ಖಾಸಗಿ ಲ್ಯಾಬ್ ಒಂದು ದೇಶಾದ್ಯಂತ ವಿವಿಧ ಭಾಗಗಳಲ್ಲಿ ನಡೆಸಿದ ಪ್ರತಿಕಾಯ ಪರೀಕ್ಷೆ (ಆಂಟಿಬಾಡಿ ಟೆಸ್ಟ್)ಗಳ ಫಲಿತಾಂಶ ಬಿಡುಗಡೆ ಮಾಡಿದ್ದು, ದೇಶದ 18 ಕೋಟಿ ಜನರಲ್ಲಿ ಕೋವಿಡ್ ನಿರೋಧಕ ಶಕ್ತಿಯಿದೆ ಎಂದು ತಿಳಿಸಿದೆ.


ನವದೆಹಲಿ: ಖಾಸಗಿ ಲ್ಯಾಬ್ ಥೈರೋಕೇರ್ ಟೆಕ್ನಾಲಜೀಸ್ ನಡೆಸಿದ ಆಂಟಿಬಾಡಿ ಟೆಸ್ಟ್ ಗಳ ಫಲಿತಾಂಶಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ‘ದಿ ಕ್ವಿಂಟ್’ ಪೋರ್ಟಲ್, ದೇಶದ ಶೇ. 15 ಅಂದರೆ 18 ಕೋಟಿ ಜನರಲ್ಲಿ ಕೋವಿಡ್ ಎದುರಿಸುವ ರೋಗ ನಿರೋಧಕ ಶಕ್ತಿ ಇದೆ ಎಂದು ಮಂಗಳವಾರ ತಿಳಿಸಿದೆ.
ಥೈರೋಕೇರ್ 600 ಪಿನ್ ಕೋಡ್ ಪ್ರದೇಶದಲ್ಲಿ 6 ಸಾವಿರಕ್ಕೂ ಹೆಚ್ಚು ಆಂಟಿಬಾಡಿ ಟೆಸ್ಟ್ ನಡೆಸಿ, ಫಲಿತಾಂಶಗಳ ಆಧಾರದಲ್ಲಿ ಈ ಫಲಿತಾಂಶ ಪ್ರಕಟಿಸಿದೆ.


ಈ ಕುರಿತು ಮಾತನಾಡಿರುವ ಥೈರೋಕೇರ್ ಕಂಪನಿಯ ಅಧ್ಯಕ್ಷ ಡಾ. ಎ. ವೇಲುಮುನಿ, ‘ನಮ್ಮದು ಅತ್ಯಂತ ವ್ಯವಸ್ಥಿತ, ಸುಸಂಬದ್ಧ ಆಂಟಿಬಾಡಿ ಸಮೀಕ್ಷೆಯಾಗಿದೆ. ಹಾಗೆ ನೋಡಿದರೆ ಐಸಿಎಂಆರ್ ನಡೆಸಿದ 2ನೆ ಸಮೀಕ್ಷೆಯ ಫಲಿತಾಂಶಗಳಿಗೆ ನಮ್ಮ ಹಲವಷ್ಟು ಅಂಶಗಳು ತಾಳೆಯಾಗುತ್ತಿವೆ’ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ, ಸರ್ಕಾರಿ ಸಂಶೋಧನೆ ಸಂಸ್ಥೆಗಳು ಏನು ಹೇಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ಅಗಸ್ಟ್ 3 ಅಥವಾ 5ಕ್ಕೆ ರಾಮ ಮಂದಿರ ಭೂಮಿಪೂಜೆ

‘ಅಗಸ್ಟ್ 3 ಅಥವಾ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಾಗಿಸುವುದು. ಪ್ರಧಾನಮಂತ್ರಿಯೇ ಇದನ್ನು ಮಾಡಬೇಕೆಂದು ಟ್ರಸ್ಟ್ ಅಭಿಲಾಷೆಯಾಗಿದ್ದು, ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ನಿರ್ಮಾಣದ ಜವಾಬ್ದಾರಿ ಪಡೆದಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಇನ್ನೇನು ಊರು ತಲುಪಬಹುದು ಎನ್ನುವಷ್ಟರಲ್ಲಿಯೇ 200 ಕಿ.ಮೀ ನಡೆದ ಮಹಿಳೆ ಸಾವು!

ಲಾಕ್ ಡೌನ್ ನಿಂದಾಗಿ ಹಲವರು ಊರು ತಲುಪಲು ಇನ್ನೂ ಹೆಣಗಾಡುತ್ತಿದ್ದಾರೆ. ಹೀಗೆ ಊರು ತಲುಪಲು ಕಾಲ್ನಡಿಗೆಯಲ್ಲಿಯೇ ತೆರಳಿದ್ದ ಮಹಿಳೆಯೊಬ್ಬರು ಬರೋಬ್ಬರಿ 200 ಕಿ.ಮೀ ನಡೆದು ಸಾವನ್ನಪ್ಪಿದ್ದಾರೆ.

ಟ್ವೀಟರ್ ನಟ ರಜನಿಕಾಂತ ಟ್ವೀಟ್ ಅಳಿಸಿ ಹಾಕಿದ್ದು ಯಾಕೆ?

ಖ್ಯಾತ ನಟ ರಜನಿಕಾಂತ್ ಮಾಡಿದ ಟ್ವೀಟ್ ನ್ನು ಸ್ವತಃ ಟ್ವೀಕರ್ ಅಳಿಸಿ ಹಾಕಿದೆ. ಅವರ ಟ್ವೀಟ್ ಜಾಗದಲ್ಲೀಗ ಟ್ವೀಟರ್ ನಿಯಮ ಉಲ್ಲಂಘಿಸಿರುವುದರಿಂದ ಈ ಟ್ವೀಟ್ ಲಭ್ಯವಿಲ್ಲ ಎಂದು ಸೂಚಿಸಿದೆ. ಟ್ವೀಟ್ ಅಳಿಸಿ ಹಾಕಲಿ ಕಾರಣ ಏನು ಗೊತ್ತೆ?

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ – ವರದಿ ನೆಗೆಟಿವ್!

ಬೀದರ್ : ತನಗೆ ಕೊರೊನಾ ವೈರಸ್ ಬಂದಿದೆ ಎಂದು ಆತಂಕಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ಆತನ ಕೊರೊನಾ ವರದಿ ಮಾತ್ರ ನೆಗೆಟಿವ್ ಬಂದಿದೆ.