ಕೇಂದ್ರ ಸರ್ಕಾರ ಹ್ಯಾಂಡ್ ಸ್ಯಾನಿಟೈಸರ್ ಅಗತ್ಯ ವಸ್ತು ಎನ್ನುತ್ತದೆ . ಆದರೆ ತೆರಿಗೆ  ಇಲಾಖೆಯು ಅದನ್ನು ‘ಆಲ್ಕೊಹಾಲ್’ ಕೆಟಗರಿಗೆ ಸೇರಿಸಿ ಶೇ.18 ಜಿ.ಎಸ್.ಟಿ ತೆರಿಗೆ ಹೇರಿದ್ದನ್ನು ಸಮರ್ಥಿಸುತ್ತದೆ.

ಪಣಜಿ:  ಗೋವಾದ ಎಎಆರ್ (ಅಥಾರಿಟಿ ಆಫ್ ಅಡ್ವಾನ್ಸಡ್ ರೂಲಿಂಗ್-ಇದು ಜಿಎಸ್ಟಿಗೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಸುವ ಕೋರ್ಟ್) ಮಂಗಳವಾರ ಅರ್ಜಿಯೊಂದರ ವಿಚಾರಣೆ ಕುರಿತಂತೆ ತೀರ್ಪು ನೀಡಿದ್ದು, ಆಲ್ಕೊಹಾಲ್ ಆಧರಿತ ಹ್ಯಾಂಡ್ ಸ್ಯಾನಿಟೈಸರ್ಗಳು  ‘ಆಲ್ಕೊಹಾಲ್ ಆಧರಿತ ಉತ್ಪನ್ನಗಳು’ ವಿಭಾಗದಡಿ ಸೇರ್ಪಡೆಯಾಗುವುದರಿಂದ ಅವುಗಳ ಮೇಲೆ ಶೇ.18 ಜಿ.ಎಸ್ಟಿ. ಹಾಕುವುದು  ನಿಯಮಾನುಸಾರ ಸರಿಯಾದ ಕ್ರಮವೇ ಆಗಿದೆ ಎಂದು ಸಮರ್ಥಿಸಿಕೊಂಡಿದೆ.

ಹ್ಯಾಂಡ್ ಸ್ಯಾನಿಟೈಸರ್ ತಯಾರಿಸುವ ಗೋವಾದ ಕೈಗಾರಿಕಾ ಘಟಕವೊಂದು ಎಎಆರ್ ಗೆ ಅರ್ಜಿ ಸಲ್ಲಿಸಿ, ಕೇಂದ್ರ ಗ್ರಾಹಕ ಇಲಾಖೆ ಸ್ಯಾನಿಟೈಸರ್ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿದೆ. ಹೀಗಿದ್ದೂ ಅದಕ್ಕೆ ಶೇ.18 ಜಿ.ಎಸ್ಟಿ. ಏಕೆ ಎಂದು ಕೇಳಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಎಎಆರ್,  ‘ಆಲ್ಕೊಹಾಲ್ ಆಧರಿತ ಎಲ್ಲ ಉತ್ಪನ್ನಗಳು ‘3808 ಎಚ್.ಎಸ್.ಎನ್.’ ಅಡಿ ಬರುತ್ತವಾದ್ದರಿಂದ ಶೇ. 18 ಜಿ.ಎಸ್.ಟಿ ತೆರಿಗೆ ಹಾಕಲೇಬೇಕಾಗುತ್ತದೆ ಎಂದು ಹೇಳಿದೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಆರೋಗ್ಯ ತಜ್ಞರು, ಕೋರೊನಾ ನಿಯಂತ್ರಣಕ್ಕೆ  ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್ ಬಳಕೆ ಪರಿಣಾಮಕಾರಿ ಎಂದು ಹೇಳುತ್ತಿದ್ದಾರೆ.  ಕೇಂದ್ರದ ಗ್ರಾಹಕ ವ್ಯವಹಾರ ಇಲಾಖೆ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಅಗತ್ಯ ವಸ್ತು ಎಂದು ಪಟ್ಟಿ ಮಾಡಿದರೆ, ಹಣಕಾಸು ಸಚಿವಾಲಯದ ತೆರಿಗೆ ಇಲಾಖೆಯು ಆಲ್ಕೊಹಾಲ್ ಆಧರಿತ ಉತ್ಪನ್ನಗಳ ಪಟ್ಟಿಗೆ ಸೇರಿಸಿ, ಶೇ. 18ರಷ್ಟು ಜಿ.ಎಸ್.ಟಿ ವಿಧಿಸುತ್ತಿದೆ.

Leave a Reply

Your email address will not be published. Required fields are marked *

You May Also Like

ಉತ್ತರಪ್ರದೇಶ: ಕಂಡವರ ಮನೆಗೆ ಕೇಸರಿ ಬಳಿದ ಮನೆಹಾಳರು

ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಉತ್ತರಪ್ರದೇಶ ‘ಜಂಗಲ್ ನ್ಯಾಯ’ ಕಡೆ ಮುಖ ಮಾಡುತ್ತಿದೆಯೇ? ನಗರವೊಂದರ ಏರಿಯಾದ ಎಲ್ಲ ಮನೆಗಳ ಹೊರ ಗೋಡೆಗಳಿಗೆ ಕೆಲವು ಮನೆಹಾಳರು ಆ ಮನೆಯವರ ವಿರೋಧ ಲೆಕ್ಕಿಸದೇ ಕೇಸರಿ ಬಣ್ಣ ಬಳಿದು ವಿಕಾರಗೊಳಿಸಿದ್ದಾರೆ.

ಸಂಭವನೀಯ ಪ್ರವಾಹ ಹತೋಟೆಗೆ ಆಗತ್ಯ ಕ್ರಮ-ಅಧಿಕಾರಿಗಳಿಗೆ ಸೂಚನೆ

ಆಲಮಟ್ಟಿ: ಕೃಷ್ಣಾ ನದಿ ತೀರದ ಸಂಭವನೀಯ ಪ್ರವಾಹಕ್ಕೊಳಗಾಗುವ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಆ ನಿಟ್ಟಿನಲ್ಲಿ ಸಂಬಂಧಿಸಿದ…

ಗದಗ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ಪಾಸಿಟಿವ್..!

ಗದಗ: ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ…

ಟೀಕಾಕಾರರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ: ಕೆ.ಸುಧಾಕರ್

ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.