3ನೆ ಸ್ಥಾನದಲ್ಲಿರುವ ದೆಹಲಿಯಲ್ಲಿ 1,781 ಮತ್ತು 4ನೆ ಸ್ಥಾನದಲ್ಲಿರುವ ಗುಜರಾತಿನಲ್ಲಿ 871 ಕೇಸು ಶನಿವಾರ ದಾಖಲಾಗಿದ್ದರೆ, 5ನೆ ಸ್ಥಾನ ತಲುಪಿದ ರಾಜ್ಯದಲ್ಲಿ ಈ ಎರಡೂ ರಾಜ್ಯಗಳಿಗಿಂತ ಹೆಚ್ಚು ಕೇಸು (2,798) ದಾಖಲಾಗಿವೆ.

ಬೆಂಗಳೂರು: ಸೋಂಕಿತರ ಸಂಖ್ಯೆಯ ಆಧಾರದ ಪಟ್ಟಿಯಲ್ಲಿ (ಕೇಸ್-ಲೋಡ್) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 6ನೆ ಸ್ಥಾನದಲ್ಲಿದ್ದ ಕರ್ನಾಟಕ ಶನಿವಾರ ಉತ್ತರಪ್ರದೇಶವನ್ನು ದಾಟಿ 5ನೆ ಸ್ಥಾನಕ್ಕೆ ಏರಿದೆ.
ಆದರೆ ಇದೆಲ್ಲಕ್ಕೂ ಶಾಕಿಂಗ್ ನ್ಯೂಸ್ ಎಂದರೆ, ಈಗ ಕರ್ನಾಟಕ ಅತಿ ವೇಗವಾಗಿ ಸೋಂಕು ಹರಡಲ್ಪಡುತ್ತಿರುವ ರಾಜ್ಯವಾಗಿದೆ. ರಾಜ್ಯದ ಪ್ರತಿದಿನದ ಕೇಸುಗಳಲ್ಲಿ ಅರ್ಧದಷ್ಟು ಕೇಸುಗಳು ಬೆಂಗಳೂರಿನಿಂದಲೇ ವರದಿಯಾಗುತ್ತಿದ್ದು ಬೆಂಗಳೂರು ಈಗ ಮತ್ತೊಂದು ವಾರದ ಲಾಕ್ ಡೌನ್ ಗೆ ಒಳಗಾಗಬೇಕಾಗಿದೆ.
ಶನಿವಾರ ರಾಜ್ಯದಲ್ಲಿ 2,798 ಕೇಸುಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯಲ್ಲಿ (ಕೇಸ್-ಲೋಡ್) ಉತ್ತರಪ್ರದೇಶಕ್ಕಿಂತ ಹೆಚ್ಚು ಸೋಂಕಿತರನ್ನು ಹೊಂದಿದ ರಾಜ್ಯವಾಗಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 2,46,600, 2ನೆ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 1.34, 226, 3ನೆ ಸ್ಥಾನದಲ್ಲಿರುವ ದೆಹಲಿಯಲ್ಲಿ 1,10.921, 4ನೆ ಸ್ಥಾನದಲ್ಲಿರುವ ಗುಜರಾತಿನಲ್ಲಿ 41,026 ಕೇಸುಗಳಿದ್ದರೆ ಶನಿವಾರ 5ನೆ ಸ್ಥಾನ ತಲುಪಿರುವ ರಾಜ್ಯದಲ್ಲಿ 36,216 ಸೋಂಕಿನ ಪ್ರಕರಣಗಳು ದಾಖಲಾಗಿವೆ.
3ನೆ ಸ್ಥಾನದಲ್ಲಿರುವ ದೆಹಲಿಯಲ್ಲಿ 1,781 ಮತ್ತು 4ನೆ ಸ್ಥಾನದಲ್ಲಿರುವ ಗುಜರಾತಿನಲ್ಲಿ 871 ಕೇಸು ಶನಿವಾರ ದಾಖಲಾಗಿದ್ದರೆ, 5ನೆ ಸ್ಥಾನ ತಲುಪಿದ ರಾಜ್ಯದಲ್ಲಿ ಈ ಎರಡೂ ರಾಜ್ಯಗಳಿಗಿಂತ ಹೆಚ್ಚು ಕೇಸು (2,798) ದಾಖಲಾಗಿವೆ.

