ನಿಂಗಪ್ಪ ಮಡಿವಾಳರ

ನರೇಗಲ್ಲ್: ರೈತರಿಗೆ ಭೂತಾಯಿಯೇ ಎಲ್ಲವೂ. ಆದರೆ ಭೂತಾಯಿಯನ್ನು ನಂಬಿ ಇನ್ನೇನು ಮೆಣಸಿನಕಾಯಿ, ಈರುಳ್ಳಿ ಬೆಳೆ ಕೈಸೇರುತ್ತೆ ಎನ್ನುವ ಲೆಕ್ಕಾಚಾರದಲ್ಲಿದ್ದ ಅನ್ನದಾತನಿಗೆ ಬುಧುವಾರದ ಬೆಳಕು ಆಘಾತದ ಸುದ್ದಿಯನ್ನು ಹೊತ್ತು ತಂದಿತ್ತು.

ನರೇಗಲ್ಲ ಸಮೀಪದ ಹಾಲಕೆರೆ ಗ್ರಾಮದಲ್ಲಿ ಬಸವರಾಜ ಅಂಗಡಿ ಅವರು 3 ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ಬೇರು ಸಮೇತ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾರೆ. 3 ಎಕರೆ ಪ್ರದೇಶದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಉತ್ತಮ ಮಳೆಯಿಂದ ತುಂಬಾ ಚೆನ್ನಾಗಿ ಬೆಳೆದಿತ್ತು. 3 ಎಕರೆ ಈರುಳ್ಳಿಗೆ ಬೀಜ ಗೊಬ್ಬರ ಔಷಧ ಆಳು ಅಂತೆಲ್ಲ ಅಂದಾಜು ‌1,50,000 ಲಕ್ಷ ಹಣವನ್ನು ರೈತ ಖರ್ಚು ಮಾಡಿದ್ದಾರೆ.

ಪಾಪದ ಕೆಲಸಾ ಬೀಜ ಗೊಬ್ಬರ ಔಷಧ ಆಳು ಸೇರಿ ಸುಮಾರು.1,50,000 ಲಕ್ಷ ಖರ್ಚಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದು.3,50,000 ಆದಾಯ ನಿರೀಕ್ಷೆಯಲ್ಲಿದ್ದೆ. ಆದರೆ ಯಾರೂ ಮಾಡಿದ ಪಾಪದ ಕೆಲಸಕ್ಕೆ ಬೆಳೆ ನಾಶವಾಗಿದೆ. ಈ ದುಷ್ಕೃತ್ಯವೆಸಗಿದವರು ಯಾರು ಅಂತ ಗೊತ್ತಾಗಿಲ್ಲ.  ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. -ಬಸವರಾಜ ಅಂಗಡಿ, ಬೆಳೆ ಹಾನಿಗೊಳಗಾದ ರೈತ

