ಮುಳಗುಂದ: ಅಂಚೆ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು ಗ್ರಾಮೀಣ ಜನರ ಬದಕು ಸುಧಾರಿಸಲು ಇಲಾಖೆಯು ಅಂಚೆ ಜೀವ ವಿಮಾ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನ ಅಂಚೆ ಸಿಬ್ಬಂದಿ ಜನರ ಮನೆಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಗದಗ ಅಂಚೆ ವರಿಷ್ಠಾಧಿಕಾರಿ ಚಿದಾನಂದ ಪದ್ಮಸಾಲಿ ಹೇಳಿದರು.

ಅವರು ವಿಭಾಗೀಯ ಅಂಚೆ ಕಾರ್ಯಲಯದಲ್ಲಿ ಅಂಚೆ ಇಲಾಖೆಯ ಸಾಧಕ ಸಿಬ್ಬಂದಿಗಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಸಿಕ ಉಳಿತಾಯ ಖಾತೆ, ಮಕ್ಕಳಿಗೆ ಭವಿಷ್ಯ ಖಾತೆ ನಿಧಿ ಹೀಗೆ ಅಂಚೆ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನಗರದಲ್ಲಿ ದೊರೆಯುವ ಅಂಚೆ ಸೇವೆಗಳು ಗ್ರಾಮೀಣ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಪ್ರತಿಯೊಬ್ಬ ಗ್ರಾಹಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಎಂ.ಎಲ್.ಬಾಗವಾನ, ಎಂ.ಜಿ.ಕರಣ್, ಪ್ರಧಾನ ಅಂಚೆ ಕಚೇರಿ ಮುಖ್ಯಸ್ಥ ರಶೀಧಸಾಹೇಬ, ಎಸ್.ಸಿ ವಾಲಿಕಾರ, ಸೋಮಶೇಖರ ಮುದಗಲ್ಲ, ವಿಜಯಕುಮಾರ, ದುರದುಂಡಪ್ಪ, ರಾಜೇಂದ್ರಗೌಡ ಪಾಟೀಲ, ಜಿ.ಎನ್.ಶಿರಗುಪ್ಪಿ, ಎಸ್.ವಿ ಹಿರೇಮಠ, ವೆಂಕಟೇಶ್ ಆಕಳವಾಡಿ, ಸಿ.ಎಂ.ಕೊಪ್ಪದ, ರವಿ ವೆರ್ಣೇಕರ ಹಾಗೂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

You May Also Like

ಶಿರಹಟ್ಟಿ ತಾಪಂ ಸಾಮಾನ್ಯ ಸಭೆ: ಹನ್ನೊಂದ್ ತಿಂಗಳದಿಂದ ಪಗಾರ ಇಲ್ಲಂದ್ರ ಹೊಟ್ಟೆಗೇನ್ ಹಿಟ್ಟ್ ತಿನಬೇಕೇನ್ರಿ? ತಾಪಂ ಸದಸ್ಯರ ಆಕ್ರೋಶ!

ಶಿರಹಟ್ಟಿ: ಹನ್ನೊಂದು ತಿಂಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ರೂಪಾಯಿ ಸಂಬಳ…

ಹಿಮಾಚಲ ಪ್ರದೇಶದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ವಿಸ್ತರಣೆ

ಶಿಮ್ಲಾ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ನ್ನು ವಿಸ್ತರಿಸಲಾಗಿದೆ.ಈ…

ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಸ್ವಯಂ ನಿವೃತ್ತಿಗೆ ಆದೇಶ

ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ದೈಹಿಕವಾಗಿ ಅಸಮರ್ಥಗೊಂಡ ನಿಗಮದ ಅಧಿಕಾರಿಗಳು/ನೌಕರರಿಗೆ ಅನ್ವಯವಾಗುವಂತೆ ಆಕರ್ಶಣೀಯ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಗುಣಮಟ್ಟದ ಕಾಮಗಾರಿಗೆ ಆಧ್ಯತೆ:ಶಾಸಕ ಬಂಡಿ

ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆ ಅಡಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಉತ್ತರಪ್ರಭ ನರೆಗಲ್ಲ: ಉತ್ತಮ ಗುಣಮಟ್ಟದ…