ಮುಂಬಯಿ: ನಟ ವಿಜಯ್‌ ದೇವರಕೊಂಡ ಅವರು ಅರ್ಜುನ್‌ ರೆಡ್ಡಿ ಸಿನಿಮಾದಿಂದ ಫುಲ್ ಫೇಮಸ್ ಆಗಿದ್ದಾರೆ. ಸದ್ಯ ಅವರನ್ನು ಹೊಸ ಸಿನಿಮಾ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ.

ಅರ್ಜುನ್‌ ರೆಡ್ಡಿ ಬಳಿಕ ಗೀತಾ ಗೋವಿಂದಂ ಹೊರತುಪಡಿಸಿದರೆ ದೇವರಕೊಂಡಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ. ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ. ಆ ರೇಸ್‌ನಲ್ಲಿ ಅಲ್ಲು ಅರ್ಜುನ್‌, ಮಹೇಶ್‌ ಬಾಬು, ಪ್ರಭಾಸ್‌ ಸೇರಿದಂತೆ ಹಲವರನ್ನು ಅವರು ಹಿಂದಿಕ್ಕಿ ಸಾಗಿದ್ದಾರೆ.

ಈ ಹಿಂದೆ ಯಾವ ನಾಯಕನ ಚಿತ್ರ ಎಷ್ಟು ಹಣ ಗಳಿಸಿತು ಎಂಬ ಲೆಕ್ಕಾಚಾರದ ಮೇಲೆ ನಾಯಕನ ಪಟ್ಟ ಬದಲಾಗುತ್ತಿತ್ತು. ಆದರೆ, ಇಂದು ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿನ ಫ್ಯಾನ್ಸ್ ಗಳ ಲೆಕ್ಕಾಚಾರದ ಮೇಲೆಯೂ ನಾಯಕನ ಹಣೆ ಬರಹ ಬರೆಯಲಾಗುತ್ತದೆ. ಹೀಗಾಗಿ ಎಲ್ಲ ನಾಯಕ – ನಾಯಕಿಯರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈ ವಿಷಯದಲ್ಲಿ ದೇವರಕೊಂಡ ಕೂಡ ಹಿಂದೆ ಬಿದ್ದಿಲ್ಲ.

ಎಲ್ಲ ವರ್ಗದ ಪ್ರೇಕ್ಷಕರಿಗೂ ವಿಜಯ್‌ ದೇವರಕೊಂಡ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಇಷ್ಟ ಪಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಬರೋಬ್ಬರಿ 7 ಮಿಲಿಯನ್‌ ಫಾಲೋವರ್ಸ್‌ ಹೊಂದುವ ಮೂಲಕ ನಂಬರ್‌ ಒನ್‌ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅವರಿಗಿಂತಲೂ ತೆಲುಗು ಚಿತ್ರರಂಗದ ನಾಯಕಿ ನಟಿಯರು ಮುಂದೆ ಇದ್ದಾರೆ. ಸಮಂತಾ ಅಕ್ಕಿನೇನಿ 9.8 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದರೆ, ತಮನ್ನಾ ಭಾಟಿಯಾರನ್ನು 10.6 ಮಿಲಿಯನ್‌ ಮಂದಿ ಫಾಲೋ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ 10.3 ಮಿಲಿಯನ್‌ ಹೊಂದಿದ್ದರೆ, ಶ್ರುತಿ ಹಾಸನ್‌ ಮತ್ತು ರಾಕುಲ್‌ ಪ್ರೀತ್‌ ಸಿಂಗ್‌ ತಲಾ 13.8 ಮಿಲಿಯನ್‌ ಫಾಲೋವರ್ಸ್‌ ಸಂಪಾದಿಸಿದ್ದಾರೆ. ಕಾಜಲ್‌ ಅಗರ್‌ವಾಲ್‌ ಅವರನ್ನು ಬರೋಬ್ಬರಿ 14.4 ಮಿಲಿಯನ್‌ ಜನರು ಫಾಲೋವರ್ಸ್ ಹೊಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಪಾಸಿಟಿವ್ ಗರ್ಭಿಣಿಗೆ ಸಿಸೇರಿನ್: ಗದಗ ಜಿಮ್ಸ್ ನ ಅಪರೂಪದ ಸಾಧನೆ

ಗದಗ: ಇದು ಗದಗಿನ ಜಿಮ್ಸ್ ವೈದ್ಯರು ನಡೆಸಿದ ‘ಆಪರೇಷನ್ ಪಾಸಿಟಿವ್’ ಕಾರ್ಯಾಚರಣೆ. ಶುಕ್ರವಾರವಷ್ಟೇ ಪಾಸಿಟಿವ್ ದೃಢಪಟ್ಟಿದ್ದ…

ಸಾರಾಯಿ ಸೀಸೆಗಾಗಿ ಬಾರ್ ಮುಂದೆ ಕ್ಯೂ..!

ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಲಾಗಿದ್ದು, ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಎಣ್ಣೆ ಹೈಕ್ಳು ಮಾತ್ರ ಬೆಳಿಗ್ಗೆಯಿಂದಲೇ ಅಂಗಡಿಗಳ ಮುಂದೆ ಕ್ಯೂ…!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಸೋಂಕಿತರು ಹೆಚ್ಚಿನ…

ದೆಹಲಿಯಲ್ಲಿ ಸಮುದಾಯದ ಹಂತ ತಲುಪಿದ ಕೊರೊನಾ – ಘೋಷಣೆಗೆ ಕೇಂದ್ರದ ಮೀನಮೇಷ!

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು, ಸಮುದಾಯ ಹಂತ ತಲುಪಿದೆ. ಆದರೆ, ಕೇಂದ್ರ ಸರ್ಕಾರದ ಘೋಷಣೆಗಾಗಿ ಕಾಯುತ್ತಿದ್ದೇವೆ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.