ಮುಂಬಯಿ: ಮೊಸರಿನಿಂದಾಗಿ ಶುರುವಾದ ಜಗಳದಲ್ಲಿ ಪತ್ನಿಯ ಕೊಂದ ಪತಿಗೆ ನ್ಯಾಯಾಲಯ 8 ವರ್ಷಗಳ ಶಿಕ್ಷೆ ವಿಧಿಸಿದೆ.

ಆಂಟಾಪ್ ಹಿಲ್ ನ ನಿವಾಸಿ ಸಚಿನ್ ಮಾಲೊರೆ (39) ಶಿಕ್ಷೆಗೆ ಒಳಗಾದ ಪತಿ. ಈ ವ್ಯಕ್ತಿ ಪತ್ನಿ ರಂಜನಾ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ಈ ಘಟನೆ ಎರಡು ವರ್ಷಗಳ ಹಿಂದೆ ನಡೆದಿದೆ. ಸಚಿನ್ ತನ್ನ ಮನೆಗೆ ಮೊಸರನ್ನ ತಂದಿದ್ದರು. ಇದನ್ನು ಪತಿಗೆ ನೀಡದೆ, ಪತ್ನಿ ತಿಂದಿದ್ದರು. ಈ ವಿಷಯವಾಗಿ ಇಬ್ಬರ ನಡುವೆ ಜಗಳ ಶುರುವಾಗಿತ್ತು. 

ಈ ಸಂದರ್ಭದಲ್ಲಿ ಕೋಪಗೊಂಡ ಪತಿ, ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಇರಿದು ತಲೆ ಮರೆಸಿಕೊಂಡಿದ್ದ. ಅಕ್ಕ – ಪಕ್ಕದವರು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಗ ಪತ್ನಿಯು ಪತಿಯ ವಿರುದ್ಧ ದೂರು ದಾಖಲಿಸಿದ್ದರು. ವಾದ – ವಿವಾದ ಆಲಿಸಿದ ಕೋರ್ಟ್, ಪತಿಗೆ 8 ವರ್ಷಗಳ ಶಿಕ್ಷೆ ವಿಧಿಸಿದೆ. 

ವಿಚಾರಣೆ ಸಮಯದಲ್ಲಿ ಪತಿಯು ಆಕಸ್ಮಿಕವಾಗಿ ರಂಜನಾ ಉಕ್ಕಿನ ಪಾತ್ರೆಯ ಮೇಲೆ ಬಿದ್ದಿದ್ದಾಳೆ. ಹೀಗಾಗಿ ಗಾಯವಾಗಿದೆ ಎಂದು ವಾದಿಸಿದ್ದ. ಆದರೆ, ವೈದ್ಯಕೀಯ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳಿಂದಾಗಿ ಆರೋಪಿ ಪತಿಗೆ ಶಿಕ್ಷೆಯಾಗುವಂತಾಗಿದೆ. 

Leave a Reply

Your email address will not be published. Required fields are marked *

You May Also Like

ಜಿಟಿಟಿಸಿ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಾಂಪಿಟೆಶನ್ ಗೆ ಆಯ್ಕೆ

ಧಾರವಾಡ: ರಾಯಪುರ್ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಜಿಟಿಟಿಸಿ ಸಂಸ್ಥೆ ಇಬ್ಬರು ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಂಪೇಟೇಷನಲ್ಲಿ…

ಪುದುಚೇರಿಯಲ್ಲಿ ನಾರಾಯಣ ಸ್ವಾಮಿ ಸರ್ಕಾರ ಪತನ!

ಬಹುಮತ ಸಾಬೀತು ಪಡಿಸಲು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ವಿಫಲಗೊಂಡ ಕಾರಣ ಸರ್ಕಾರ ಪತನಗೊಂಡಿದೆ.

ಶಾಕಿಂಗ್ ನ್ಯೂಸ್: ಕರ್ನಾಟಕವೀಗ ಸೋಂಕು ಅತಿ ವೇಗದಲ್ಲಿ ಹರಡುತ್ತಿರುವ ರಾಜ್ಯ: ಕೇಸ್-ಲೋಡ್ ಸಂಖ್ಯೆಯಲ್ಲಿ 5ನೆ ಸ್ಥಾನ

ಸೋಂಕಿತರ ಸಂಖ್ಯೆಯ ಆಧಾರದ ಪಟ್ಟಿಯಲ್ಲಿ (ಕೇಸ್-ಲೋಡ್) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 6ನೆ ಸ್ಥಾನದಲ್ಲಿದ್ದ ಕರ್ನಾಟಕ ಶನಿವಾರ ಉತ್ತರಪ್ರದೇಶವನ್ನು ದಾಟಿ 5ನೆ ಸ್ಥಾನಕ್ಕೆ ಏರಿದೆ.

ರೆಮ್ ಡೆಸಿವರ್ ಹಂಚಿಕೆಯಲ್ಲಿ 16 ಲಕ್ಷ ಹೆಚ್ಚಿಸಿದ ಕೇಂದ್ರ ಇಲ್ಲಿದೇ ಮಾಹಿತಿ

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಈಚೆಗೆ ನಡೆದ ವಿಡಿಯೋ ಸಂವಾದದಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ದೇಶದಲ್ಲಿ ಎ.30ರ ವರೆಗೆ ಒಟ್ಟು 16 ಲಕ್ಷ ರೆಮ್ ಡೆಸಿವಿರ್ ಔಷಧಿಯನ್ನು ಹಂಚಿಕೆಯಲ್ಲಿ ಹೆಚ್ಚಿಸಿದ್ದಾರೆ.