ಮುಳಗುಂದ: ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗದಗ ಜಿಲ್ಲಾ ಪೋಲಿಸ್ ಹಾಗೂ ಸ್ಥಳಿಯ ಪೋಲಿಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತೆ ಸಪ್ತಾಹ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಠಾಣಾ ಪಿ.ಎಸ್.ಐ ಸಚಿನ್ ಅಲಮೇಲಕರ ಮಾತನಾಡಿ, ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ತಿಳಿದುಕೊಂಡು ಪಾಲಿಸಬೇಕು. ಬೈಕ್ ಅಪಘಾತ ವೇಳೆ ಮೊದಲಿಗೆ ತಲೆಗೆ ಪೆಟ್ಟು ಬೀಳುತ್ತದೆ ಇದರಿಂದ ಪ್ರಾಣಹಾನಿ ಸಂಭವಿಸುತ್ತದೆ. ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಸಿಟ್ ಬೆಲ್ಟ ಹಾಕಿಕೊಳ್ಳಿ. ನಿಯಮ ಮೀರಿ ನಡೆಯುವವರ ವಿರುದ್ದ ಕಾನೂನು ಜರುಗಿಸಲಾಗುವದು. ಎಂದರು.

ಶಿಕ್ಷಕರಾದ ಸಿ.ಎಚ್.ದೊಡ್ಡಮನಿ, ಎಸ್.ಚಂದ್ರಶೇಖರ, ಎನ್.ಪಿ.ಲಮಾಣ, ಮರಿದೇವರಮಠ, ಸಿಬ್ಬಂದಿ ಐ.ಕೆ.ತಾವರಗೇರಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಮುಳಗುಂದ ಪೋಲಿಸ್ ಠಾಣೆ ಪಿಎಸೈ ಸಚಿನ್ ಅಲಮೇಲಕರ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಪಾಲನೆ ಕುರಿತು ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *

You May Also Like

ಹೊಳೆ ಇಟಗಿಯಲ್ಲಿ ರಸ್ತೆ ಹುಡುಕಿ ಕೊಡ್ತಿರಾ ಪ್ಲೀಸ್!

ನೀರಿನಿಂದ ತುಂಬಿಕೊಂಡ ಗುಂಡಿಗಳನ್ನು ನೋಡಿದರೆ ಅವು ಪಕ್ಕಾ ಮೀನಿನ ಗುಂಡಿಗಳಂತೆ ಕಾಣುತ್ತವೆ. ಆದ್ರೆ ಅವು ಗುಂಡಿಗಳಲ್ಲ. ಅರೇ ಇದೇನಿದು ಗುಂಡಿಗಳು ಅಂತಿರಾ, ಮತ್ತೆ ಗುಂಡಿಗಳಲ್ಲ ಅಂತಿರಾ ಅಂತ ಕನ್ಫ್ಯೂಸ್ ಆಗಬೇಡಿ ಇದು ಗ್ರಾಮವೊಂದ ರಸ್ತೆಯ ಕಥೆ.

ಸಂವಾದ ನಡೆಸಿದ ಶಾಸಕ ನಡಹಳ್ಳಿ..! ಅನುದಿನವೂ ಇಷ್ಟಪಟ್ಟು ಓದಿ ಭವಿಷ್ಯ ಕಟ್ಟಿಕೊಳ್ಳಿ ಗುಲಾಬಚಂದ ಜಾಧವ;

ಉತ್ತರಪ್ರಭ ಆಲಮಟ್ಟಿ: ದಿನದ 24 ಗಂಟೆಯಲ್ಲಿ ಎಷ್ಟು ಕಾಲ ಓದ್ತಿರಾ, ಟಿವಿ ನೋಡ್ತಿರಾ, ಹರಟೆ ಹೋಡ್ತಿರಾ,…

23 ರಂದು ಆಲಮಟ್ಟಿಗೆ ದೆಹಲಿಯ ಕಾನೂನು ತಂಡ ಭೇಟಿ; 21 ವರ್ಷಗಳ ಹಿಂದೆ ಕತ್ತರಿಸಿದ ಜಲಾಶಯದ ಕ್ರಸ್ಟ್‌ ಗೇಟ್ ಗಳ ಪರಿಶೀಲನೆ

ಉತ್ತರಪ್ರಭಆಲಮಟ್ಟಿ: ಸುಮಾರು 21 ವರ್ಷಗಳ ಹಿಂದೆ ಕತ್ತರಿಸಿ ಸಂರಕ್ಷಿಸಿ ಭದ್ರತೆಯಲ್ಲಿಟ್ಟಿರುವ ಆಲಮಟ್ಟಿ ಆಣೆಕಟ್ಟಿನ ಕ್ರಸ್ಟ್‌ ಗೇಟ್…

ಲಕ್ಷ್ಮೇಶ್ವರದಲ್ಲಿ ಜನೌಷಧಿ ಕೇಂದ್ರ ಉದ್ಘಾಟಿಸಿದ ಸುನೀಲ್ ಮಹಾಂತಶೆಟ್ಟರ್

ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ.10 ರಿಂದ ಶೇ.90ರವರೆಗೆ ರಿಯಾಯತಿ ದರದಲ್ಲಿ ಔಷಧಿ ವಿತರಿಸಲಾಗುತ್ತಿದೆ ಎಂದು ಕೆಸಿಸಿ ಬ್ಯಾಂಕ ನಿರ್ದೇಶಕ ಸುನೀಲ ಮಹಾಂತಶೆಟ್ಟರ ಹೇಳಿದರು.