ಕಂಟೆನ್ಮೆಂಟ್  ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಪರಿಷ್ಕೃತ ಮಾರ್ಗಸೂಚಿಯಲ್ಲಿ ಯಾವ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ವಿಕಸಿಸುತ್ತಿರುವ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಅಕ್ಕ-ಪಕ್ಕದಲ್ಲಿರುವ/ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್ಮೆಂಟ್/ ವಸತಿ ಸಮುಚ್ಛಯಗಳಲ್ಲಿ ವರದಿಯಾಗುತ್ತಿವೆ. ಇದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯು ಮಿತಿ ಮೀರಿದ್ದು, ಪ್ರಾಧಿಕಾರಿಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುವುದೇ ಅಲ್ಲದೇ, ಪರಿಧಿ ವಲಯ ನಿಯಂತ್ರಣವನ್ನೂ ಸಹ ಖಚಿತಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಅಧಿಸೂಚನೆ ಹಾಗೂ ಮುಕ್ತಗೊಳಿಸುವುದು (ಸಡಿಲಿಸುವಿಕೆ) ಕುರಿತು ಈ ಕೆಳಕಂಡಂತೆ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ.

  1. ಕಂಟೇನ್ಮೆಂಟ್ ವಲಯವೆಂದು ಅಧಿಸೂಚನೆ ಹೊರಡಿಸುವ ಬಗ್ಗೆ

ಕಂಟೇನ್ಮೆಂಟ್ ವಲಯ:

  1. ಕೋವಿಡ್-19 (ನೋವೆಲ್ ಕೊರೋನಾ ವೈರಸ್) ದೃಢಪಟ್ಟ ಪ್ರಕರಣ/ ವ್ಯಕ್ತಿಯು ವಾಸವಿರುವ ಮನೆಯ ಸುತ್ತಲಿನ ಸುಸ್ಪಷ್ಟ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಕರೆಯಲಾಗುತ್ತದೆ. ಸದರಿ ಪ್ರದೇಶದಲ್ಲಿ ಸೋಂಕು ಹರಡದಂತೆ ತೀವ್ರ ಗತಿಯಲ್ಲಿ ಅಗತ್ಯ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ.
  2. ಮರದಿಯಾಗುವ “ಪ್ರತಿ ಪ್ರಕರಣದ” ಅನ್ವಯ “ಪ್ರದೇಶ”ವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗಿದೆ:
  3. ವಸತಿ ಸಮುಚ್ಛಯಗಳು ಕೋವಿಡ್-19 ದೃಢಪಟ್ಟ ವ್ಯಕ್ತಿಯ ಮನೆ ಇರುವ ಮಹಡಿ.
  4. ಸ್ವತಂತ್ರವಾದ ಮನೆ/ ವಿಲ್ಲಾ ಕೋವಿಡ್-19 ದೃಢಪಟ್ಟ ವ್ಯಕ್ತಿಯು ವಾಸವಿರುವ ಮನೆ/ವಿಲ್ಲಾ.
  5. ಕೊಳಗೇರಿ ಪ್ರದೇಶ ಕೋವಿಡ್-19 ದೃಢಪಟ್ಟ ವ್ಯಕ್ತಿಯ ಮನೆ ಇರುವ ಬೀದಿ/ ರಸ್ತೆ.
  • ಗ್ರಾಮಾಂತರ ಪ್ರದೇಶದಲ್ಲಿ, ಕೋವಿಡ್-19 ದೃಢಪಟ್ಟ ವ್ಯಕ್ತಿಯು ವಾಸವಿರುವ ಸಂಪೂರ್ಣ ವಾಸಸ್ಥಾನ ಅಥವಾ ವ್ಯಕ್ತಿಯ ವಾಸಸ್ಥಾನದ ಅಕ್ಕ-ಪಕ್ಕದಲ್ಲಿ ಪರಸ್ಪರ ಹೊಂದಿಕೊಂಡಂತಿರುವ, ಸೂಕ್ತವಾದ ಸಣ್ಣ ಪ್ರದೇಶಗಳನ್ನು ಪರಿಗಣಿಸಬೇಕು.
  • ವರದಿಯಾಗುವ ಪ್ರತಿ ಪ್ರಕರಣದ ಮನೆಯ ಮೇಲೆ ನೋಟಿಸ್ ಅಂಟಿಸುವುದು, ನೆರೆ ಹೊರೆಯವರಿಗೆ, ರೆಸಿಡೆಂಟ್ ವೆಲ್‌ಫೇರೆ ಅಸೋಸಿಯೇಷನ್/ ವಸತಿ ಸಮುಚ್ಛಯದ ಮಾಲೀಕರ ಅಸೊಸಿಯೇಷನ್‌ಗೆ ಮಾಹಿತಿ ನೀಡುವುದ, ಸಂಪರ್ಕಿತರನ್ನು ಗುರುತಿಸುವುದು, ಹೋಂ ಕ್ವಾರೆಂಟೈನ್‌ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುಂತೆ ಸೂಚಿಸುವುದು, ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುವುದನ್ನು ಖಚಿತಪಡಿಸಿಕೊಳ್ಳುವುದು, ಇತ್ಯಾದಿಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಇಂತಹ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಅಗತ್ಯವಿರುವುದಿಲ್ಲ. ಪ್ರಕರಣಗಳ ಹಾಗೂ ಸಂಪರ್ಕಿತರ ಹ್ಯಾಂಡ್‌ ಸ್ವ್ಯಾಪಿಂಗ್ನ ಅಗತ್ಯವಿರುವುದಿಲ್ಲ.
  • ಯಾವುದೇ ಪ್ರದೇಶಲ್ಲಿ ಪ್ರಕರಣಗಳು ಗುಂಪಾಗಿ ವರದಿಯಾದ ಸಂದರ್ಭದಲ್ಲಿ ಈ ಕೆಳಗಿನಂತೆ ಕ್ರಮವಹಿಸುವುದು:

