ಬೆಂಗಳೂರು: ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ಮಸೀದಿ ಹಾಗೂ ದರ್ಗಾಗಳಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಅಲ್ಪ ಸಂಖ್ಯಾತ ಆಯೋಗ ಕೆಲವು ಸೂಚನೆಗಳನ್ನು ನೀಡಿದೆ. ಈ ಕುರಿತು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಆದೇಶಿಸಿದ್ದಾರೆ.

ಮಸೀದಿ-ದರ್ಗಾದಲ್ಲಿ ಪಾಲಿಸಬೇಕಾದ ಸೂಚನೆಗಳು

1) ಪ್ರಾರ್ಥನೆ ಸಲ್ಲಿಸುವವರು ಮನೆಯಲ್ಲಿಯೇ ವಝೂ ಮಾಡಿ ಬರಬೇಕು

2) ಮಸೀದಿಯಲ್ಲಿನ ಶೌಚಾಲಯಗಳನ್ನು ಶುಚಿಯಾಗಿಡಬೇಕು

3) ಅನಿವಾರ್ಯತೆ ಇದ್ದಲ್ಲಿ ಮಾತ್ರ ಶೌಚಾಲಯ ಬಳಕೆ ಮಾಡಬೇಕು

4) ಮಸೀದಿ ಒಳ ಹಾಗೂ ಹೊರ ಪ್ರವೇಶಕ್ಕೆ ಒಂದೇ ಬಾಗಿಲು ಇರಬೇಕು

5) ಪ್ರಾರ್ಥನೆಗೂ ಮುನ್ನ ಮಸೀದಿಯಲ್ಲಿ ಔಷಧಿ ಸಿಂಪಡಿಸಬೇಕು

6) ಪ್ರಾರ್ಥನೆಗೆ ಬರುವವರು ದೇಹದ ತಾಪಮಾನ ಪರೀಕ್ಷಿಸಿಕೊಳ್ಳಬೇಕು

7) ಪ್ರಾರ್ಥನೆ ವೇಳೆ 1 ರಿಂದ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು

8) ನಮಾಜ್ ಗೆ ಬರುವವರು ಮನೆಯಿಂದಲೇ ಚಾಪೆ ತರಬೇಕು

8) 10 ರಿಂದ 15 ನಿಮಿಷದಲ್ಲಿ ನಿತ್ಯದ ನಮಾಜ್ ಮುಗಿಸಬೇಕು

9) ಹೆಚ್ಚು ಜನರಿದ್ದಲ್ಲಿ ನಮಾಜ್ ಮಾಡಲು ಎರಡು ಜಮಾತ್ ಮಾಡಬೇಕು

10) ಸುನ್ನತ್ ಹಾಗೂ ನಫೀಲ್ ನಮಾಜ್ ಮನೆಯಲ್ಲಿಯೇ ಮಾಡಬೇಕು

11) ನಮಾಜ್ ಮುಗಿದ ತಕ್ಷಣ ಯಾವುದೇ ಚರ್ಚೆ ಮಾಡದೇ ಮನೆಗೆ ತೆರಳಬೇಕು

12) ಶುಕ್ರವಾರದ ನಮಾಜ್ ನ ಖುತ್ಬಾ ಸಂಕ್ಷಿಪ್ತವಾಗಿ ಮುಗಿಸಬೇಕು

13) ಶುಕ್ರವಾರದ ನಮಾಜನ್ನು 20 ನಿಮಿಷದಲ್ಲಿ ಮುಗಿಸಬೇಕು

14) ದರ್ಗಾ ಹಾಗೂ ಮಸೀದಿ ಆವರಣದಲ್ಲಿ ಭಿಕ್ಷಟಣೆಯನ್ನು ನಿಷೇಧಿಸಲಾಗಿದೆ

15) ದರ್ಗಾಗಳಲ್ಲಿ ಸಿಹಿ ಹಂಚಿಕೆ ಮತ್ತು ಪಡೆಯುವುದನ್ನು ನಿಷೇಧಿಸಲಾಗಿದೆ

16) ಗೋರಿಗಳನ್ನು ಮುಟ್ಟುವುದು ಕೂಡ ನಿಷೇಧಿಸಲಾಗಿದೆ.

17) ಅಪ್ಪುಗೆ ಮತ್ತು ಕೈಕುಲುಕುವುದನ್ನು ಸಾದ್ಯವಾದಷ್ಟು ತಪ್ಪಿಸಬೇಕು

Leave a Reply

Your email address will not be published. Required fields are marked *

You May Also Like

ನಗರದಲ್ಲಿ ಮತ್ತೆ ಹಲವು ಪ್ರದೇಶಗಳು ಸೀಲ್ ಡೌನ್ ಪಟ್ಟಿಗೆ!

ಬೆಂಗಳೂರು : ನಗರದಲ್ಲಿ ಮಹಾಮಾರಿಯ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಹೆಚ್ಚಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ನಗರದ ಬಹುತೇಕ ಏರಿಯಾಗಳು ಸೀಲ್ಡೌಗನ್ ಆಗಲಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ

ಸಾರಾಯಿ ಅಂಗಡಿ ಆರಂಭದಿಂದ ಶಿಸ್ತು ಮಾಯವಾಗಿದೆ: ಶಾಸಕ ಎಚ್.ಕೆ.ಪಾಟೀಲ್

ಲಾಕ್ ಡೌನ್ ಹಿನ್ನೆಲೆ ಕಳೆದ 45 ದಿನಗಳಿಂದ ಸಾರಾಯಿ ಅಂಗಡಿ ಬಂದ ಇರುವುದರಿಂದ ಜನರಲ್ಲಿ ಶಿಸ್ತು ಇತ್ತು. ಆದರೆ ಕಳೆದ ಎರಡು ದಿನಗಳಿಂದ ಮತ್ತೆ ಸಾರಾಯಿ ಅಂಗಡಿ ಆರಂಭವಾಗಿದ್ದರಿಂದ ಜನರಲ್ಲಿ ಶಿಸ್ತು ಮಾಯವಾಗಿದೆ.

ನಿರ್ಮಾಣ ಹಂತದ ಸೇತುವೆ ಕುಸಿತ: ಮೂವರು ಭಾರತೀಯ ಸಾವು

ಉತ್ತರಾಖಂಡ ಹಿಮ ಸ್ಫೋಟದಲ್ಲಿ ತಪೋವನ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ೩೦ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದು ಇದರ ಬೆನ್ನಲ್ಲೇ ಭೂತಾನ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತದಲ್ಲಿ ಮೂವರು ಭಾರತೀಯ ಕಾರ್ಮಿಕರು ದುರ್ಮರಣ ಹೊಂದಿದ್ದು ಇನ್ನು ಆರು ಮಂದಿ ನಾಪತ್ತೆಯಾಗಿದ್ದಾರೆ.

ಮನುಕುಲದ ಸೂರ್ಯ ಲಿಂ.ತೋಂಟದ ಸಿದ್ದಲಿಂಗ ಶ್ರೀ

ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ…