ಮುಂಬೈ: 2020ರಲ್ಲಿ ಲಾಕ್‌ ಡೌನ್‌ ನಿಂದ ಬೇಸತ್ತ ಜನ ಈಗ ಮತ್ತದೇ ಲಾಕ್‌ ಡೌನ್‌ ಮೊರೆ ಹೋಗುವ ಅನಿವಾರ್ಯತೆ ಇದೆ. ಯಾಕೆಂದರೆ, ಬ್ರಿಟನ್‌ ನಲ್ಲಿ ಹೊಸ ರೂಪಾಂತರಿ ಕೊರೊನಾ ವೈರಸ್‌ ಹರಡುತ್ತಿದ್ದು, ಅಲ್ಲಿನ ಜನ ತ್ತರಿಸಿ ಹೋಗಿದ್ದಾರೆ. ಈಗಾಗಲೇ ಬ್ರಿಟನ್‌ ಅಲ್ಲದೇ, ಬೇರೆ ದೇಶಗಳಿಗೂ ಈ ವೈರಸ್‌ ಹಬ್ಬಿದ್ದು, ಭಾರತವೇನು ಹೊರತಾಗಿಲ್ಲ.

ಇದರೊಂದಿಗೆ ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಶುರುವಾಗಿದ್ದು, ಈಗ ದೇಶದಲ್ಲಿ ಎರಡೆರಡು ವೈರಾಣುಗಳನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ 2021 ಹೊಸ ವರ್ಷವನ್ನು ಲಾಕ್‌ ಡೌನ್‌ ಮೂಲಕವೇ ಬರ ಮಾಡಿಕೊಳ್ಳಲು ಮುಂದಾಗಿದೆ. ಬ್ರಿಟನ್‌ ವೈರಸ್‌ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆಯಿಂದ ಮಹಾರಾಷ್ಟ್ರ ಸರ್ಕಾರ ಲಾಕ್‌ ಡೌನ್‌ ಮಾಡಿದೆ.

ಇನ್ನು ಈ ಹಿಂದೆ ಇನ್ನೂ 6 ತಿಂಗಳ ಕಾಲ ಮಾಸ್ಕ್‌ ಕಡ್ಡಾಯ ಎಂದು ಘೊಷಿಸಲಾಗಿತ್ತು. ಆದರೆ, ಲಾಕ್‌ ಡೌನ್‌ ಮಾಡಲ್ಲ ಎಂದಿದ್ದ ಸರ್ಕಾರ ಈಗ ಅನಿವಾರ್ಯತೆ ದೃಷ್ಟಿಯಿಂದ ಲಾಕ್‌ ಡೌನ್‌ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ದೇಶದ ಇತರೆ ರಾಜ್ಯಗಳು ಸಹ ಲಾಕ್‌ ಡೌನ್‌ ಮೊರೆ ಹೋಗುವ ಸಾಧ್ಯೆತೆ ದಟ್ಟವಾಗಿದೆ. 2020 ಹಾಗೂ 2021ರ ಹೊಸ ವರ್ಗಳು ಇಡೀ ಜಗತ್ತಿಗೆ ಕರಾಳ ವರ್ಷಗಳಾಗಿ ಇತಿಹಾಸದ ಪುಟ ನಿರ್ಮಿಸಲಿವೆ.

ಇನ್ನು ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಹೊಸ ರೂಪಾಂತರಿ ವೈರಸ್‌ನ ಲಕ್ಷಣಗಳು ಸ್ಪಷ್ಟವಾಗಿರದ ಕಾರಣ, ಜನರು ಎಚ್ಚರ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಮಸೀದಿ, ದರ್ಗಾಗಳು ಅನುಸರಿಸಬೇಕಾದ ಕ್ರಮಗಳೇನು?

ಬೆಂಗಳೂರು: ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ಮಸೀದಿ ಹಾಗೂ ದರ್ಗಾಗಳಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ…

ರಷ್ಯಾ ಲಸಿಕೆ ಸುದ್ದಿ ನಂಬಿ ದಿಕ್ಕು ತಪ್ಪಿದ ‘ದೊಡ್ಡ’ ಮಾಧ್ಯಮ: ಅವಸರದ ನಡುವೆಯೂ ಉತ್ತರಪ್ರಭ ಸಂಯಮ

ಕಳೆದ ಭಾನುವಾರ ಮತ್ತು ಸೋಮವಾರ ಕೋರೊನಾ ಲಸಿಕೆ ಕುರಿತಂತೆ ಫೇಕ್ ಸುದ್ದಿಯನ್ನು ನಂಬಿದ ದೈತ್ಯ ಮೀಡಿಯಾ ಕಂಪನಿಗಳು ಎಡವಟ್ಟು ಮಾಡಿಕೊಂಡವು. ಆದರೆ ಉತ್ತರಪ್ರಭ ಸತ್ಯ ಪ್ರಕಟಿಸಿತ್ತು. ಈಗ ಅದನ್ನೇ ದೇಶದ ಮುಂಚೂಣಿ ಫ್ಯಾಕ್ಟ್ ಚೆಕ್ ಕಂಪನಿ ಅಲ್ಟ್ ನ್ಯೂಸ್ ಹೇಳಿದೆ.

ರಾಜಸ್ತಾನ್ ರಾಜಕೀಯ: ಕ್ಲೈಮಾಕ್ಸ್ ಗೆ ಕ್ಷಣಗಣನೆ:ಡಿಸಿಎಂ, ರಾಜ್ಯಾಧ್ಯಕ್ಷ ಹುದ್ದೆಯಿಂದ ಪೈಲಟ್ ಡ್ರಾಪ್

ಎರಡನೆ ಶಾಸಕಾಂಗೀಯ ಪಕ್ಷದ ಸಭೆಗೂ ಗೈರು ಹಾಜರಾದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ…

ಆಯುಷ್ ಇಲಾಖೆಯ ವೆಬಿನಾರ್-ಸೆಮಿನಾರ್ ಗಳಲ್ಲಿ ಹಿಂದಿ ಹೇರಿಕೆ ಬೇಡ

ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯಶೊ ನಾಯಕ್ ಅವರಿಗೆ ತಮಿಳು ನಾಡಿನ ಲೋಕಸಭಾ ಸದಸ್ಯ ಕನಿಮೋಜಿ ಕರುಣಾನಿಧಿ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯಶೊ ನಾಯಕ್ ಅವರಿಗೆ ತಮಿಳು ನಾಡಿನ ಲೋಕಸಭಾ ಸದಸ್ಯ ಕನಿಮೋಜಿ ಕರುಣಾನಿಧಿ ಪತ್ರ ಬರೆದಿದ್ದಾರೆ.