ಮುಂಬಯಿ: ನಟ ವಿಜಯ್‌ ದೇವರಕೊಂಡ ಅವರು ಅರ್ಜುನ್‌ ರೆಡ್ಡಿ ಸಿನಿಮಾದಿಂದ ಫುಲ್ ಫೇಮಸ್ ಆಗಿದ್ದಾರೆ. ಸದ್ಯ ಅವರನ್ನು ಹೊಸ ಸಿನಿಮಾ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ.

ಅರ್ಜುನ್‌ ರೆಡ್ಡಿ ಬಳಿಕ ಗೀತಾ ಗೋವಿಂದಂ ಹೊರತುಪಡಿಸಿದರೆ ದೇವರಕೊಂಡಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ. ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ. ಆ ರೇಸ್‌ನಲ್ಲಿ ಅಲ್ಲು ಅರ್ಜುನ್‌, ಮಹೇಶ್‌ ಬಾಬು, ಪ್ರಭಾಸ್‌ ಸೇರಿದಂತೆ ಹಲವರನ್ನು ಅವರು ಹಿಂದಿಕ್ಕಿ ಸಾಗಿದ್ದಾರೆ.

ಈ ಹಿಂದೆ ಯಾವ ನಾಯಕನ ಚಿತ್ರ ಎಷ್ಟು ಹಣ ಗಳಿಸಿತು ಎಂಬ ಲೆಕ್ಕಾಚಾರದ ಮೇಲೆ ನಾಯಕನ ಪಟ್ಟ ಬದಲಾಗುತ್ತಿತ್ತು. ಆದರೆ, ಇಂದು ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿನ ಫ್ಯಾನ್ಸ್ ಗಳ ಲೆಕ್ಕಾಚಾರದ ಮೇಲೆಯೂ ನಾಯಕನ ಹಣೆ ಬರಹ ಬರೆಯಲಾಗುತ್ತದೆ. ಹೀಗಾಗಿ ಎಲ್ಲ ನಾಯಕ – ನಾಯಕಿಯರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈ ವಿಷಯದಲ್ಲಿ ದೇವರಕೊಂಡ ಕೂಡ ಹಿಂದೆ ಬಿದ್ದಿಲ್ಲ.

ಎಲ್ಲ ವರ್ಗದ ಪ್ರೇಕ್ಷಕರಿಗೂ ವಿಜಯ್‌ ದೇವರಕೊಂಡ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಇಷ್ಟ ಪಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಬರೋಬ್ಬರಿ 7 ಮಿಲಿಯನ್‌ ಫಾಲೋವರ್ಸ್‌ ಹೊಂದುವ ಮೂಲಕ ನಂಬರ್‌ ಒನ್‌ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅವರಿಗಿಂತಲೂ ತೆಲುಗು ಚಿತ್ರರಂಗದ ನಾಯಕಿ ನಟಿಯರು ಮುಂದೆ ಇದ್ದಾರೆ. ಸಮಂತಾ ಅಕ್ಕಿನೇನಿ 9.8 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದರೆ, ತಮನ್ನಾ ಭಾಟಿಯಾರನ್ನು 10.6 ಮಿಲಿಯನ್‌ ಮಂದಿ ಫಾಲೋ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ 10.3 ಮಿಲಿಯನ್‌ ಹೊಂದಿದ್ದರೆ, ಶ್ರುತಿ ಹಾಸನ್‌ ಮತ್ತು ರಾಕುಲ್‌ ಪ್ರೀತ್‌ ಸಿಂಗ್‌ ತಲಾ 13.8 ಮಿಲಿಯನ್‌ ಫಾಲೋವರ್ಸ್‌ ಸಂಪಾದಿಸಿದ್ದಾರೆ. ಕಾಜಲ್‌ ಅಗರ್‌ವಾಲ್‌ ಅವರನ್ನು ಬರೋಬ್ಬರಿ 14.4 ಮಿಲಿಯನ್‌ ಜನರು ಫಾಲೋವರ್ಸ್ ಹೊಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಶಿಕ್ಷಕರಿಗೂ ಬೇಕು ವರ್ಕ್ ಪ್ರಮ್ ಹೋಮ್

ಬೆಂಗಳೂರು: ಈಗಾಗಲೇ ದಿನದಿಂದ ದಿನಕ್ಕೆ ದೇಶದಲ್ಲಷ್ಟೆ ಅಲ್ಲದೇ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.…

ರಾಜ್ಯದಲ್ಲಿಂದು 308 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 308 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5760 ಕ್ಕೆ ಏರಿಕೆಯಾದಂತಾಗಿದೆ.

ಕೊರೋನಾ ಯೋಧರಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದು ಏಕೆ?

ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣ ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಹೀಗಾಗಿ ಈ ಕಾರ್ಯದಲ್ಲಿ ಬಹಳಷ್ಟು ಕಾಳಜಿಯಿಂದ ಸೇವೆ ಸಲ್ಲಿಸಿದ ಕೊರೋನಾ ಯೋಧರ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ದೇವಸ್ಥಾನ ಆರಂಭದ ಬಗ್ಗೆ ಮುಜರಾಯಿ ಸಚಿವರು ಹೇಳಿದ್ದೇನು..?

ಉಡುಪಿ: ನಾಳೆ ಮುಜರಾಯಿ ದೇವಸ್ಥಾನಗಳು ಓಪನ್ ಆಗಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಸೋಮವಾರದಿಂದ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿತ್ತು. ನಮ್ಮ ಬೇಡಿಕೆಗೆ ಕೇಂದ್ರದ ಸಹಮತದ ನಿರೀಕ್ಷೆ ಇತ್ತು.