ಸತ್ತವ್ರು ಬದಕಿದ್ದು, ಬದುಕಿದವರು ಸತ್ತಿದ್ದು ಇಂಥ ಅದೆಷ್ಟ್ ಘಟನಾ ನಾವು ಕೇಳಿವಿ, ನೋಡಿವಿ. ಆದ್ರ ಎಂತೆಂಥ ಚಿತ್ರ-ವಿಚಿತ್ರ ಘಟನೆನಾ ನಾವು ಕೇಳಿವಿ, ನೋಡಿವಿ. ಆದ್ರ ಈ ಘಟನಾ ಮಾತ್ರ ನಾವು ಎಂದು ಕಾಣದ್ದು, ಕೇಳದ್ದು ಅಂದ್ರು ತಪ್ಪಾಗ್ಲಿಕ್ಕಿಲ್ಲ.

ಸರ್ಕಾರದ ಯೋಜನಾದ ಸಲುವಾಗಿ ಮಂದಿ ಏನೆಲ್ಲ ಮಾಡ್ತಾರ ಅನ್ನೋದಕ್ಕ ಇದೊಂದು ಉದಾಹರಣೆ. ಆದ್ರ  ಸುದ್ದಿ ಓದಿದ್ರ ಓದಿದವ್ರಿಗೂ ದಿಗಿಲು ಬಿದ್ದಂಗ್ ಆಕ್ಕೈತಿ.

ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಊರವೊಂದರೊಳಗ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯೊಳಗ ಇಂತಹ ಭಯಂಕರ ದುರುಪಯೋಗವೊಂದು ನಡದೈತಿ. 66 ವರ್ಷದ ಹೆಣ್ಮಗಳೊಬ್ಬಳಿಗೆ 18 ತಿಂಗಳೊಳಗ 8 ಮಕ್ಕಳಾಗ್ಯಾವಂತ! ಇಲ್ಲಿ 50 ಹೆಣ್ಮಕ್ಕಳು ರಾಷ್ಟ್ರೀಯ ಮಾತೃತ್ವ ಯೋಜನೆಯೊಳಗ ತಿಂಗಳಿಗೆ ಒಂದು ವರ್ಷಕ್ಕ 1,400 ಪಡಿದಾರಂತ! ನಿಜವಾದ ಫಲಾನುಭವಿಗಳಿಗೆ ಯೋಜನಾ ಲಾಭ ಸಿಗದ ಬ್ಯಾರೆಯವರು ಯೋಜನೆಯ ಲಾಭ ಪಡೆದುಕೊಳ್ಳುತಿದ್ರು.

ಶಾಂತಿದೇವಿ ಅನ್ನೋ ಹೆಣ್ಮಗಳ ಸಣ್ ಮಗನಿಗಿಂತ 20 ವರ್ಷಕ್ಕಿಂತ ಹೆಚ್ಚಾಗ್ಯಾವು. ಆದ್ರ ಆರೋಗ್ಯ ಇಲಾಖೆಯಿಂದ 2019 ರಿಂದ ಇಲ್ಲಿತಂಕ ರೂ. 1,400 ರಂಗ 6 ಸಲ ಬಂದೈತಿ. ಆಕಿಗೆ ವೃದ್ಯಾಪ್ಯ ವೇತನನೂ ಸಿಗತೈತ್ಯಂತ.

ಸಮುದಾಯ ಸೇವಾ ಕೇಂದ್ರ(ಸಿ.ಎಸ್.ಪಿ)ಯ ಕಾರ್ಯನಿರ್ವಾಹಕ ಸುಶಿಲ್ ಕುಮಾರ್ ಈ ಪ್ರಕರಣ ಬೆಳಕಿಗೆ ಬರತಿದ್ದಂಗ ತಲಿ ಮರಿಸಿಕೊಂಡಾರಂತ. ಜಿಲ್ಲಾಧಿಕಾರಿಗಳ ನೇತೃತ್ವದೊಳಗ ನಾಲ್ಕು ಸದಸ್ಯರ ತಂಡದಿಂದ ತನಿಖೆ ನಡಿಸಬೇಕು ಅಂತ ಮುಜಾಫರ್ ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಆದೇಶ ಮಾಡ್ಯಾರ.

Leave a Reply

Your email address will not be published. Required fields are marked *

You May Also Like

ಕೊರೋನಾ ಕಾವ್ಯ-4

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಹಾವೇರಿ ಜಿಲ್ಲೆಯ ಜನತೆಗೆ ಮೊದಲ ಸಿಹಿ ಸುದ್ದಿ.

40 ವರ್ಷದ ಕರೊನಾ ಸೋಂಕಿತ ವ್ಯಕ್ತಿ ಗುಣಮುಖವಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಹಾವೆರಿ ಜಿಲ್ಲೆಯ ಜನತೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಪಿ-672 ಸೋಂಕಿತ ಗುಣಮುಖವಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಈ ನಟ ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲಿಗ!

ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ.

ಬಿಸ್ಲಾಗ ನಿಂತಕಿಯ ನೆರಳಿನಾಟ

ಇದು ‘ಸುದ್ದಿ ಕಾಲ’! ಹಾಗಂದರೆ ಏನೆಂದು ತಿಳಿದಿರಬೇಕಲ್ಲವೆ? ಹೌದು ಅದೇ ‘ಸುದ್ದಿ’ ವಿಷಯ. ಕೆಟ್ಟ ಸುದ್ದಿಯ ಸುರಿಮಳೆ. ಈಗ ತಿಳಿಯಿತಲ್ಲ ಸಾವಿನ ಸುದ್ದಿ ಎಂದು? ಇತ್ತೀಚೆಗೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮವರು, ತಮ್ಮವರು, ಬಹಳ ಹತ್ತಿರದಿಂದ ಕಂಡವರು, ಸಣ್ಣ ವಯಸ್ಸಿನವರು, ವಯಸ್ಸಾದವರು, ಹೀಗೆ ಒಬ್ಬರಲ್ಲ ಒಬ್ಬರು ನಿತ್ಯ ನಮ್ಮನ್ನಗಲುತ್ತಿದ್ದಾರೆ. ಇದಕ್ಕೆ ಕೊನೆ ಎಂದು? ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಉತ್ತರವಿಲ್ಲದ ಪ್ರಶ್ನೆಗೆ ‘ಕಾಲ’ವೇ ಉತ್ತರಿಸಬೇಕು.