ಬೆಂಗಳೂರು: ಖ್ಯಾತ ನಟ ರಜನಿಕಾಂತ್ ಮಾಡಿದ ಟ್ವೀಟ್ ನ್ನು ಸ್ವತಃ ಟ್ವೀಕರ್ ಅಳಿಸಿ ಹಾಕಿದೆ. ಅವರ ಟ್ವೀಟ್ ಜಾಗದಲ್ಲೀಗ ಟ್ವೀಟರ್ ನಿಯಮ ಉಲ್ಲಂಘಿಸಿರುವುದರಿಂದ ಈ ಟ್ವೀಟ್ ಲಭ್ಯವಿಲ್ಲ ಎಂದು ಸೂಚಿಸಿದೆ.

ರಜನಿಕಾಂತ ಮಾಡಿದ ಈ ಟ್ವೀಟ್ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಅಷ್ಟಕ್ಕೂ ಈ ಟ್ವೀಟ್ ಅಳಸಿ ಹಾಕಲು ಕಾರಣ ಜನತಾ ಕರ್ಪೂ ಬಗ್ಗೆ ರಜನಿ ಮಾಡಿದ ವಿಡಿಯೋ ಸಂದೇಶದ ಪೋಸ್ಟ್..!

ರಜನಿ ವಿಡಿಯೋ ಸಂದೇಶದಲ್ಲಿ ಏನಿತ್ತು?

ರಜನಿಕಾಂತ, ಟ್ವೀಟರ್ ನಲ್ಲಿ ವಿಡಿಯೋ ಸಂದೇಶದ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕೊರೋನಾ ವೈರಸ್ ಹರಡುವಿಕೆಯ ಬಗ್ಗೆ ಪ್ರಾಸ್ತಾಪಿಸಿದ್ದಾರೆ. ಈಗಾಗಲೇ ಭಾರತದಲ್ಲಿ ಕೊರೋನಾ ವೈರಸ್ ಎರಡನೇ ಹಂತದಲ್ಲಿದೆ. ಕೊರೋನಾ ವೈರಸ್ ಜನರ ಮೂಲಕ ಹರುಡುತ್ತದೆ. ಹೀಗಾಗಿ ಪ್ರತಿಯೊಬ್ಬರು ಹೆಚ್ಚು ಜಾಗೃತರಾಗಬೇಕು. ಈ ಸೋಂಕು ಮೂರನೇ ಹಂತಕ್ಕೆ ವ್ಯಾಪಿಸದಂತೆ ಎಚ್ಚರ ವಹಿಸಬೇಕಾಗಿದೆ. ಎಲ್ಲರೂ 12-14 ಗಂಟೆಗಳವರೆಗೆ ಮನೆಯಲ್ಲಿರುವುದರಿಂದ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ.

ಇಟಲಿಯಲ್ಲಿಯೂ ಕೂಡ ಕರ್ಪ್ಯೂ ನಿಂದಾಗಿ ಸೋಂಕು ಮೂರನೇ ಹಂತ ತಲುಪದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇಟಲಿಯಲ್ಲಿಯೂ ಜನರು ಸಹಕಾರ ನೀಡದ ಕಾರಣ ಹೆಚ್ಚಿನ ಸಾವುನೋವುಗಳು ಸಂಭವಿಸಿದ್ದವು. ಈ ಕಾರಣದಿಂದ ಜನತಾ ಕರ್ಪ್ಯೂಗೆ ಸಹಕರಿಸಿ ಮನೆಯೊಳಗೆ ಇರುವ ಮೂಲಕ ಆರೋಗ್ಯ ಕಾಪಾಡಿಕೊಳ್ಳೋಣ ಎಂದು ಮನವಿ ಮಾಡಿಕೊಂಡ ವಿಡಿಯೋ ಟ್ವೀಟರ್ ಖಾತೆಗೆ ಪೋಸ್ಟ್ ಮಾಡಿದ್ದರು.

ಇವರ ಈ ಟ್ವೀಟ್ ಗೆ ಸಾಕಷ್ಟು ಟೀಕೆ ಹಾಗೂ ಪ್ರಶ್ನೆಗಳು ಉದ್ಭವವಾದವು. ಜೊತೆಗೆ ರಜನಿಕಾಂತ್ ಹೇಳಿಕೆ ಬಗ್ಗೆ ಆಕ್ಷೇಪ ಕೂಡ ವ್ಯಕ್ತವಾದ  ಕಾರಣದಿಂದ ಟ್ವೀಟರ್ ಈ ನಿರ್ಧಾರ ಕೈಗೊಂಡಿದೆ.

Leave a Reply

Your email address will not be published. Required fields are marked *

You May Also Like

ದಾವಣಗೆರೆಯಲ್ಲಿ ಕೊರೋನಾ ಸೋಂಕು ಸೆಂಚೂರಿ..!

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 100 ಗಡಿ ದಾಟಿದೆ. ಇವತ್ತು ಒಂದೇ ದಿನ 19 ಪಾಸಿಟೀವ್ ಪ್ರಕರಣ ಪತ್ತೆಯಾಗಿದ್ದು, ಇದರಿಂದ ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ ಸಾವಿನ ಸಂಖ್ಯೆ 3 ಕ್ಕೆ ಏರಿಕೆ!

ಗದಗ: ಜಿಲ್ಲೆಯಲ್ಲಿಂದು‌ ಕೊರೊನಾ ಸೋಂಕಿಗೆ 95 ವರ್ಷದ ವೃದ್ಧೆ ಬಲಿಯಾಗಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ…

ಶಾಕಿಂಗ್ ನ್ಯೂಸ್: ಕೊರೋನಾ ಗಾಳಿ ಮೂಲಕ ಹರಡುತ್ತೆ, ಉಸಿರಾಡಿದಾಗ ದೇಹ ಸೇರುತ್ತೆ!

ನವದೆಹಲಿ: ಕೊರೋನಾದ ಸಣ್ಣ ಕಣಗಳು ಗಾಳಿಯಲ್ಲೇ ಇದ್ದು, ಜನದಟ್ಟಣೆಯ ವಾಸಸ್ಥಳಗಳಲ್ಲಿ ಅದು ಉಸಿರಾಟದ ಮೂಲಕವೇ ದೇಹ…

ಕೊರೊನಾ ವಿರುದ್ಧ ಔಷಧಿ ಕಂಡು ಹಿಡಿಯುವ ಹಾದಿಯಲ್ಲಿ ಇಸ್ರೇಲ್?

ಕೊರೊನಾ ವಿರುದ್ಧ ಪ್ರತಿಕಾಯಗಳನ್ನು (ಅಂಟಿಬಾಡಿ) ಅಭಿವೃದ್ಧಿಪಡಿಸುವಲ್ಲಿ ದೇಶದ ಮುಖ್ಯ ಜೈವಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ.