ್ಮುಖಪ್ಪ ರು. ಬಡಿಗೇರ, ಕಲ್ಲಪ್ಪ ಹೊ. ಗಂಗಣ್ಣವರ, ಹಸನಸಾಬ ಖಾ. ತಾಡಪತ್ರಿ, ಹೊನ್ನಪ್ಪ ಬ. ಲಮಾಣಿ, ಲಕ್ಷ್ಮವ್ವ ಶೇ ಪಾಟೀಲ, ಮಹಾದೇವಿ ರಾ. ರೊಳ್ಳಿ ಅವಿರೋಧ ಆಯ್ಕೆಯಾಗಿದ್ದಾರೆ.
ಆಯ್ಕೆ ವೇಳೆ ಪಾಲ್ಗೊಂಡ ಅಡರಕಟ್ಟಿ, ಹರದಗಟ್ಟಿ, ಕೊಂಡಿಕೊಪ್ಪ ಗ್ರಾಮಗಳ ಸರ್ವಸದಸ್ಯರಿಗೂ ಹಿರಿಯರಿಗೂ ಸಂಘದ ಮಾಜಿ ಅಧ್ಯಕ್ಷರುಗಳಾದ ಮುದಿಯಪ್ಪ ಹವಳದ, ಚನ್ನಬಸಪ್ಪ ಹಳೆಮನಿ, ಮಹದೇವಪ್ಪ ಹವಳದ, ಬಸವಣ್ಣೆಪ್ಪ ರೊಳ್ಳಿ, ರಾಮಣ್ಣ ಚಿಕ್ಕಣ್ಣವರ, ಪ್ರಕಾಶ್ ಶಿರಹಟ್ಟಿ ಹಾಗು ಹಿರಿಯರಾದ ಶೇಖರಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಶಂಕ್ರಣ್ಣ ಭಂಗಿ, ಟಾಕ್ರಪ್ಪ ಮಾಳಗಿಮನಿ, ತಾವರೆಪ್ಪ ಲಮಾಣಿ, ಗಣೇಶ ನಾಯಕ, ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗನಗೌಡ ಪ್ರಭುಗೌಡ ಪಾಟೀಲ ಮತ್ತು ಇಲಾಖೆಯ ಅಧಿಕಾರಿಗಳು ಬಸವರಾಜ ನಿಡಗುಂದಿ ಸೇರಿದಂತೆ ಇತರರು ಇದ್ದರು.