ಗದಗ: ಇದು ಒಂದು ಸೀಲ್ ಡೌನ್ ಕಥೆಯಲ್ಲ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ಪಾಸಿಟಿವ್ ಪತ್ತೆಯಾದ ನಂತರ ಪ್ರದೇಶವನ್ನು ಸೀಲ್ ಡೌನ್ ಮಾಡಿ ಎಂಟು ದಿನ ಕಳೆದವು. ಅಗತ್ಯ ವಸ್ತು ಪೂರೈಸಬೇಕಾದ ಜಿಲ್ಲಾ ಮತ್ತು ತಾಲೂಕಾಡಳಿತಗಳು ಈ ಊರಿನ ಕಡೆ ತಲೆ ಹಾಕುತ್ತಿಲ್ಲ. ಎಂಎಲ್ಎ ರಾಮಣ್ಣ ಲಮಾಣಿ ಕೂಡ ಈ ಕಡೆ ಸುಳಿದಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.

ಎಂಎಲ್ಎ ರಾಮಣ್ಣ ಲಮಾಣಿಯವರಿಗೆ ಫೋನ್ ಮಾಡಿದ್ರ ಅಧಿಕಾರಿಗಳನ್ನ ಕಳಿಸ್ತೀನಿ ಅಂದ್ರು. ಯಾರದೂ ಸುಳಿವ ಇಲ್ಲ. ಪಿಡಿಒಗೆ ಫೋನ್ ಮಾಡಿದ್ರ ಆರಾಮಿಲ್ಲ ಅಂತ ಹೇಳ್ತಾರ. 8 ದಿನದಿಂದ ಸಾಯಾಕ ಹತ್ತಿವಿ. ಈಗರ ಸರಕಾರ ನಮ್ಮನ್ನ ನೋಡಲಿ’ ಎಂದು ಯುವಕನೊಬ್ಬ ತನ್ನ ಅಳಲು ತೋಡಿಕೊಂಡ.

ಸೀಲ್ ಡೌನ್ ಆದ ಪ್ರದೇಶ ನಿಯಂತ್ರಿತ ಪ್ರದೇಶವಾಗುವುದರಿಂದ ಅಲ್ಲಿನ ಎಲ್ಲ ಅಂಗಡಿಗಳನ್ನು ಬಂದ್ ಮಾಡುವ ಸರಕಾರ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಅದು ಅದರ ಕರ್ತವ್ಯವೂ ಕೂಡ ಹೌದು. ನಿಯಂತ್ರಿತ ಪ್ರದೇಶಗಳಲ್ಲಿ ಕಾಟಾಚಾರಕ್ಕೆ ಒಂದೆರಡು ದಿನ ಆಹಾರ ದಿನಸಿ ಪೂರೈಸಿ ಕೈ ತೊಳೆದುಕೊಳ್ಳಲಾಗುತ್ತಿದೆ.

ಬಾಲೆಹೊಸೂರಿನ ಜನಕ್ಕೆ ಆಹಾರವಿರಲಿ ಕುಡಿಯುವ ನೀರಿನ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಕೆಲವರಿಗೆ ಎರಡು ಹೊತ್ತು ಊಟ ಮಾಡುವುದೂ ಕಷ್ಟವಾಗಿದೆ.

ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಇಡೀ ಏರಿಯಾದ ಜನರು ಪಡುತ್ತಿರುವ ಪಡಿಪಾಲನ್ನು ಕೇಳುವವರಿಲ್ಲ. ಅಲ್ಲಿನ ವೃದ್ಧೆಯೊಬ್ಬರಂತೂ ‘ದೊಡ್ಡವರಿಗೆ ಹಿಡಿಶಾಪ ಹಾಕಿದ್ದಾರೆ. ‘ಎಲ್ಲ ಅಂಗಡಿ ಬಂದ್ ಮಾಡಿಸಿದ ಮ್ಯಾಲ ಇಲ್ಲಿ ಅಡುಗಿ ಮಾಡಾಕ್ ಒಳ್ಳೆ ಎಣ್ಣಿ, ಉಳ್ಳಾಗಡ್ಡಿ ಸೈತಿಲ್ಲ. ಹೊರಗ ನಿಲ್ಲಾಕು ಬಿಡಲ್ಲ. ಮನ್ಯಾಗ ಸಣ್ ಸಣ್ ಮಕ್ಳು ಮರಿ ಅದಾವ. ಹಾಲೂ ಇಲ್ಲ, ಕೂಳೂ ಇಲ್ಲ. ದೊಡ್ಡವರು ಅನಿಸಿಕೊಂಡವರು ಒಬ್ಬರೂ ಬಂದಿಲ್ಲ’ ಎಂದು ಹಿಡಿಶಾಪ ಹಾಕಿದರು.

