ಅಗಸ್ಟ್ 5ಕ್ಕೆ ಜಮ್ಮ-ಕಾಶ್ಮೀರದ 370 ವಿಧಿ ರದ್ದು ಮಾಡಿದ ಪ್ರಕ್ರಿಯೆಗೆ ಒಂದು ವರ್ಷ ತುಂಬುತ್ತಿರುವುದು ಕೇವಲ ಕಾಕತಾಳೀಯವೆ?

ಲಕ್ನೋ: ‘ಅಗಸ್ಟ್ 3 ಅಥವಾ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಾಗಿಸುವುದು. ಪ್ರಧಾನಮಂತ್ರಿಯೇ ಇದನ್ನು ಮಾಡಬೇಕೆಂದು ಟ್ರಸ್ಟ್ ಅಭಿಲಾಷೆಯಾಗಿದ್ದು, ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ನಿರ್ಮಾಣದ ಜವಾಬ್ದಾರಿ ಪಡೆದಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಶನಿವಾರ ಅಯೋಧ್ಯೆಯಲ್ಲಿ ಟ್ಟಸ್ಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್ಟ್ ಸದಸ್ಯ ಕಾಮೇಶ್ವರ್ ಚೌಪಾಲ್ ಈ ಮಾಹಿತಿ ನೀಡಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪಾ ರಾಜ್ ಮಾತನಾಡಿ, ಎಲ್ & ಟಿ ಕಂಪನಿಗೆ ನಿರ್ಮಾಣ ಕಾರ್ಯದ ಗುತ್ತಿಗೆ ನೀಡಲಾಗಿದೆ ಎಂದರು.

ಅಗಸ್ಟ್ 5ಕ್ಕೆ ಜಮ್ಮು-ಕಾಶ್ಮೀರದಲ್ಲಿ 370ನೆ ವಿಧಿ ರದ್ದು ಮಾಡಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿ ಒಂದು ವರ್ಷ ತುಂಬಲಿದೆ. ರಾಮ ಮಂದಿರ ನಿರ್ಮಾಣ ಮತ್ತು 370ನೆ ವಿಧಿ ರದ್ದು ಬಿಜೆಪಿಯ ಎರಡು ಪ್ರಮುಖ ಅಜೆಂಡಾ ಆಗಿದ್ದವು. ಕಳೆದ ವರ್ಷ ಆಗಸ್ಟ್ ನಲ್ಲಿ 370ನೆ ವಿಧಿ ರದ್ದಾಗಿತು. ನವೆಂಬರಿನಲ್ಲಿ ಸುಪ್ರೀಂಕೋರ್ಟ್ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತು.

Leave a Reply

Your email address will not be published. Required fields are marked *

You May Also Like

ಕಾಲುವೆಗೆ ಜಾರಿದ ಕಾರು – ನಾಲ್ವರ ಸಾವು!

ಜೈಪುರ : ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ರಾಜಸ್ಥಆನದ ಹನುಮಾನ್ ನಗರ ಜಿಲ್ಲೆಯಲ್ಲಿ ನಡೆದಿದೆ.

ದೆಹಲಿಯಲ್ಲಿ ಕೆಲ ರಿಯಾಯಿತಿಯೊಂದಿಗೆ ಜೂ.7ರವರೆಗೂ ನಿರ್ಬಂಧ ಮುಂದುವರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗದ ಕಾರಣ, ಕೆಲ ರಿಯಾಯಿತಿಯೊಂದಿಗೆ ಲಾಕ್ಡೌನ್ ನಿರ್ಬಂಧಗಳು ಬರುವ ಜೂನ್ 7 ವರೆಗೂ ಮುಂದುವರೆಯಲಿದೆ.

ದಿಗ್ವಿಜಯ್ ಸಿಂಗ್ ನಕಲಿ ಟ್ವೀಟರ್ ರಚನೆ: ದೂರು ನೀಡಿದ ಕೈ ನಾಯಕ

ಭೋಪಾಲ್: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಹೆಸರಿನಲ್ಲಿ ನಕಲಿ ಟ್ವೀಟರ್…

ಅಮೇರಿಕಾದಲ್ಲಾದ ಹಾನಿಯನ್ನು ಚೀನಾ ದೇಶವೇ ತುಂಬಿಕೊಲಿ:ಟ್ರಂಪ್ ಆಗ್ರಹ..!

ಚೀನಾದ ನಿಷ್ಕಾಳಜಿಯೇ ಕೊರೋನಾ ಸೋಂಕು ವ್ಯಾಪಕವಾಗಲು ಕಾರಣ ಹೀಗಾಗಿ ನಮಗೆ ಆಗಿರುವ ಹಾನಿಯನ್ನು ತುಂಬಿಕೊಡುವಂತೆ ಚೀನಾ ದೇಶವನ್ನು ಆಗ್ರಹಿಸುತ್ತೇನೆ ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಅಸಮಾಧಾನ ಹೊರಹಾಕಿದರು.