ರೋಣ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ದಿನಾಚರಣೆ ಹಾಗೂ ಮಾಸ್ಕ ವಿತರಣೆ ಕುರಿತು ಕಾನೂನು ಶಿಬಿರ ಕಾರ್ಯಕ್ರಮ ಜರುಗಿತು.
ಹಿರಿಯ ದಿವಾಣಿ ನ್ಯಾಯಾಧೀಶ ನ್ಯಾಯಾಲಯದ ಆವರಣದಲ್ಲಿ, ತಾಲೂಕ ಕಾನೂನುಗಳ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುರಸಭೆ, ಶಿಶು ಅಭಿವೃದ್ಧಿ, ತಾಲೂಕ ಪಂಚಾಯತ, ಪೊಲೀಸ್, ಕಂದಾಯ ಇಲಾಖೆಗಳ ಹಾಗೂ ನ್ಯಾಯವ್ಯಾಧಿಗಳ ಸಂಘದ ಆಶ್ರಯದಲ್ಲಿ ಸ್ವಚ್ಛತಾ ದಿನಾಚರಣೆ, ಮಾಸ್ಕ್ ವಿತರಣೆ ಕುರಿತು ಕಾನೂನು ಶಿಬಿರ ಕಾರ್ಯಕ್ರಮ ನೆರವೇರಿತು.
ಹಿರಿಯ ನ್ಯಾಯಧೀಶರು ಪ್ರ.ದಾ.ನ್ಯಾ ದಂಡಾಧಿಕಾರಿಗಳು ಹಾಗೂ ಕಾನೂನು ಸೇವೆಗಳ ಸಮಿತಿ
ಅಧ್ಯಕ್ಷರಾದ ನಾಗವೇಣಿ ವೀ ನೆರೆವೇರಿಸಿದರು.
ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್ ಅಧ್ಯಕ್ಷತೆ ವಹಿಸಿದ್ದರು. ಸಚಿನ್ ಎಚ್ ಆರ್, ಬಿ.ಎಸ್. ರಂಗನಗೌಡ್ರ, ಬಿ.ಎಸ್. ತಟ್ಟಿಮನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಶುಅಭಿವೃದ್ಧಿ ಅಧಿಕಾರಿ ಬಿ.ಎಮ್. ಮಾಳೆಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಶಿಶು ಅಭಿವೃದ್ಧಿ ಇಲಾಖಾ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಭಾಗವಸಿದ್ದರು.