ನರೇಗಲ್ಲ: ನಿಗದಿತ ಸಮಯಕ್ಕೆ ಮೇಲ್ಸೆತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಗ್ರಾಮಸ್ಥರ ಸ್ಥಿತಿ ಕೊಂಕಣಾ ಸುತ್ತಿ ಮೈಲಾರಕ್ಕೆ ಹೋದ್ರು ಅನ್ನುವಂತಾಗಿದೆ.

ಸಮೀಪದ ಹೊಸಳ್ಳಿ ಜಕ್ಕಲಿ ರಸ್ತೆಯ ಗಡ್ಡಿ ಹಳ್ಳಕ್ಕೆ ನಿರ್ಮಾಣ ಮಾಡುತ್ತಿರುವ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಂದಾಜು ಒಂದುವರೆ ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಕಾಮಗಾರಿ ಏನೋ ನಡೆದಿದೆ. ಆದ್ರೆ ಪರ್ಯಾಯ ರಸ್ತೆಯಿಲ್ಲದೆ ಸ್ಥಳೀಯರು ಸಂಚಾರಕ್ಕೆ ಪರದಾಡುವಂತಾಗಿದೆ.

ಈ ಯೋಜನೆ ಮಾಜಿ ಶಾಸಕ ಜ್ಞಾನದೇವ ದೂಡಮೇಟಿಯವರ ಕನಸಿನ ಕೂಸು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಸೇತುವೆ ನಿರ್ಮಾಣದಿಂದ ನೇರ ಮಾರ್ಗ

ಮೇಲ್ಸೇತುವೆಯಿಂದ ಗದಗದಿಂದ ಗುಡೂರ ತಲುಪಲು ನೇರ ಮಾರ್ಗ ದೊರೆಯುತ್ತದೆ. ಕೂಟುಮಚಗಿ, ನರೇಗಲ್ಲ ಜಕ್ಕಲಿ, ಹೊಸಳ್ಳಿ, ಇಟಗಿಯಿಂದ ಗುಡೂರಿಗೆ ಸಂಪರ್ಕ ದೊರೆಯುತ್ತದೆ.

ಮಳೆಗಾಲದಲ್ಲಿ ಗಡ್ಡಿಹಳ್ಳ ತುಂಬಿ ಹರಿದರೆ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಹೀಗಾಗಿ ಈ ಸೇತುವೆ ಕಾಮಗಾರಿಯಿಂದ ಸ್ಥಳೀಯರು ಸಂತಸ ಗೊಂಡಿದ್ದಾರೆ. ಆದರೆ ಕಾಮಗಾರಿ ವಿಳಂಬದಿಂದ ಆಗುತ್ತಿರುವ ತೊಂದರೆಗೆ ಇದೀಗ ಸಂಕಟವೂ ಪಡುತ್ತಿದ್ದಾರೆ.

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ. ಮಳೆ ಬಂದ್ರ ಮನಿ ಸೇರೋದು ಕಷ್ಟ ಆಗೈತಿ. ಗದಗದಿಂದ 40 ಕಿಲೋಮೀಟರ್ ದಾಗ ಊರ ಸೇರತಿದ್ವಿ. ಈಗ ಕಾಮವಾರಿನೂ ಲಗೂನಾ ಮುಗಿವಲ್ದ 60 ಕಿಲೋಮೀಟರ್ ಸುತ್ ಹೊಡೆದ್ ಊರ ಸೇರಾಕುಂತಿವಿ. ಲಗೂನ ಸೇತುವೆ ಕೆಲ್ಸಾ ಮುಗಿಸಿ ನಮ್ ಸಮಸ್ಯೆ ಬಗೆಹರಿಸ್ರಿ.

ಸಂಗಮೇಶ್ ಮೆಣಸಗಿ, ರಾಜೇಂದ್ರ ಜಕ್ಕಲಿ, ಸ್ಥಳೀಯರು.

1.74 ಕೋಟಿ ಮೊತ್ತದ ಕಾಮಗಾರಿ

ಶಾಸಕ ಕಳಕಪ್ಪ ಬಂಡಿ ಅವರು 2018ರಲ್ಲಿ 1.74 ಕೋಟಿ ಮೊತ್ತದ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಶೇ.50 ಮಾತ್ರ ಕಾಮಗಾರಿ ಮುಗಿದಿದ್ದು ಉಳಿದ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡದೆ ಕಾಮಗಾರಿ ಪ್ರಾರಂಭ ಮಾಡಿದ್ದರಿಂದಾಗಿ ಸ್ವಲ್ಪ ಮಳೆಯಾದರೆ ಸಾಕು ಸಂಚಾರ ಸ್ಥಗಿತವಾಗುತ್ತದೆ.

