ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಊಹಿಸದೇ ಬಂದ ಘಳಿಗೆ

ಕಾಲ ಹೀಗೆ ಇರೋದಿಲ್ಲ

ಮನುಷ್ಯ ಎಷ್ಟೇ ಮುಂದುವರೆದರೂ

ಪ್ರಕೃತಿ ಮಾತೆಯ ಮುಂದೆ ಕುಬ್ಜನೆಂಬುದು ಸಾಬೀತು ಆಗಿದೆ

ಯಾವುದೆಲ್ಲಾ ಮುಖ್ಯವೆಂದು ಜಗತ್ತಿಗೆ ತೋರಿಸಿಬಿಟ್ಟೆಯಾ ವೈರಸ್

ಚೀನಾದ ವುಹಾನ್ ಹುಟ್ಟೂರು

ಇಡಿ ವಿಶ್ವದಲ್ಲಿ ಸಾಂಕ್ರಾಮಿಕವಾಗಿ ಮುಂದುವರೆದಿದೆ

ಅಂತ್ಯಕ್ಕೊಂದು ಸಮಯ ಬೇರಬೇಕಾಗಿದೆ ಸಾಬಿತು ಆಗಬೇಕಾಗಿದೆ

ಸಮಯ ಹೀಗೆ ಇರುವದಿಲ್ಲ ಸಾಬೀತು ಮಾಡಿ ಸಾರಿ ಬಿಟ್ಟೆಯಾ ವೈರಸ್

ಶೀತ ನೆಗಡಿ ಕೆಮ್ಮು ಸಾಮಾನ್ಯ ಅಲ್ಲ

ಶುರುವಾಗಿ ಮನುಷ್ಯ ಉಸಿರಾಟಕ್ಕೆ ತೊಂದರೆ ಮಾಡಿ

ಒಂದು ಸಾಂಕ್ರಾಮಿಕವಾಗಿ ಕಾಡುವದು ಎಲ್ಲರಲ್ಲೂ ನಿನ್ನ ಗುಣ ಆಗಿದೆ

ಹುಟ್ಟು ಸಾವು ಪ್ರಕೃತಿಯ ನಿಯಮ ಎಂಬುದು ನೆನಪಿಸಿಬಿಟ್ಟೆಯಾ ವೈರಸ್

ಅದೆಷ್ಟು ಜನರ ಬದುಕಿಗೆ ಸಂಚಕಾರ ತಂದೆಯಾ

ಹಣದಿಂದ ಮೆರೆಯುವನಿಗೆ ಒಂದಿಷ್ಟು

ಜೀವನಮುಖ್ಯವಲ್ಲ ಜೀವ ಮುಖ್ಯ ಏಕತೆಯ ಮಂತ್ರ ಹಾಡಿದೆ

ಕಾಲಚಕ್ರ ಹೀಗೆ ಇರುವದಿಲ್ಲ ಎಂಬುದು ಸಾಬೀತು ಮಾಡಿಬಿಟ್ಟೆಯಾ ವೈರಸ್

ಆದೆಷ್ಟೋ ಕಾಯಿಲೆಗಳು ಬಂದವು

ನೋವು ಕೊಟ್ಟು ಬೆಂದು ಹೋದವು

ಈಗಷ್ಟೇ ಜಾಗೃತನಾಗಬೇಕು

ಮಾಸ್ಕ ಸ್ಯಾನಿಟೇಜರ್ ಅಂತರ ಕಾಯ್ದುಕೊಳ್ಳೋದು ಒಳಿತಿಗಾಗಿ ಒಳ್ಳೆಯ ಸಮಯಕ್ಕಾಗಿ

ಕಾಯಬೇಕು ತಾಳ್ಮೆ ಇರಬೇಕು ಅಷ್ಟೇ ಅಲ್ಲವೇ ವೈರಸ್

ಆರೋಗ್ಯವಂತ ಸಮಾಜ ನಿರ್ಮಾಣ

ವೈದ್ಯ ದಾದಿಯರು ಪೊಲೀಸ್ ಕಾರ್ಮಿಕರ ಶ್ರಮಕ್ಕೆ ಶೆಲ್ಯೂಟ್ ಮಾಡಿ ಎಲ್ಲರ ಬಾಳಲ್ಲಿ ಬೆಳಕಾಗಬೇಕು

ವೈರಸ್ ತೊಲಗಿಸೋಣ

ಸರ್ವೇ ಜನೋ ಸುಖಿ:ನೋ ಭವಂತು ಎನ್ನೋಣ

                      ಮಂಗಳಗೌರಿ ಹಿರೇಮಠ,ಗದಗ