ಆದರೆ ಬೆಳೆದು ಇನ್ನೇನು ಈರುಳ್ಳಿ ಕೈಸೇರಿದ್ದರೆ 150 ಪಿಸಿ ಈರುಳ್ಳಿ ಸಿಗುತ್ತಿತ್ತು. ಈಗಿನ ಮಾರುಕಟ್ಟೆ ಧಾರಣೆಯ ಪ್ರಕಾರ 3 ಲಕ್ಷ ಆದಾಯ ಹಾಗೂ 2 ಕ್ವಿಂಟಲ್ ಮೆಣಸಿನಕಾಯಿಗೆ 50,000 ಆದಾಯ ಸಿಗುತ್ತಿತ್ತು. ಈಗಾಗಲೇ ಈರುಳ್ಳಿಯನ್ನು ಕಿತ್ತು ಹಾಕಲಾಗಿತ್ತು. ಇನ್ನು ವಾರದೊಳಗೆ ಮಾರುಕಟ್ಟೆಗೆ ಕಳಿಸುತ್ತಿದ್ದರು. ಆದರೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಟ್ರ್ಯಾಟಕ್ಟರ್ ನಿಂದ ಮೆಣಸಿನಕಾಯಿ ಬೆಳೆಯನ್ನು ಬೇರು ಸಮೇತ ನಾಶಪಡಿಸುವ ಜೊತೆಗೆ ಕಿತ್ತು ಸಾಲು ಹಾಕಿದ ಈರುಳ್ಳಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಸಂಪೂರ್ಣ ನಾಶಪಡಿಸಿದ್ದಾರೆ. ಅಂದಾಜು  3,50,000 ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿದ್ದ ರೈತ ಬಸುರಾಜ್ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಚೆನ್ನಾಗಿ ಬಂದಿತ್ತು ಈ ವರ್ಷ ಸಂಪೂರ್ಣ ಮಳೆ ಆಗಿದ್ದರಿಂದ ಉತ್ತಮ ಬೆಳೆಯ ನಿರೀಕ್ಷೆ ಮಾಡಿದ್ದೆವು. ನಿರೀಕ್ಷೆ ಪ್ರಕಾರ ಬೆಳೆ ಚೆನ್ನಾಗಿ ಬಂದಿತ್ತು. ಆದರೆ ಯಾವ ದ್ವೇಷಕ್ಕೆ ಬೆಳೆದ ಬೆಳೆ ಹಾನಿಯಾಗಿದೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ತಹ ಬೆಳವಣಿಗೆ ಸರಿಯಾದದ್ದಲ್ಲ. – ಮುತ್ತಣ್ಣ ರೊಟ್ಟಿ, ಸ್ಥಳೀಯರು.

ಈ ಕುರಿತು ನರೇಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಳೆಯಲ್ಲಾ ಸಂಪೂರ್ಣ ನಾಶವಾಗಿದೆ. ವರ್ಷದ ತುತ್ತಿಗೆ ಬೆಳೆದ ಬೆಳೆಯನ್ನೆ ನಂಬಿಕೊಂಡಿದ್ದ ರೈತನಿಗೆ ಇದು ಬಹುದೊಡ್ಡ ಆಘಾತವಾಗಿದೆ. ದ್ವೇಷ ನೇ ಇರಲಿ, ಭಿನ್ನಾಭಿಪ್ರಾಯ ಯಾವುದೇ ಇರಲಿ. ಆದರೆ ಬೆಳೆಯನ್ನು ನಾಶ ಪಡಿಸಿದ್ದು ಎಷ್ಟು ಸರಿ? ಎನ್ನುವ ಪ್ರಶ್ನೆ ಸ್ಥಳೀಯರದ್ದು.

Leave a Reply

Your email address will not be published. Required fields are marked *

You May Also Like

ಬೆಂಗಳೂರಿನಲ್ಲಿ ದಂಪತಿಯ ಬರ್ಬರ ಹತ್ಯೆ

ನಗರದಲ್ಲಿ ದಂಪತಿಯ ಹತ್ಯೆ ನಡೆದಿದ್ದು, ಮಗನಿಂದಲೇ ನಡೆದಿದೆ ಎನ್ನಲಾಗಿದೆ. ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದುರ್ದೈವಿಗಳು. ಇವರನ್ನು ಟೆಕ್ಕಿಯಾಗಿರುವ ಮಗ ನವೀನ್ ಕೊಲೆಗೈದಿರಬಹುದು ಎಂಬ ಶಂಕಿಸಲಾಗಿದೆ.

ಲಕ್ಷ್ಮೇಶ್ವರದಲ್ಲಿ : ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಕೊರೋನಾ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿರುವುದರಿಂದ ಶನಿವಾರ, ಭಾನುವಾರ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಅನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

ನಾಳೆ ಕೆರೆ ಹಸ್ತಾಂತರ ಸಮಾರಂಭ ( ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆಯವರ ಆಗಮನ)

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ

ಮಹಿಳಾ ನರ್ಸ್ ಚಿಕಿತ್ಸೆ ನೀಡುವಂತೆ ಆಸ್ಪತ್ರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕರು

ಅಪಘಾತದಲ್ಲಿ ತಮಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ಆಗಮಿಸಿದ ಇಬ್ಬರು ನಮಗೆ ಮಹಿಳಾ ನರ್ಸ್ ಚಿಕಿತ್ಸೆ ನಿಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.