ಪುದುಚೇರಿ: ಬಹುಮತ ಸಾಬೀತು ಪಡಿಸಲು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ವಿಫಲಗೊಂಡ ಕಾರಣ ಸರ್ಕಾರ ಪತನಗೊಂಡಿದೆ.
ಈ ಕಾರಣದಿಂದ ನಾರಾಯಣ ಸ್ವಾಮಿ ರಾಜೀನಾಮೆ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಬಹುಮತ ಸಾಬೀತು ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ತಮಗೆ ಬಹುಮತ ಇದೆ ಎಂದು ವಾದಿಸಿದ ನಾರಾಯಣ ಸ್ವಾಮಿ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದರು. ಆದರೆ ಬಹುಮತ ಸಿಗದ ಕಾರಣ ಅನಿವಾರ್ಯವಾಗಿವ ರಾಜಿನಾಮೆ ನೀಡಬೇಕಾಯಿತು.