ಎರಡನೆ ಶಾಸಕಾಂಗೀಯ ಪಕ್ಷದ ಸಭೆಗೂ ಗೈರು ಹಾಜರಾದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಳಿಂದ ಕೈಬಿಡಲಾಗಿದೆ.

ಜೈಪುರ: ಮೂರು ದಿನಗಳಿಂದ ಸಾರ್ವಜನಿಕವಾಗಿ ನಡೆಯುತ್ತಿರುವ  ರಾಜಸ್ತಾನ ರಾಜಕೀಯದ ಹಗ್ಗ-ಜಗ್ಗಾಟ ಈಗ ಕ್ಲೈಮಾಕ್ಸ್ ಹಂತದತ್ತ ಚಲಿಸುತ್ತಿದೆ. ಪಕ್ಷ ಸಾರ್ವಜನಿಕವಾಗಿಯೇ ಆಹ್ವಾನ ನೀಡಿದರೂ ಇಂದು ಮಂಗಳವಾರ ನಡೆದ ಎರಡನೆ ಶಾಸಕಾಂಗ ಪಕ್ಷದ ಸಭೆಗೂ ಗೈರು ಆಗುವ ಮೂಲಕ ಸಚಿನ್ ಪೈಲಟ್ ಬಿಜೆಪಿಯ ಅಂಗಳಕ್ಕೆ ಕಾಲಿಡುವ ಮುನ್ಸೂಚನೆ ನೀಡಿದ್ದಾರೆ.

ನಿನ್ನೆವರೆಗೆ 109 ಸದಸ್ಯರ ಬೆಂಬಲವಿದೆ ಎನ್ನುತ್ತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣದಲ್ಲೀಗ ಸಂಖ್ಯೆ ಕುಗ್ಗುತ್ತ ನಡೆದಿದೆ. ಪೈಲಟ್ ಬಣ ವಿಡಿಯೋ ಮತ್ತು ಪತ್ರಿಕಾ ಹೇಳಿಕೆ ಮೂಲಕ ತಾವು 30 ಸದಸ್ಯರಿದ್ದಾರೆ ಎಂದು ಪ್ರತಿಪಾದಿಸುತ್ತಿದೆ.

107 ಸದಸ್ಯರ ಬಲ ಹೊಂದಿದ್ದ ಆಡಳಿರೂಢ ಕಾಂಗ್ರೆಸ್ ಸಂಖ್ಯೆ ಈಗ 90ಕ್ಕೆ ಇಳಿದಿದ್ದು, ಇತರ ಪಕ್ಷಗಳ ಸದಸ್ಯರು ಸೇರಿ 100 ಬಲ ಹೊಂದಿದೆ. ಸರಳ ಬಹುಮತಕ್ಕೆ 101 ಸದಸ್ಯರು ಬೇಕು.

Leave a Reply

Your email address will not be published. Required fields are marked *

You May Also Like

ಕೊರೊನಾ ತಂದ ಸಂಕಷ್ಟ – ಉದ್ಯೋಗಸ್ಥರಲ್ಲಿ ಮನೆ ಮಾಡುತ್ತಿದೆ ಒತ್ತಡ!

ನವದೆಹಲಿ : ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ಇಂದು ಆತಂಕದಲ್ಲಿ ಕಾಲ ಕಳೆಯುತ್ತಿದೆ. ಇದು ಉದ್ಯೋಗದ ಮೇಲೆಯೂ ಪರಿಣಾಮ ಬೀರಿದೆ. ಇದರಿಂದಾಗಿ ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೋವಿಡ್ ಬಾಧಿತ ಮಕ್ಕಳಿಗೆ ಕವಾಸಾಕಿ ಕಾಯಿಲೆ ಕಾಟ :ಏನಿದು ಕಾಯಿಲೆ? ಲಕ್ಷಣಗಳೇನು?

ಕೋವಿಡ್ ಬಾಧಿತ ಎಲ್ಲ ಮಕ್ಕಳಲ್ಲೂ ಇದು ಕಂಡು ಬಂದಿಲ್ಲವಾದರೂ, ಭಾರತ ಸೇರಿ ವಿಶ್ವಾದ್ಯಂತ ಹಲವಾರು ಪ್ರಕರಣಗಳು ವರದಿಯಾಗಿವೆ.ಕೋವಿಡ್ ಬಾಧಿತ ಮಕ್ಕಳಲ್ಲಿ, ಸೋಂಕಿಗೆ ಒಳಗಾದ 2-3 ವಾರಕ್ಕೆ

ರಾಜ್ಯದಲ್ಲಿಂದು 239 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 239 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5452…