ಭುವನೇಶ್ವರ: ಕಪ್ಪು, ದಟ್ಟ ಕಂದು ಬಣ್ಣದ ಆಮೆಗಳನ್ನು ನೋಡಿದ್ದೇವೆ. ಆದರೆ ಒರಿಸ್ಸಾದಲ್ಲೊಂದು ಅಪರೂಪದ ಆಮೆ ಸಿಕ್ಕಿದೆ. ಅದರ ಬಣ್ಣ ಹಳದಿ. ಇಡೀ ದೇಹ, ಚಿಪ್ಪು ಎಲ್ಲವೂ ಸಂಪೂರ್ಣ ಹಳದಿ. ವಾರಗಳ ಹಿಂದೆ ಇದೇ ರಾಜ್ಯದಲ್ಲಿ ಮೃದುವಾದ ಚಿಪ್ಪು ಹೊಂದಿರುವ ಇನ್ನೊಂದು ಅಪರೂಪದ ಆಮೆಯೂ ಪತ್ತೆಯಾಗಿತ್ತು.

ಹಳದಿ ಮೈಬಣ್ಣ, ಗುಲಾಬಿ ಕಣ್ಣು
ಒರಿಸ್ಸಾ ರಾಜ್ಯದ ಬಾಲಾಸೋರ್ ಜಿಲ್ಲೆಯ ಸುಜನಾಪುರ ಗ್ರಾಮಸ್ಥರು ಭಾನುವಾರ ಇಂತಹ ಅಪರೂಪದ ಹಳದಿ ಆಮೆ ಕಂಡು ಚಕಿತರಾಗಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸದ್ಯ ಅರಣ್ಯ ಇಲಾಖೆ ಇದನ್ನು ಸಂರಕ್ಷಿಸಿದೆ. ಇದು ತೀರಾ ವಿರಳ ಸಂಖ್ಯೆಯಲ್ಲಿರುವ ಆಮೆ ಪ್ರಭೇದ. ನಾನಂತೂ ಒಮ್ಮೆಯೂ ನೋಡಿರಲಿಲ್ಲ’ ಎಂದು ಅಲ್ಲಿನ ವನ್ಯಜೀವಿ ವಾರ್ಡನ್ ಭಾನುಮಿತ್ರ ಆಚಾರ್ಯ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಿರಿಯ ಐ.ಎಫ್.ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವೀಟ್ ಮಾಡಿ, ‘ಇದು ತುಂಬ ಅಪರೂಪದ ಆಮೆ. ಕೆಲವು ತಿಂಗಳು ಹಿಂದೆ ಸಿಂಧ್ ಪ್ರಾಂತ್ಯದಲ್ಲಿ ಕಂಡುಬಂದಿತ್ತು. ಇವನ್ನು ‘ಅಲ್ಬಿನಿ’ ವರ್ಗದ ಆಮೆ ಎನ್ನುತ್ತಾರೆ. ಇದರ ಕಣ್ಣುಗಳು ಗುಲಾಬಿ ಬಣ್ಣ ಹೊಂದಿವೆ’ ಎಂದಿದ್ದಾರೆ.

tortise

ಮೃದು ಚಿಪ್ಪಿನ ಆಮೆ
ಕೆಲ ವಾರಗಳ ಹಿಂದೆ ಇದೇ ಒರಿಸ್ಸಾ ರಾಜ್ಯದ ಮಯೂರ್ ಬಾಂಜ್ ಜಿಲ್ಲೆಯ ಡ್ಯೂಲಿ ಡ್ಯಾಮಿನಲ್ಲಿ ಮೀನುಗಾರರಿಗೆ ಸಿಕ್ಕ ಆಮೆ ಕೂಡ ಅಪರೂಪದ ತಳಿಯೇ. ಆಮೆ ಎಂದರೇನೇ ಮೊದಲಿಗೆ ಹೊಳೆಯುವುದು ಅದರ ಗಡುಸಾದ ಚಿಪ್ಪು ಅಥವಾ ಮೈಕವಚ. ಆದರೆ, ‘ಟ್ರಿನಿಚಿಡೈ’ ಎಂಬ ಪ್ರಭೇದಕ್ಕೆ ಸೇರಿದ ಈ ಆಮೆಯ ಚಿಪ್ಪು ಮುಟ್ಟಿದರೆ ಅದು ಪುಳುಪುಳು ಎನ್ನುವಷ್ಟರ ಮಟ್ಟಿಗೆ ಮೆತ್ತಗಿದೆ. ಇದನ್ನು ಅರಣ್ಯಾಧಿಕಾರಿಗಳು ಮರಳಿ ಡ್ಯಾಮಿಗೇ ಬಿಟ್ಟಿದ್ದಾರೆ.
ಇದು ಏಷ್ಯಾ, ಆಫ್ರಿಕಾ ಮತ್ತು ಉತ್ತರ ಅಮೆರಿಕದಲ್ಲಷ್ಟೇ ಕಂಡುಬರುತ್ತದೆ ಮತ್ತು ಇದು ಕೂಡ ತುಂಬ ವಿರಳ ಸಂಖ್ಯೆಯಲ್ಲಿದೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ಸೇರಿ ರಾಜ್ಯದ ಇಂದಿನ ಕೊರೊನಾ ಅಪ್ ಡೇಟ್

ಜಿಲ್ಲೆಯಲ್ಲಿಂದು 42 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9742ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರೀಯ 607 ಪ್ರಕರಣಗಳಿವೆ. ಇಂದು 111 ಜನರು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು ಬಿಡುಗಡೆಯಾಗಿರುವ ಪ್ರಕರಣಗಳ ಸಂಖ್ಯೆ 9000. ಒಟ್ಟು ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 135 ಆಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಫು.ಬಡ್ನಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಫು.ಬಡ್ನಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಸತತವಾಗಿ ಮೂರನೇ ಬಾರಿ ಅಧ್ಯಕ್ಷರಾಗಿ ಮಾಜಿ ಶಾಸಕ ಎಸ್.ಎನ್.ಪಾಟೀಲ ಅವರ ಪುತ್ರ ಸತೀಶಗೌಡ ಎಸ್.ಪಾಟೀಲ್ ಹಾಗು ಉಪಾಧ್ಯಕ್ಷರಾಗಿ ಲೋಹಿತಪ್ಪ ಮರಿಹೊಳಲಣ್ಣವರ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಘದ ಸದಸ್ಯರು ಸನ್ಮಾನಿಸಿದರು.

ಜೆಡಿಎಸ್ ಸ್ಥಾನ ಕಬಳಿಸಲು ಬಿಜೆಪಿ ಹೊಂಚು – ರೇವಣ್ಣ!

ಹಾಸನ : ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಅಂತಿಮಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿಯಿಂದ ಎಂಎಲ್ಸಿ ಆಗಬೇಕಂತಾರಾ ವಾಟಾಳ್ ನಾಗರಾಜ್..?

ನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ.