ನರೇಗಲ್ಲ: ನಿಗದಿತ ಸಮಯಕ್ಕೆ ಮೇಲ್ಸೆತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಗ್ರಾಮಸ್ಥರ ಸ್ಥಿತಿ ಕೊಂಕಣಾ ಸುತ್ತಿ ಮೈಲಾರಕ್ಕೆ ಹೋದ್ರು ಅನ್ನುವಂತಾಗಿದೆ.

ಸಮೀಪದ ಹೊಸಳ್ಳಿ ಜಕ್ಕಲಿ ರಸ್ತೆಯ ಗಡ್ಡಿ ಹಳ್ಳಕ್ಕೆ ನಿರ್ಮಾಣ ಮಾಡುತ್ತಿರುವ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಂದಾಜು ಒಂದುವರೆ ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಕಾಮಗಾರಿ ಏನೋ ನಡೆದಿದೆ. ಆದ್ರೆ ಪರ್ಯಾಯ ರಸ್ತೆಯಿಲ್ಲದೆ ಸ್ಥಳೀಯರು ಸಂಚಾರಕ್ಕೆ ಪರದಾಡುವಂತಾಗಿದೆ.

ಈ ಯೋಜನೆ ಮಾಜಿ ಶಾಸಕ ಜ್ಞಾನದೇವ ದೂಡಮೇಟಿಯವರ ಕನಸಿನ ಕೂಸು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಸೇತುವೆ ನಿರ್ಮಾಣದಿಂದ ನೇರ ಮಾರ್ಗ

ಮೇಲ್ಸೇತುವೆಯಿಂದ ಗದಗದಿಂದ ಗುಡೂರ ತಲುಪಲು ನೇರ ಮಾರ್ಗ ದೊರೆಯುತ್ತದೆ. ಕೂಟುಮಚಗಿ, ನರೇಗಲ್ಲ ಜಕ್ಕಲಿ, ಹೊಸಳ್ಳಿ, ಇಟಗಿಯಿಂದ ಗುಡೂರಿಗೆ ಸಂಪರ್ಕ ದೊರೆಯುತ್ತದೆ.

ಮಳೆಗಾಲದಲ್ಲಿ ಗಡ್ಡಿಹಳ್ಳ ತುಂಬಿ ಹರಿದರೆ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಹೀಗಾಗಿ ಈ ಸೇತುವೆ ಕಾಮಗಾರಿಯಿಂದ ಸ್ಥಳೀಯರು ಸಂತಸ ಗೊಂಡಿದ್ದಾರೆ. ಆದರೆ ಕಾಮಗಾರಿ ವಿಳಂಬದಿಂದ ಆಗುತ್ತಿರುವ ತೊಂದರೆಗೆ ಇದೀಗ ಸಂಕಟವೂ ಪಡುತ್ತಿದ್ದಾರೆ.

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ. ಮಳೆ ಬಂದ್ರ ಮನಿ ಸೇರೋದು ಕಷ್ಟ ಆಗೈತಿ. ಗದಗದಿಂದ 40 ಕಿಲೋಮೀಟರ್ ದಾಗ ಊರ ಸೇರತಿದ್ವಿ. ಈಗ ಕಾಮವಾರಿನೂ ಲಗೂನಾ ಮುಗಿವಲ್ದ 60 ಕಿಲೋಮೀಟರ್ ಸುತ್ ಹೊಡೆದ್ ಊರ ಸೇರಾಕುಂತಿವಿ. ಲಗೂನ ಸೇತುವೆ ಕೆಲ್ಸಾ ಮುಗಿಸಿ ನಮ್ ಸಮಸ್ಯೆ ಬಗೆಹರಿಸ್ರಿ.

ಸಂಗಮೇಶ್ ಮೆಣಸಗಿ, ರಾಜೇಂದ್ರ ಜಕ್ಕಲಿ, ಸ್ಥಳೀಯರು.

1.74 ಕೋಟಿ ಮೊತ್ತದ ಕಾಮಗಾರಿ

ಶಾಸಕ ಕಳಕಪ್ಪ ಬಂಡಿ ಅವರು 2018ರಲ್ಲಿ 1.74 ಕೋಟಿ ಮೊತ್ತದ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಶೇ.50 ಮಾತ್ರ ಕಾಮಗಾರಿ ಮುಗಿದಿದ್ದು ಉಳಿದ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡದೆ ಕಾಮಗಾರಿ ಪ್ರಾರಂಭ ಮಾಡಿದ್ದರಿಂದಾಗಿ ಸ್ವಲ್ಪ ಮಳೆಯಾದರೆ ಸಾಕು ಸಂಚಾರ ಸ್ಥಗಿತವಾಗುತ್ತದೆ.