ರಾಜ್ಯವಾರು ಮಾಹಿತಿ

ಸಾವಿನ ಸಂಖ್ಯೆಯಲ್ಲೂ ಹೆಚ್ಚಳ
ಕಳೆದ ವಾರದಲ್ಲಿ ಕರ್ನಾಟಕದಲ್ಲಿ ಸಾವುಗಳ ಸಂಖ್ಯೆ ಹೆಚ್ಚಿದೆ.
• ರಾಜ್ಯದ ಒಟ್ಟು ಕೋರೊನಾ ಸಾವು: 617
• ಈ 30 ದಿನದಲ್ಲಿ ಸಂಭವಿಸಿದ ಸಾವು: 367 (ಒಟ್ಟು ಸಾವಿನ ಶೇ. 60ರಷ್ಟು ಈ ತಿಂಗಳಲ್ಲೇ ಸಂಭವಿಸಿವೆ ಎಂಬುದು ಎಚ್ಚರಿಕೆಯ ಗಂಟೆ)
• ಕಳೆದ ನಾಲ್ಕು ದಿನಗಳಲ್ಲಿ ಕೋರೊನಾ ಸಾವು: ಸುಮಾರು 200
• ನಿನ್ನೆ ಶನಿವಾರ ಒಂದೇ ದಿನದಲ್ಲಿ ಸಾವು: 70
ಮೊದಲೆರಡು ಸ್ಥಾನಗಳಲ್ಲಿರುವ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಹೋಲಿಕೆ ಮಾಡುವಷ್ಟು ರಾಜ್ಯ ಸಮೀಪವಿದೆ.
ಕೇಸುಗಳ ದೈನಿಕ ಬೆಳವಣಿಗೆ ದರದಲ್ಲಿ ರಾಜ್ಯದ ಪ್ರಮಾಣ ಶೇ. 7.7 ಇದ್ದರೆ, ಒಟ್ಟು ರಾಷ್ಟ್ರೀಯ ದರ ಇಳಿಯುತ್ತ ಶೇ. 3.4 ತಲುಪಿದೆ. ಕೇಸುಗಳ ದೈನಿಕ ಬೆಳವಣಿಗೆ ದರದಲ್ಲಿ ಕರ್ನಾಟಕಕ್ಕಿಂತ ಮುಂದಿದ್ದ ತೆಲಂಗಾಣದಲ್ಲಿ ಈಗ ದೈನಿಕ ಕೇಸುಗಳ ಸಂಖ್ಯೆ ಇಳಿಯುತ್ತ ಬಂದು ದರ ಶೇ. 6ಕ್ಕೆ ಇಳಿದಿದೆ.
ಇದು ರಾಕ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ದೈನಂದಿನ ಸೋಂಕು ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ.
(ಮಾಹಿತಿ: ಅಮಿತಾಬ್ ಸಿನ್ಹಾ ಲೇಖನ, ಇಂಡಿಯನ್ ಎಕ್ಸ್ ಪ್ರೆಸ್)

Leave a Reply

Your email address will not be published. Required fields are marked *

You May Also Like

ದೋತರಾ ಹರಿದು ಮಾಸ್ಕ್ ಮಾಡಿನಿ: ಎಸ್.ಎಸ್.ಪಾಟೀಲ್

ನಾನು ನನ್ನ ಧೋತರ ಹರಿದು ಮಾಸ್ಕ್ ಮಾಡಿಕೊಂಡಿದ್ದೇನೆ. ಇವುಗಳನ್ನೆ ನಮ್ಮ ಹೊಲದಲ್ಲಿ ಕೆಲಸ ಮಡುವ ಕಾರ್ಮಿಕರಿಗೂ ನೀಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್

ಪ್ರವಾಹ ಭೀತಿ: ಪ್ರವಾಹ ಪೀಡಿತ ಗ್ರಾಮಸ್ಥರು ಬೀಗರ ಮನೆಗೆ ಹೋಗಬೇಕಂತೆ..!

ಮಲಪ್ರಭ ನದಿಯ ಪ್ರವಾಹ ಪೀಡಿತ ಗ್ರಾಮಸ್ಥರು ತಮ್ಮ ಪರಿಚಿತರು ಅಥವಾ ಸಂಬಂಧಿಗಳ ಮನೆಗೆ ಹೋಗಿ ಆಶ್ರಯ ಪಡೆಯಲು ಸ್ವತ: ತಹಶೀಲ್ದಾರ್ ಆದೇಶ ನೀಡಿದ ಘಟನೆ ನಡೆದಿದೆ.

ದೇಶದಲ್ಲಿ 73 ಲಕ್ಷದ ಗಡಿ ದಾಟಿದ ಮಹಾಮಾರಿ!

ನವದೆಹಲಿ : ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 63,371 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 895 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…