1 comment
  1. ನಿಮ್ಮಉತ್ತರ ಪ್ರಭ ಬಹಳ ಚನ್ನಾಗಿ ಬಂದಿದೆ ಹೊಸತನದ ಹೊಳಹುಗಳೊಂದಿಗೆ
    ಅಭಿನಂದನೆಗಳು

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ನಲ್ಲೂ ನಿಮಗೆ ಬರ್ತಡೇ ಆಚರಣೆ ಬೇಕಿತ್ತಾ ಸಿಪಿಐ ಸಾಹೇಬರೇ??

ದೇಶದಲ್ಲಿ ಲಾಕ್ ಡೌನ್ ಇದ್ದಾಗಲೂ ನಮ್ಮ ರಾಣೆಬೆನ್ನೂರು ಗ್ರಾಮೀಣ ಸಿಪಿಐ ಸುರೇಶ್ ಸಗರಿ ಲಾಕ್ ಡೌನ್ ಮದ್ಯದಲ್ಲೂ ಜನರ ಗುಂಪಿನ ಮದ್ಯೆ ನಿಂತು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಎಂದು ಜಿಲ್ಲೆಯಲ್ಲೀಗ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿ 44 ಪ್ರಕರಣ: ಯಾವ ಊರಲ್ಲಿ ಎಷ್ಟು?

ಗದಗ : ಜಿಲ್ಲೆಯಲ್ಲಿ ಇಂದು 44 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕು ಏರುಗತಿಯ ನೆಗೆತ ಕಾಣುತ್ತಿರುವುದು…

ಮಹಾರಾಷ್ಟ್ರದಲ್ಲಿ ಕೊರೋನಾ ಪಾಸಿಟಿವ್ 11,506ಕ್ಕೆ ಏರಿಕೆ

ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಒಂದೇ ದಿನ 1008 ಜನರಲ್ಲಿ ವೈರಸ್ ಪತ್ತೆಯಾಗಿದೆ. ಈ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಪ್ರತೀನಿತ್ಯ ಏರಿಕೆಯಾಗುತ್ತಲೇ ಇದೆ. ಈವರೆಗೆ ಮಹಾರಾಷ್ಟ್ರದಲ್ಲಿ ಪತ್ತೆಯಾದ ಕೊರೋನಾ ಪಾಸಿಟಿವ್ ಸಂಖ್ಯೆ ಎಷ್ಟು ಗೊತ್ತಾ..?

ಆಸ್ಪತ್ರೆಯಲ್ಲಿನ ಬಹುತೇಕ ಸಿಬ್ಬಂದಿಗೆ ಕೊರೊನಾ!

ಮುಂಬಯಿ: ಇಲ್ಲಿಯ ಮಹಾನಗರ ಪಾಲಿಕೆಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಲ್ಲಿಯ ಸಾಯನ್‌ ತಿಲಕ್‌ ಆಸ್ಪತ್ರೆಯ 92 ಜನ ವೈದ್ಯರು ಹಾಗೂ ಏಳು ಜನ ತರಬೇತಿ ಪಡೆಯುತ್ತಿದ್ದ ವೈದ್ಯರಿಗೆ ಸೋಂಕು ತಗುಲಿದೆ.