ಒಂದು ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ ಕಾರ್ಯಾಚರಣೆಯ ಉದ್ದೇಶದಿಂದ ಕಂಟೇನ್ಮೆಂಟ್ ವಲಯವು ಸಾಕಷ್ಟು ವಿಸ್ತಾರವಾಗುರಬೇಕು ಹಾಗೂ ಪಕ್ಕ ಪಕ್ಕದಲ್ಲಿರುವ/ ಹತ್ತಿರವಿರುವ ಕೋವಿಡ್ ಪ್ರಕರಣಗಳ ಗುಂಪನ್ನು ಒಳಗೊಂಡಿರಬೇಕು. ಸದರಿ ಪ್ರದೇಶದ ಅಳತೆ/ ವಿಸ್ತಾರ ಹಾಗೂ ಗಡಿರೇಖೆಯನ್ನು ಈ ಕೆಳಗಿನಂತೆ ನಿರ್ಧರಿಸಬೇಕು:

2. ಪ್ರಕರಣಗಳು ಹಾಗೂ ಸಂಪರ್ಕಿತರನ್ನು ಮ್ಯಾಪ್ ಮಾಡುವ ಮೂಲಕ.

  1. ಪ್ರಕರಣಗಳು ಹಾಗೂ ಸಂಪರ್ಕಿತರ ಭೌಗೋಳಿಕ ಪ್ರಸರಣದ ಆಧಾರದ ಅನ್ವಯ.
  2. ಗುರುತಿಲಾದ ಪರಿಧಿ ವಲಯ ಆಧಾರದ ಮೇಲೆ.
  3. ಪರಿಧಿ ವಲಯ ನಿಯಂತ್ರಣವನ್ನು ಜಾರಿಗೊಳಿಸುವ ಸಂದರ್ಭದಲ್ಲಿ. ಆಯಾ ಜಿಲ್ಲಾಧಿಕಾರಿಗಳು/ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇವರು ಸ್ಥಳೀಯವಾದ ತಾಂತ್ರಿಕ ಸಲಹೆ/ಸೂಚನೆಗಳೊಂದಿಗೆ ಈ ಪ್ರದೇಶವನ್ನು ರಸ್ತೆಗಳು, ಪಾರ್ಕ್ಗಳು, ಚರಂಡಿಗಳು ಅಥವಾ ಭೌಗೋಳಿಕವಾಗಿ ಪ್ರತ್ಯೇಕಿಸಲು ಸೂಕ್ತವೆನಿಸುವ ಇನ್ನಾವುದೇ ವೈಶಿಷ್ಟ್ಯಗಳ ಆಧಾರದ ಮೇಲೆ ಪರಿಧಿ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೋಳಿಸಲು ಗುರುತಿಸುವರು. ಪರಿಣಾಮಕಾರಿ ನಿಯಂತ್ರಣಕ್ಕಾಗಿ ಮೇಲೆ ತಿಳಿಸಿದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.

