ಬೆಂಗಳೂರು: ಕೋವಿಡ್-19 ಸೋಂಕಿನಿಂದ ಗುಣಪಡಿಸಲು ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ಸಣ್ಣದೊಂದು ಹೆಜ್ಜೆ ಇಟ್ಟಿದ್ದಾರೆ. ಭೌಮ್ಯ ಮತ್ತು ಸಾಸ್ತೈ ಎಂಬ ಹೆಸರಿನ ಮಾತ್ರೆಗಳನ್ನು ಸಂಶೋಧಿಸಿದ್ದು, ಇದಕ್ಕೆ ಇನ್ನೂ ಅಪ್ರೂವಲ್ ಸಿಕ್ಕಿಲ್ಲ ಎಂಬುದನ್ನು ಆ ವೈದ್ಯರೇ ಸ್ಪಷ್ಟಪಡಿಸಿದ್ದಾರೆ.

ನಗರದ ಡಾ. ಗಿರಿಧರ್ ಕಜೆ ಎಂಬುವವರು 14 ಔಷಧಿ ಸಸ್ಯಗಳ ಪದಾರ್ಥಗಳಿಂದ ಮಾತ್ರೆ ತಯಾರಿಸಿದ್ದು, ನಗರದ ವಿಕ್ಟೋರಿಯಾ-ಕೋವಿಡ್ ಆಸ್ಪತ್ರೆಯಲ್ಲಿ ಹತ್ತು ಪಾಸಿಟಿವ್ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಅವರೆಲ್ಲ 3-10 ದಿನದಲ್ಲಿ ಗುಣಮುಖರಾಗಿದ್ದು, ಈಗ ಅವರ ವರದಿ ನೆಗೆಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಕೋವಿಡ್ ಎಥಿಕ್ಸ್ ಕೋರ್ ಕಮಿಟಿ ಕ್ಲಿನಿಕಲ್ ಟ್ರಯಲ್ಸ್ ಗೆ ಅನುಮತಿ ನೀಡಿತ್ತು. ಆಯುರ್ವೇದ ಮತ್ತು ಆಯುಷ್‌ನಲ್ಲಿ ಕೊರೋನಾಕ್ಕೆ ಔಷಧಿ ಕಂಡು ಹಿಡಿಯುವ ಪ್ರಯೋಗಗಳು ನಡೆದಿವೆ. ಈಗ ಈ ಮಾತ್ರೆಗಳನ್ನು ನಿಗದಿತ ಚಿಕಿತ್ಸೆಯಲ್ಲಿ ಪೂರಕವಾಗಿ ನೀಡಬಹುದಷ್ಟೇ. ಸದ್ಯಕ್ಕೆ ಇನ್ನಷ್ಟು ಪ್ರಯೋಗಗಳು ನಡೆಯಬೇಕು ಎಂದು ಸಮಿತಿ ಸದಸ್ಯೆ ಡಾ. ಸ್ಮಿತಾ ತಿಳಿಸಿದ್ದಾರೆ.

ಯಾವುದೇ ಹೊಸ ಔಷಧಿ ಅಪ್ರೂವಲ್ ಪಡೆಯಬೇಕಾದರೆ ಸಾಕಷ್ಟು ಸಂಖ್ಯೆಯ ರೋಗಿಗಳ (ಸ್ಯಾಂಪಲ್ ಸೈಜ್ ದೊಡ್ಡದಾಗಿರಬೇಕು) ಮೇಲೆ ಅದನ್ನು ಪ್ರಯೋಗಿಸಿ ಯಶಸ್ಸು ಪಡೆಯಬೇಕು. ಹೀಗಾಗಿ ಡಾ. ಗಿರಿಧರ್ ಅವರು ವಿಭಿನ್ನ ವಯೋಮಾನದ ಸಾವಿರಾರು ಪಾಸಿಟಿವ್‌ಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಕಂಡ ನಂತರವಷ್ಟೇ ಇದರ ಮಾರಾಟ ಅನುಮತಿ ಸಿಗಲಿದೆ.

Leave a Reply

Your email address will not be published. Required fields are marked *

You May Also Like

ಬಿಜೆಪಿಯಿಂದ ಎಂಎಲ್ಸಿ ಆಗಬೇಕಂತಾರಾ ವಾಟಾಳ್ ನಾಗರಾಜ್..?

ನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ.

ಗದಗ ಜಿಲ್ಲೆಯಲ್ಲಿ ಊರೂರು ವ್ಯಾಪಿಸುತ್ತಿರುವ ವೈರಸ್: ಯಾವ ಊರಲ್ಲಿ ಎಷ್ಟು?

ಗದಗ: ಜಿಲ್ಲೆಯಲ್ಲಿ ಶುಕ್ರವಾರ ದಿ. 17 ರಂದು 60(ಹೆಲ್ಥ್ ಬುಲೆಟಿನ್ ನಲ್ಲಿ 59) ಜನರಿಗೆ ಕೊವಿಡ್-19…

ಶುಂಠಿ ವ್ಯಾಪಾರಿಯಿಂದ ಮುಂಡರಗಿ ಪೊಲೀಸ್ ಸ್ಟೇಶನ್ ಗೆ ಸೋಂಕಿನ ಸಂಕಟ..!

ಮುಂಡರಗಿ: ಕೊಡಗು ಜಿಲ್ಲೆಯ ಶುಂಠಿ ವ್ಯಾಪಾರಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಆದ್ರೆ ಆತನ ಟ್ರಾವೆಲ್ ಹಿಸ್ಟರಿ…

ಕಂಡಕ್ಟರ್, ಡ್ರೈವರ್ ಗಳನ್ನು ಟಾರ್ಗೇಟ್ ಮಾಡಿದ್ರಾ ಡಿಪೋ ಮ್ಯಾನೇಜರ್..?

ಇದೀಗ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಅವರ ವರ್ತನೆ ಮತ್ತೊಂದು ಯಡವಟ್ಟಿಗೆ ಕಾರಣವಾಗಿದೆ. ನಿನ್ನೆ ಘಟನೆ ನಂತರ ಇದೀಗ ಸಿಬ್ಬಂಧಿಗಳನ್ನು ಡಿಪೋ ಮ್ಯಾನೇಜರ್ ಟಾರ್ಗೆಟ್ ಮಾಡಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.