ತಮಿಳುನಾಡಿನಲ್ಲಿ ಅಸ್ತಿತ್ವಕ್ಕಾಗಿ ಏದುಸಿರು ಬಿಡುತ್ತಿರುವ ಬಿಜೆಪಿ ವಣ್ಣಯಾರ್ ಸಮುದಾಯವನ್ನು ಒಲಿಸಿಕೊಳ್ಳಲು ಈ ನೇಮಕ ಮಾಡಿದೆ ಎನ್ನಲಾಗಿದೆ.

ಚೆನ್ನೈ: ಕುಖ್ಯಾತ ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿಯನ್ನು ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ.

ಕಳೆದ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರಿದ್ದರು. ಈ ಕುರಿತು ಮಾತನಾಡಿರುವ ವಿದ್ಯಾರಾಣಿ, ಸಾಮಾಜಿಕ ಕೆಲಸ ಮಾಡುವುದು ನನ್ನ ಗುರಿ. ಯಾವುದೇ ಒಂದು ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ. ಮಾನವೀಯತೆಯೇ ಮುಖ್ಯ’ ಎಂದಿದ್ದಾರೆ.

ಕಾನೂನು ಪದವಿ ಪಡೆದಿರುವ 29 ವರ್ಷದ ವಿದ್ಯಾರಾಣಿ ಕೃಷ್ಣಗಿರಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ‘ನನ್ನ ತಂದೆ ಆ ಸಮಸ್ಯಾತ್ಮಕ ಹಾದಿ ಆಯ್ದುಕೊಳ್ಳಲು ಅಂದಿನ ಪರಿಸ್ಥಿತಿಯೇ ಕಾರಣವಾಗಿರಬಬಹುದು’ ಎನ್ನುವ ವಿದ್ಯಾ, ‘ನಾನು ತಂದೆಯನ್ನು ನೋಡಿದ್ದು ಒಂದೇ ಸಲ. ಕರ್ನಾಟಕದ ಹನೂರು ಸಮೀಪದ ಗೋಪಿನಾಥಂನಲ್ಲಿರುವ ನನ್ನ ಅಜ್ಜನ ಮನೆಗೆ ರಜೆಗೆ ಹೋಗಿದ್ದೆ ಆಗ ನನಗೆ ಆರು ವರ್ಷ. ನಾನು ಅಲ್ಲಿ ಮಕ್ಕಳೊಂದಿಗೆ ಆಡುವಾಗ ತಂದೆ ಬಂದು ಮಾತನಾಡಿಸಿ, ಚೆನ್ನಾಗಿ ಓದಬೇಕು ಎಂದು ಹೇಳಿದ್ದು ನೆನಪಿದೆ’ ಎನ್ನುತ್ತಾರೆ.

2000ರಲ್ಲಿ ಕನ್ನಡ ಚಿತ್ರರಂಗದ ಮೇರು ನಟ ರಾಜಕುಮಾರ್ ಅವರನ್ನು ಅಪಹರಿಸಿ, ಬಿಡುಗಡೆ ಮಾಡಿದ್ದ ವೀರಪ್ಪನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದಾದ ನಾಲ್ಕು ವರ್ಷಗಳ ನಂತರ ಕೆ.ವಿಜಯಕುಮಾರ ನೇತೃತ್ವದ ತಮಿಳುನಾಡು ಎಸ್ಟಿಎಫ್ ವೀರಪ್ಪನ್ ಅನ್ನು ಎನ್ ಕೌಂಟರಿನಲ್ಲಿ ಹತ್ಯೆ ಮಾಡಿತ್ತು. ವಿಜಯಕುಮಾರ್ ಬರೆದ ಪುಸ್ತಕದಲ್ಲಿ ವಿದ್ಯಾರಾಣಿಯ ಪ್ರಸ್ತಾಪವೂ ಇದೆ. ‘ಗರ್ಭಿಣಿಯಾಗಿದ್ದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪೊಲೀಸರಿಗೆ ಶರಣಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಯಿತು. ತಾಯಿ-ಮಗುವನ್ನು ಮಹಿಳಾ ವಸತಿ ಗೃಹದಲ್ಲಿ ಇಡಲಾಗಿತ್ತು. ಎಸ್ಟಿಎಫ್ ಅಧಿಕಾರಿಯೊಬ್ಬರು ಮಗುವಿಗೆ ವಿದ್ಯಾರಾಣಿ ಎಂದು ನಾಮಕರಣ ಮಾಡಿದ್ದರು’ ಎಂದು ವಿಜಯಕುಮಾರ್ ಬರೆದಿದ್ದಾರೆ.

ತಮಿಳುನಾಡಿನ ಪ್ರಬಲ ಒಬಿಸಿ ಸಮುದಾಯವಾಗಿರುವ ವಣ್ಣಿಯಾರ್ ಸಮುದಾಯಕ್ಕೆ ವಿದ್ಯಾ ಸೇರಿದ್ದಾರೆ. ವಣ್ಣಿಯಾರ್ ಪಾರ್ಟಿ ಎಂದೇ ಕರೆಯಲ್ಪಡುವ ಪಿಎಂಕೆ ಜೊತೆಗೆ ತಾಯಿ ಮುತ್ತುಲಕ್ಷ್ಮಿ ಗುರುತಿಸಿಕೊಂಡಿದ್ದಾರೆ. ತಾಯಿ ಮತ್ತು ಸಮುದಾಯದ ವಿರೋಧವನ್ನು ಮೆಟ್ಟಿ ನಿಂತ ವಿದ್ಯಾ ಬೇರೆ ಸಮುದಾಯದ ಯುವಕನೊಂದಿಗೆ ವಿವಾಹವಾಗಿದ್ದಾರೆ.

1 comment
  1. It is better to start construction of RAM MANDIR along with BABRI MASJID building.
    We Pray All the Head’s of India

Leave a Reply

Your email address will not be published. Required fields are marked *

You May Also Like

ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್

ವಿಲಕ್ಷಣ ಘಟನೆಯೊಂದರಲ್ಲಿ, ಪೆರುವಿನಲ್ಲಿ ದಂಡ ವಿಧಿಸುವ ಬದಲು ಪೊಲೀಸ್ ಅಧಿಕಾರಿ ಮಹಿಳೆಯೊಬ್ಬಳನ್ನು ಚುಂಬಿಸಿದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ.

ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಚರ್ಚಿಸಿದ ಮೋದಿ – ಯಾವೆಲ್ಲ ಚರ್ಚೆಗಳಾದವು?

ಕಂಟೈನ್ ಮೆಂಟ್ ತಂತ್ರ ಬಲಪಡಿಸುವ ಕುರಿತು ಮತ್ತು ಆರ್ಥಿಕ ಚಟುವಚಿಕೆ ಆರಂಭಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚಿಸಿದರು.

ದೇಶ ಉದ್ಧೇಶಿಸಿ ಮಾತನಾಡಲಿರುವ ಮೋದಿ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಕೊರೋನಾ ವೈರಸ್ ಗೆ ಗ್ಲೆನ್ ಮಾರ್ಕ್ ಸಂಸ್ಥೆಯ ಫ್ಯಾಬಿಫ್ಲೂ ಅಸ್ತ್ರ

ದೆಹಲಿ: ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಜನರನ್ನು ಬಾಧಿಸುತ್ತಿರುವ ಕೊರೊನಾಗೆ ಗ್ಲೆನ್ ಮಾರ್ಕ್…