ರಾಯಪುರ್: ಒಂದು ಕೆಜಿ ಸೆಗಣಿಗೆ 1.50 ರೂ! ಎಷ್ಟಿದೆ ತನ್ನಿ, ನಾವ್ ತಗಳ್ತೀವಿ. ಅಲಲಾ, ಕೊಟ್ಟಿಗೆ ತುಂಬ ಹಸು, ಎಮ್ಮೆ ಸಾಕಿದವರಿಗೆ ಶುಕ್ರದೆಸೆ ಬಂತು ಬಿಡಿ. ಸದ್ಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೆಗಣಿ ಗೊಬ್ಬರ ಮಾಡುತ್ತ ಕಾಯುವುದು ಕಷ್ಟವಿದೆ. ಹೀಗಾಗಿ ಸೆಗಣಿ ಮಾರೋದೆ ಬೆಟರು ಎಂದು ಜಾನುವಾರು ಸಾಕಿದವರು ಖುಷಿಪಡಿ.

ಇದು ಛತ್ತೀಸಗಢ್ ಸರ್ಕಾರದ ಹೊಸ ಯೋಜನೆ. ಇದೇ ಜುಲೈ 21ರಿಂದ ಸೆಗಣಿ ಖರೀದಿ ಆರಂಭವಾಗಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತಿಳಿಸಿದ್ದಾರೆ. ಕಾಂಗ್ರೆಸ್ ಮುಖ್ಯಮಂತ್ರಿಯ ಈ ಯೋಜನೆಯನ್ನು ಅಲ್ಲಿನ ಆರೆಸ್ಸೆಸ್ ಘಟಕ ಸ್ವಾಗತಿಸಿದೆ.

‘ಗೋದಾನ್ ನ್ಯಾಯ್ ಯೋಜನಾ’ ಸ್ಕೀಮ್ ಅಡಿ ಈ ಸೆಗಣಿ ಖರೀದಿ ನಡೆಯಲಿದ್ದು, ಅಲ್ಲಿನ ವಿರೋಧ ಪಕ್ಷ ಬಿಜೆಪಿ ಇದನ್ನು ತಮಾಷೆ ಮಾಡಿ ಟೀಕಿಸಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಆರೆಸ್ಸೆಸ್ ನ ಗ್ರಾಮ್-ಗಾಂವ್ ಘಟಕದ ಮುಖಂಡರು, ಸಿಎಂಗೆ ಪ್ರಶಂಸಾಪತ್ರ ನೀಡಿ ಯೋಜನೆಯನ್ನು ಶ್ಲಾಘಿಸುವ ಮೂಲಕ ಬಿಜೆಪಿಗೆ ಇರಿಸುಮುರುಸು ಉಂಟು ಮಾಡಿದ್ದಾರೆ.


ಜಾಹೀರಾತು


‘ಸೆಗಣಿಯನ್ನು ಕೆಜಿಗೆ 5 ರೂ. ದರದಲ್ಲಿ ಖರೀದಿಸಿ, ಗೋಮೂತ್ರವನ್ನೂ ಖರೀದಿಸಿ’ ಎಂದು ಗ್ರಾಮ್-ಗಾಂವ್ ಸಿಎಂಗೆ ಮನವಿ ಮಾಡಿದೆ.

ಇಲ್ಲಿ ಗೋ ಸೆಗಣಿ ಎಂದು ಮಾತ್ರ ಉಲ್ಲೇಖವಾಗಿದೆ. ಎಮ್ಮೆ ಸೆಗಣಿ ತಗೋತಾರಾ? ಎನ್ನುವುದು ಪ್ರಶ್ನೆಯಾಗಿದೆ.

ಇದನ್ನೂ ಓದಿ – ಪಿಯುಸಿ ಫಲಿತಾಂಶ ದಿನಾಂಕ ತಿಳಿಸಿದ ಸಚಿವ ಸುರೇಶ್ ಕುಮಾರ್

Leave a Reply

Your email address will not be published. Required fields are marked *

You May Also Like

ಶಾಸಕರಿಗಿಂತ ಹಿಂಬಾಲಕನದ್ದೆ ಆವಾಜ್…! ಬಸವಂತರಾಯ್ ವಿರುದ್ಧ ಜನರ ಆಕ್ರೋಶ

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರ ಹಿಂಬಾಲಕ ಬಸವಂತರಾಯ್ ಕುರಿ…

ಗರ್ಭಿಣಿಗೆ ಸೋಂಕು: ಗದಗ ಹೆರಿಗೆ ಆಸ್ಪತ್ರೆ ಸೀಲ್ ಡೌನ್

ಗದಗ: ನಗರದ ಕೆ.ಸಿ ರಾಣಿ ರಸ್ತೆಯಲ್ಲಿರುವ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆಯೋರ್ವರ ಗಂಟಲುದ್ರವದ…

ಗ್ರಾಮೀಣ ಭಾಗಕ್ಕೂ ಬಂದೇ ಬಿಟ್ಟಿತು ಕೊರೊನಾ!

ಬೆಳಗಾವಿ: ಇಲ್ಲಿಯವರೆಗೂ ನಗರ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದ್ದ ಕೊರೊನಾ ಮಹಾಮಾರಿ ಸದ್ಯ ಹಳ್ಳಿಗರ ನಿದ್ದೆಗೆಡಿಸಿದೆ.…

ಆಹಾರ ಕಿಟ್ ಗಾಗಿ: ಶಾಸಕರ ಮನೆಗೆ ಮುತ್ತಿಗೆ

ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿದರು. ರಾಜ್ಯದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ನಮಗೂ ಆಹಾರದ ಕಿಟ್ಗಳನ್ನು ಕೊಡಿ ಎಂದು ಆಗ್ರಹಿಸಿದರು.