ಕೃಷಿ ಕೆಲಸ ಮಾಡುವ ಯುವಕರಂತೂ ಕಂಗೆಟ್ಟಿದ್ದಾರೆ. ‘ಅವತ್ತಿನ ಕೂಲಿ ತಂದರ ಇಲ್ಲಿ ಹೊಟ್ಟಿ ತುಂಬಾದು. ಎಲ್ಲ ಕೊಡ್ತೀನಿ ಅಂತ ಹೇಳಿದ ಅಧಿಕಾರಿಗಳು ಬಂದೇ ಇಲ್ಲ.

Leave a Reply

Your email address will not be published. Required fields are marked *

You May Also Like

ಕಂಡಕ್ಟರ್- ಡ್ರೈವರ್ ಗಳಿಗೆ ವೇತನ ರಹಿತ ರಜೆಗೆ ಚಿಂತನೆ?

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಬಂದ್ ಆಗಿದ್ದ ಬಸ್ ಸಂಚಾರ ಈಗಷ್ಟೆ ಆರಂಭವಾಗಿದೆ. ಆದರೆ ಪ್ರಯಾಣಿಕರು…

ಎಸ್.ಎಸ್‌.ಎಲ್.ಸಿ ಪರೀಕ್ಷೆ: ವಿದ್ಯಾರ್ಥಿಗಳು ಇಚ್ಛಿಸಿದ ಕೇಂದ್ರದಲ್ಲಿ ಪರೀಕ್ಷೆಗೆ ಅವಕಾಶ

ಬೆಂಗಳೂರು: ವಿದ್ಯಾರ್ಥಿಗಳು ತಾವು ಇಚ್ಛಿಸಿರುವ ಕೇಂದ್ರಗಳಲ್ಲಿಯೇ ಪರೀಕ್ಷೆಗಳನ್ನು ಬರೆಯಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ…

ಮೊಸಳೆ ಬಂತು.. ಮೊಸಳೆ..! ಹೊಳೆಯಾಲೂರು: ಮಲಪ್ರಭ ನದಿ ದಡದಲ್ಲಿ ಮೊಸಳೆ ಪತ್ತೆ!

ಮಲಪ್ರಭಾ ನದಿಯಲ್ಲಿ ಮೊಸಳೆ ಪತ್ತೆಯಾಗಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗದಗ ಜಿಲ್ಲೆ ರೊಣ ತಾಲೂಕಿನ ಹೊಳೆಆಲೂರ ಗ್ರಾಮದ ಮಲಪ್ರಭಾ ನದಿಯಲ್ಲಿ ಬುಧುವಾರ ಸಂಜೆ ಮೊಸಳೆ ಪ್ರತ್ಯಕ್ಷವಾಗಿಜe. ಮೊಸಳೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಎಮ್.ಎಲ್.ಎ ಸಾಹೇಬರೆ ಮಾಸ್ಕ್ ಹಾಕ್ಕೊಳ್ಳಿ ಪ್ಲೀಸ್..!

ಶಾಸಕರಾಗಿ ಜನರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದರಲ್ಲ ಎನ್ನುವುದು ನಿಜವಾಗಿಯೂ ಪ್ರಶಂಸನೀಯವೇ. ಆದರೆ ಯಾವುದನ್ನು ಪಾಲನೆ ಮಾಡುವ ಕುರಿತು ಶಾಸಕರು ಮಾತನಾಡುತ್ತಿದ್ದರೋ ಅದನ್ನೇ ಶಾಸಕರು ಮರೆತಿದ್ದರು.