3. ಬಫರ್ ವಲಯ

  1. ಹೊಸದಾಗಿ ಕೋವಿಡ್-19 ಪ್ರಕರಣಗಳು ವರದಿಯಾಗುವ ಸಂಭವವಿರುವ ಪ್ರದೇಶವನ್ನು ‘ಬಫರ್ ವಲಯ’ ಎಂದು ವ್ಯಾಖ್ಯಾನಿಸಲಾಗುತ್ತದೆ..
  2. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವಂತೆ, ಕಂಟೇನ್ಮೆಂಟ್ ವಲಯದ ಸುತ್ತಲಿನ 200 ಮೀಟರ್ ತ್ರಿಜ್ಯದ ಪ್ರದೇಶವನ್ನು ಬಫರ್ ವಲಯ ಎಂದು ಕರೆಯಲಾಗುತ್ತದೆ.
  3. ಆಯಾ ಜಿಲ್ಲಾಧಿಕಾರಿಗಳು/ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇವರು ಮೇಲೆ ತಿಳಿಸಿದ ಮಾನದಂಡಗಳ ಅನ್ವಯ ರಸ್ತೆಗಳು, ಪಾರ್ಕ್ ಗಳು, ಚರಂಡಿಗಳು ಅಥವಾ ಭೌಗೋಳಿಕವಾಗಿ ಪ್ರತ್ಯೇಕಿಸಲು ಸೂಕ್ತವೆನಿಸುವ ಇನ್ನಾವುದೇ ವೈಶಿಷ್ಟ್ಯಗಳ ಆಧಾರದ ಬಫರ್ ವಲಯವನ್ನು ಗುರುತಿಸುವರು.

4. ಸಕ್ರಿಯ ಸರ್ವೇಕ್ಷಣೆ:

ಧಾರಕ ವಲಯ ಹಾಗೂ ಬಫರ್ ವಲಯದಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು/ ನಿಯಂತ್ರಿಸಲು, ಸಕ್ರಿಯ ಸಮೀಕ್ಷೆ ನಡೆಸಬೇಕು ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಧಾರಕ ವಲಯದಲ್ಲಿ ಮನೆ ಮನೆ ಸಮೀಕ್ಷೆಯನ್ನು ಪ್ರತಿದಿನ ನಡೆಸಬೇಕು ಹಾಗೂ ಬಫರ್ ವಲಯದಲ್ಲಿ ಕಡ್ಡಾಯವಾಗಿ ವಾರದಲ್ಲಿ ಎರಡು ಬಾರಿ ನಡೆಸಬೇಕು.

Leave a Reply

Your email address will not be published. Required fields are marked *

You May Also Like

ನಮ್ಮ ಕರವೇ ಗ್ರಾಮ ಘಟಕ ಉದ್ಘಾಟನೆ

ತಾಲೂಕಿನ ಉಪ್ಪಾರ ಬುದ್ದಿನಿ ಗ್ರಾಮದಲ್ಲಿ ನಮ್ಮ‌ ಕರವೇ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ತಾಲೂಕ ಘಟಕ ನಮ್ಮ ಕರವೇ ಅಧ್ಯಕ್ಷ ಬಸವರಾಜ ಉದ್ಬಾಳ ಅವರು ಮಾತನಾಡಿ, ನಾಡು ನುಡಿ, ಜಲ, ಭಾಷೆ ರಕ್ಷಣೆಗೆ ನಮ್ಮ ಕರವೇ ಕಾರ್ಯಕರ್ತರು ಬದ್ದರಾಗಿರಬೇಕೆಂದು ಹೇಳಿದರು.

ಅಬ್ಯರ್ಥಿ ಗೆದ್ದಿದ್ದಾರೆ ಆದರೆ ಗೆಲುವು ಸಂಭ್ರಮಿಸಲು ಅವರೆ ಇಲ್ಲ

ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಇನ್ನೇನು ಫಲಿತಾಂಶ ಹೊರಬರುವುದು ಬಾಕಿ ಇತ್ತು. ಆದರೆ ಫಲಿತಾಂಶ ನಾಯಿತು ಎಂದು ನೋಡಲು, ಕೇಳಲು ನಿಂತ ವ್ಯಕ್ತಿಯೇ ಇಲ್ಲ.

ಸಿದ್ಧರಾಮಯ್ಯ ಗೆ ಅಹಿಂದ ಮತದಾರರ ಬೆಂಬಲ

ಉತ್ತರಪ್ರಭ ಸುದ್ದಿ ಬಸವನಬಾಗೇವಾಡಿ: ಶಿವಾನಂದ ಪಾಟೀಲ ಎರಡೂ ಬಾರಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಎರಡೂ ಬಾರಿ…

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರ ಆಯ್ಕೆ

ಉತ್ತರಪ್ರಭ ಸುದ್ದಿಶಿರಹಟ್ಟಿ : ತಾಲೂಕಿನ ಅಲಗಿಲವಾಡ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮರಿಯಪ್ಪ…