ದಾವಣಗೆರೆ: ಕೊರೊನಾ ಪಾಸಿಟಿವ್ ಎಂದು ಚಿಕಿತ್ಸೆಗೆ ದಾಖಲಾದ ರೋಗಿ ಎಂದು ಹೇಳಲಾದ ವ್ಯಕ್ತಿ ಮತ್ತೊಬ್ಬರೊಂದಿಗೆ ಮೊಬೈಲ್ ನಲ್ಲಿ ಮಾತಾಡಿದ್ದು, ಇದರಲ್ಲಿ ತಮಗೆ ಚಿಕಿತ್ಸೆಯನ್ನೇ ನೀಡಿಲ್ಲ ಎಂದು ಮಾತಾಡಿಕೊಂಡಿದ್ದಾರೆ. ಇದರಿಂದ ಕೊರೊನಾ ಹೆಸರಲ್ಲಿ ರಾಜ್ಯದಲ್ಲಿಯೂ ಲೂಟಿ ನಡೆದಿದೆಯಾ? ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ವ್ಯಕ್ತಿಯೊಂದಿಗೆ ಮತ್ತೊಬ್ಬರು ನಡೆಸಿದ ಮೊಬೈಲ್ ಸಂಭಾಷಣೆ ಇಂಥ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಆಡಿಯೋದಲ್ಲಿ ಉಲ್ಲೇಖವಾಗುವ ಮಾಹಿತಿಗಳ ಸತ್ಯಾಸತ್ಯತೆಯನ್ನು ಉತ್ತರಪ್ರಭ ಪರಿಶೀಲಿಸಿಲ್ಲ.
ಈ ಕುರಿತು ಸರ್ಕಾರ, ಸಚಿವರು, ಮೇಲಧಿಕಾರಿಗಳು ಗಮನ ನೀಡಬೇಕಿದೆ. ಜೊತೆಗೆ, ರಾಜ್ಯ ಸರ್ಕಾರದ ವಿರುದ್ಧ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಕೂಡ ಅವ್ಯವಹಾರದ ಆರೋಪವನ್ನು ಹೊರಿಸಿದ್ದಾರೆ. ಇಂತಹ ಸಮಯದಲ್ಲಿ ಈ ಆಡಿಯೋ ಕುರಿತು ಯಾರು ತನಿಖೆ ಮಾಡುತ್ತಾರೆ? ಸತ್ಯ ಹೇಗೆ ಹೊರಬರುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕೂಡ ಅಸಾಧ್ಯವೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.