ಮಳೆಗಾಲ ಮುಗಿದ ನಂತರ ಕಾಮಗಾರಿ

ಹೊಸಳ್ಳಿ-ಜಕ್ಕಲಿ ಗಡ್ಡಿ ಹಳ್ಳದ ಮೇಲ್ಸೇತುವೆ ಕಾಮಗಾರಿ ಮಳಗಾಲವಿದ್ದರಿಂದ ಸ್ಥಗಿತಗೊಂಡಿದೆ. ದೊಡ್ಡ ಪ್ರಮಾಣದ ಕ್ರೇನ್ ಬಳಸಿ ಸೇತುವೆ ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ ಮಳೆಗಾಲ ಕಳೆದ ಮೇಲೆ ಕಾಮಗಾರಿ ಮುಂದುವರೆಸುತ್ತೆವೆ. – ರಾಜಶೇಖರ, ಪ್ರೊಜೆಕ್ಟ್ ಮ್ಯಾನೇಜರ್

40 ಕಿಮಿ ರಸ್ತೆಗೆ 60 ಕಿಮಿ ಸುತ್ತು

ಗದಗದಿಂದ ಹೊಸಳ್ಳಿಗೆ 40 ಕಿಮಿ ಅಂತರವಿದೆ. ಆದರೆ ಈಗ ಕಾಮಗಾರಿ ನಡೆದಿರುವುದರಿಂದ ಇಲ್ಲಿನ ಜನರು ರೋಣ ಮಾರ್ಗವಾಗಿಯೇ ಊರು ಸೇರಬೇಕಿದೆ. ಇದರಿಂದ 20 ಕಿಮಿ ಹೆಚ್ಚುವರಿಯಾಗಿ ಅಂದರೆ 60 ಕಿಮಿ ದೂರವಾಗುತ್ತದೆ. ಇದರಿಂದ ಪ್ರಯಾಣಿಕರ ಸಮಯ ಹಾಗೂ ಹೆಚ್ಚು ಹಣ ವ್ಯಯವಾಗುತ್ತದೆ. ಇನ್ನು ಮಳೆಯಾದರೆ ಸಾಕು ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕಾಮಗಾರಿ ಯಾವಾಗ ಮುಗಿಯಿತ್ತೂ ಅಂತಾ ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ.


Leave a Reply

Your email address will not be published. Required fields are marked *

You May Also Like

ಶಾಸಕ‌ ಶಿವನಗೌಡ ಬಗ್ಗೆ ಮಾತಾಡುವ ನೈತಿಕತೆ ಪ್ರತಾಪಗೌಡಗೆ ಇಲ್ಲ;ಶಿವಣ್ಣ ನಾಯಕ

ಉತ್ತರಪ್ರಭ ಸುದ್ದಿ ಮಸ್ಕಿ‌: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕನ ಬಗ್ಗೆ ಮಾತನಾಡಲು ಪ್ರತಾಪಗೌಡ ಪಾಟೀಲಗೆ ಯಾವ…

ಪಿಎಂ ಕೇರ್ಸ್ ಯಾರೊಬ್ಬರ ಮನೆಯ ಆಸ್ತಿಯಲ್ಲ: ಸಿದ್ದರಾಮಯ್ಯ

ಬೆಂಗಳೂರು: ದೇಶದ ಜನರ ದೇಣಿಗೆಯ ಪಿಎಂ ಕೇರ್ಸ್ ಫಂಡ್ (PMCaresFund) ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು, ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೆ ಇದೆ. ಅದನ್ನೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾಗಾಂಧಿಯವರು ಹೇಳಿದ್ದಾರೆ ತಪ್ಪೇನಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶೋಷಣೆಯನ್ನು ಮೆಟ್ಟಿ ನಿಲ್ಲುವ ಶಕ್ತಿ ಮಹಿಳೆಯರಿಗಿದೆ: ತೋಂಟದ ಸಿದ್ಧರಾಮಶ್ರೀಗಳು

ಉತ್ತರಪ್ರಭ ಗದಗ: ಭಾರತೀಯ ಪರಂಪರೆಯಲ್ಲಿ ಹೆಣ್ಣುಮಕ್ಕಳಿಗೆ ದೇವರ ಸ್ಥಾನ ನೀಡಿದ್ದರೂ ಹೆಣ್ಣನ್ನು ಹೀನಾಯವಾಗಿ ಕಾಣುವ ಸಾಮಾಜಿಕ…

ಮತ್ತೆ ಕೇಂದ್ರದಿಂದ ಪಡಿತರರಿಗೆ ಶುಭ ಸುದ್ದಿ

ಕೊರೋನಾ ಹಿನ್ನಲೆಯಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪರಿತರ ಚೀಟಿ ಹೊಂದಿದವರಿಗೆ 5 ಕೆ.ಜಿ ಅಕ್ಕಿ ವಿತರಸಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ತಿಳಿಸಿದ್ದಾರೆ.