ಅಗಸ್ಟ್ 5ಕ್ಕೆ ಜಮ್ಮ-ಕಾಶ್ಮೀರದ 370 ವಿಧಿ ರದ್ದು ಮಾಡಿದ ಪ್ರಕ್ರಿಯೆಗೆ ಒಂದು ವರ್ಷ ತುಂಬುತ್ತಿರುವುದು ಕೇವಲ ಕಾಕತಾಳೀಯವೆ?

ಲಕ್ನೋ: ‘ಅಗಸ್ಟ್ 3 ಅಥವಾ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಾಗಿಸುವುದು. ಪ್ರಧಾನಮಂತ್ರಿಯೇ ಇದನ್ನು ಮಾಡಬೇಕೆಂದು ಟ್ರಸ್ಟ್ ಅಭಿಲಾಷೆಯಾಗಿದ್ದು, ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ನಿರ್ಮಾಣದ ಜವಾಬ್ದಾರಿ ಪಡೆದಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಶನಿವಾರ ಅಯೋಧ್ಯೆಯಲ್ಲಿ ಟ್ಟಸ್ಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್ಟ್ ಸದಸ್ಯ ಕಾಮೇಶ್ವರ್ ಚೌಪಾಲ್ ಈ ಮಾಹಿತಿ ನೀಡಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪಾ ರಾಜ್ ಮಾತನಾಡಿ, ಎಲ್ & ಟಿ ಕಂಪನಿಗೆ ನಿರ್ಮಾಣ ಕಾರ್ಯದ ಗುತ್ತಿಗೆ ನೀಡಲಾಗಿದೆ ಎಂದರು.

ಅಗಸ್ಟ್ 5ಕ್ಕೆ ಜಮ್ಮು-ಕಾಶ್ಮೀರದಲ್ಲಿ 370ನೆ ವಿಧಿ ರದ್ದು ಮಾಡಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿ ಒಂದು ವರ್ಷ ತುಂಬಲಿದೆ. ರಾಮ ಮಂದಿರ ನಿರ್ಮಾಣ ಮತ್ತು 370ನೆ ವಿಧಿ ರದ್ದು ಬಿಜೆಪಿಯ ಎರಡು ಪ್ರಮುಖ ಅಜೆಂಡಾ ಆಗಿದ್ದವು. ಕಳೆದ ವರ್ಷ ಆಗಸ್ಟ್ ನಲ್ಲಿ 370ನೆ ವಿಧಿ ರದ್ದಾಗಿತು. ನವೆಂಬರಿನಲ್ಲಿ ಸುಪ್ರೀಂಕೋರ್ಟ್ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತು.

Leave a Reply

Your email address will not be published. Required fields are marked *

You May Also Like

ಅನೈತಿಕ ಚಟುವಟಿಕೆ: ಐವರ ಬಂಧನ

ಲಕ್ನೋ : ಸೆಕ್ಸ್ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಐವರನ್ನು ಬಂಧಿಸಿ, ಐವರನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಾತ್ ಗ್ರಾಮದಲ್ಲಿ ನಡೆದಿದೆ.

ಗೋಲ್ಡ್ ಸ್ಮಗ್ಲಿಂಗ್: ‘ಸ್ವಪ್ನ’ ಸುಂದರಿ ಲಾಕ್ ಡೌನಿನಲ್ಲಿ ಬೆಂಗಳೂರಿಗೆ ಬಂದಿದ್ದು ಹೇಗೆ?

ಯುಎಇಯಿಂದ 30 ಕೆಜಿ ಚಿನ್ನ ಅಕ್ರಮ ಸಾಗಾಣಿಕೆಯ ಆರೋಪ ಎದುರಿಸುತ್ತಿರುವ ಸ್ವಪ್ನ ಸುರೇಶ್ ಲಾಕ್ ಡೌನ್ ಸಂದರ್ಭದಲ್ಲಿ ಕೆರಳದಿಂದ ಬೆಂಗಳೂರು ತಲುಪಿದ್ದು ಹೇಗೆ?

ಮಗಳ ಮದುವೆಗೆ ಕೂಡಿಟ್ಟ ಹಣ ಆಕ್ಸಿಜನ್ ಖರಿದಿಗೆ ದೇಣಿಗೆ ನೀಡಿದ ರೈತ

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕೈಚೆಲ್ಲಿ ಕೂತಿರುವಾಗ, ಇಲ್ಲೊಬ್ಬ ರೈತ ತನ್ನ ಮಗಳ ಮದುವೆಗಾಗಿ ಕೂಡಿಟ್ಟಿರುವ ಹಣವನ್ನು ಆಕ್ಸಿಜನ‌ ಖರೀದಿ ಮಾಡಲು ದೇಣಿಗೆ ನೀಡಿದ್ದಾನೆ.