ರಾಯಪುರ್: ಒಂದು ಕೆಜಿ ಸೆಗಣಿಗೆ 1.50 ರೂ! ಎಷ್ಟಿದೆ ತನ್ನಿ, ನಾವ್ ತಗಳ್ತೀವಿ. ಅಲಲಾ, ಕೊಟ್ಟಿಗೆ ತುಂಬ ಹಸು, ಎಮ್ಮೆ ಸಾಕಿದವರಿಗೆ ಶುಕ್ರದೆಸೆ ಬಂತು ಬಿಡಿ. ಸದ್ಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೆಗಣಿ ಗೊಬ್ಬರ ಮಾಡುತ್ತ ಕಾಯುವುದು ಕಷ್ಟವಿದೆ. ಹೀಗಾಗಿ ಸೆಗಣಿ ಮಾರೋದೆ ಬೆಟರು ಎಂದು ಜಾನುವಾರು ಸಾಕಿದವರು ಖುಷಿಪಡಿ.

ಇದು ಛತ್ತೀಸಗಢ್ ಸರ್ಕಾರದ ಹೊಸ ಯೋಜನೆ. ಇದೇ ಜುಲೈ 21ರಿಂದ ಸೆಗಣಿ ಖರೀದಿ ಆರಂಭವಾಗಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತಿಳಿಸಿದ್ದಾರೆ. ಕಾಂಗ್ರೆಸ್ ಮುಖ್ಯಮಂತ್ರಿಯ ಈ ಯೋಜನೆಯನ್ನು ಅಲ್ಲಿನ ಆರೆಸ್ಸೆಸ್ ಘಟಕ ಸ್ವಾಗತಿಸಿದೆ.

‘ಗೋದಾನ್ ನ್ಯಾಯ್ ಯೋಜನಾ’ ಸ್ಕೀಮ್ ಅಡಿ ಈ ಸೆಗಣಿ ಖರೀದಿ ನಡೆಯಲಿದ್ದು, ಅಲ್ಲಿನ ವಿರೋಧ ಪಕ್ಷ ಬಿಜೆಪಿ ಇದನ್ನು ತಮಾಷೆ ಮಾಡಿ ಟೀಕಿಸಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಆರೆಸ್ಸೆಸ್ ನ ಗ್ರಾಮ್-ಗಾಂವ್ ಘಟಕದ ಮುಖಂಡರು, ಸಿಎಂಗೆ ಪ್ರಶಂಸಾಪತ್ರ ನೀಡಿ ಯೋಜನೆಯನ್ನು ಶ್ಲಾಘಿಸುವ ಮೂಲಕ ಬಿಜೆಪಿಗೆ ಇರಿಸುಮುರುಸು ಉಂಟು ಮಾಡಿದ್ದಾರೆ.


ಜಾಹೀರಾತು


‘ಸೆಗಣಿಯನ್ನು ಕೆಜಿಗೆ 5 ರೂ. ದರದಲ್ಲಿ ಖರೀದಿಸಿ, ಗೋಮೂತ್ರವನ್ನೂ ಖರೀದಿಸಿ’ ಎಂದು ಗ್ರಾಮ್-ಗಾಂವ್ ಸಿಎಂಗೆ ಮನವಿ ಮಾಡಿದೆ.

ಇಲ್ಲಿ ಗೋ ಸೆಗಣಿ ಎಂದು ಮಾತ್ರ ಉಲ್ಲೇಖವಾಗಿದೆ. ಎಮ್ಮೆ ಸೆಗಣಿ ತಗೋತಾರಾ? ಎನ್ನುವುದು ಪ್ರಶ್ನೆಯಾಗಿದೆ.

ಇದನ್ನೂ ಓದಿ – ಪಿಯುಸಿ ಫಲಿತಾಂಶ ದಿನಾಂಕ ತಿಳಿಸಿದ ಸಚಿವ ಸುರೇಶ್ ಕುಮಾರ್

Leave a Reply

Your email address will not be published. Required fields are marked *

You May Also Like

ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರ!

ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ಇನ್ನು ಮುಂದೆ ರಾತ್ರಿ ಹೊತ್ತಿನಲ್ಲಿಯೂ ಮೊದಲಿನಂತೆ…

ಬ್ಯಾಂಕ್ ಗೆ 67 ಕೋಟಿ ವಂಚಿಸಿದ ಬಿಜೆಪಿ ಶಾಸಕ..!

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಮಾಡಿ ರೂ.67 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದಡಿ…

ಸಿಎಂ ಯಡಿಯೂರಪ್ಪ ರಾಜಾಹುಲಿ ಅಂದ್ರು ಆರ್.ಅಶೋಕ

ಚಾಮರಾಜನಗರ:ಹುಲಿಗೆ ಹಿಂದಿನಿಂದ ಆಡಳಿತ ಮಾಡಿ ಗೊತ್ತಿಲ್ಲ. ನೇರ ಆಡಳಿತವೇ ಸಿಎಂ ಯಡಿಯೂರಪ್ಪ ಅವರ ಸ್ವಭಾವ ಹೀಗಾಗಿ ಯಡಿಯೂರಪ್ಪ ರಾಜಾಹುಲಿ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.