ಮಳೆಗಾಲ ಮುಗಿದ ನಂತರ ಕಾಮಗಾರಿ

ಹೊಸಳ್ಳಿ-ಜಕ್ಕಲಿ ಗಡ್ಡಿ ಹಳ್ಳದ ಮೇಲ್ಸೇತುವೆ ಕಾಮಗಾರಿ ಮಳಗಾಲವಿದ್ದರಿಂದ ಸ್ಥಗಿತಗೊಂಡಿದೆ. ದೊಡ್ಡ ಪ್ರಮಾಣದ ಕ್ರೇನ್ ಬಳಸಿ ಸೇತುವೆ ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ ಮಳೆಗಾಲ ಕಳೆದ ಮೇಲೆ ಕಾಮಗಾರಿ ಮುಂದುವರೆಸುತ್ತೆವೆ. – ರಾಜಶೇಖರ, ಪ್ರೊಜೆಕ್ಟ್ ಮ್ಯಾನೇಜರ್

40 ಕಿಮಿ ರಸ್ತೆಗೆ 60 ಕಿಮಿ ಸುತ್ತು

ಗದಗದಿಂದ ಹೊಸಳ್ಳಿಗೆ 40 ಕಿಮಿ ಅಂತರವಿದೆ. ಆದರೆ ಈಗ ಕಾಮಗಾರಿ ನಡೆದಿರುವುದರಿಂದ ಇಲ್ಲಿನ ಜನರು ರೋಣ ಮಾರ್ಗವಾಗಿಯೇ ಊರು ಸೇರಬೇಕಿದೆ. ಇದರಿಂದ 20 ಕಿಮಿ ಹೆಚ್ಚುವರಿಯಾಗಿ ಅಂದರೆ 60 ಕಿಮಿ ದೂರವಾಗುತ್ತದೆ. ಇದರಿಂದ ಪ್ರಯಾಣಿಕರ ಸಮಯ ಹಾಗೂ ಹೆಚ್ಚು ಹಣ ವ್ಯಯವಾಗುತ್ತದೆ. ಇನ್ನು ಮಳೆಯಾದರೆ ಸಾಕು ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕಾಮಗಾರಿ ಯಾವಾಗ ಮುಗಿಯಿತ್ತೂ ಅಂತಾ ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ.


Leave a Reply

Your email address will not be published. Required fields are marked *

You May Also Like

ಶ್ರೀ ಸೇವಾಲಾಲ ಮಹಾರಾಜರ 284ನೇ ಜಯಂತ್ಯೋತ್ಸವ : ಮಾಲಾಧಾರಿಗಳಿಂದ ಮಹಾಪೂಜೆ

ಉತ್ತರಪ್ರಭ ಬೆಳದಡಿ ತಾಂಡಾ: ಬ್ರಹ್ಮಾನಂದಪುರ ದಲ್ಲಿ ಇಂದು ಬೆಳಗ್ಗೆ 11:00 ಗಂಟೆಗೆ ಬಂಜಾರ ಕುಲಗುರು ಸಂತ…

ಗದಗ ನಗರಸಭೆ: 25 ನೇ ವಾರ್ಡಿನಲ್ಲಿ ಗೆಲುವಿನತ್ತ ಸಂಚಲನ ಮೂಡಿಸಿದ ವಿನಾಯಕ ಮಾನ್ವಿ ಈ ಬಾರಿ ಅಶೋಕ ಮಂದಾಲಿ ಮಂದಾಗೋ ಸಾಧ್ಯತೆ!

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ–2021,  ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನಕ್ಕೆ…

ಕಂಟೆನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ

ರಾಜ್ಯದಲ್ಲಿ ಕೋವಿಡ್-19 ವಿಕಸಿಸುತ್ತಿರುವ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಅಕ್ಕ-ಪಕ್ಕದಲ್ಲಿರುವ/ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್ಮೆಂಟ್/ ವಸತಿ ಸಮುಚ್ಛಯಗಳಲ್ಲಿ ವರದಿಯಾಗುತ್ತಿವೆ. ಇದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯು ಮಿತಿ ಮೀರಿದ್ದು, ಪ್ರಾಧಿಕಾರಿಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುವುದೇ ಅಲ್ಲದೇ, ಪರಿಧಿ ವಲಯ ನಿಯಂತ್ರಣವನ್ನೂ ಸಹ ಖಚಿತಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಶಾಸಕರೇ, ಆದರಳ್ಳಿ ಗ್ರಾಮದ ಬಗ್ಗೆ ಇಷ್ಟೇಕೆ ನಿರಾಸಕ್ತಿ?

ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ತಾಲೂಕಿನ ಆದರಹಳ್ಳಿ ಗ್ರಾಮದ ವಡ್ಡರ್ ಪಾಳ್ಯದ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.