ಬಳ್ಳಾರಿ: ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ 45 ದಿನಗಳ ಕಾಲ ಸಂಪೂರ್ಣ ಸಾರಾಯಿ ಮಾರಾಟ ನಿಶೇಧಿಸಿತ್ತು. ಆದರೆ ಇದೀಗ ಮತ್ತೆ ಸಾರಾಯಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಬಹುತೇಕ ಕುಟುಂಬಗಳ ನೆಮ್ಮದಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಸಾರಾಯಿ ಮಾರಾಟ ಸಂಪೂರ್ಣ ನಿಶೇಧಿಸಬೇಕು ಎಂದು ಗೋರ್ ಸೇನಾ ಸಂಘಟನೆಯಿಂದ ಹೂವಿನ ಹಡಗಲಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಮತ್ತೆ ಮದ್ಯ ಮಾರಾಟ ಮಾಡುತ್ತಿರುವುದರಿಂದ ಸಮಾಜದ ನೆಮ್ಮದಿಗೆ ಭಂಗ ಬರುತ್ತಿದೆ. ಸಾರಾಯಿ ಬಂದ್ ವೇಳೆ ಊರುಗಳು ಶಾಂತವಾಗಿದ್ದವು ಜನರು ದುಶ್ಚಟಗಳಿಂದ ಮುಕ್ತರಾಗುವತ್ತ ಸಾಗಿದ್ದರು. ಅಷ್ಟರಲ್ಲಿ ಮತ್ತೆ ಸಾರಾಯಿ ಮಾರಾಟ ಆರಂಭಿಸಿದ್ದು ಜನರನ್ನು ದುಶ್ಚಟಗಳ ದಾಸರಾಗುವಂತೆ ಮಾಡಿದೆ. ಕೂಡಲೇ ಸರ್ಕಾರ ಮದ್ಯೆ ಮಾರಾಟ ಸಂಪೂರ್ಣ ನಿಷೇಧಿಸಬೇಕು. ಅದರಲ್ಲೂ ತಾಂಡಾಗಳಲ್ಲಿ ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗೋರಾ ಸೇನಾ ಗೌರವ ಅಧ್ಯಕ್ಷ ರವಿ ನಾಯ್ಕ್ ಎಸ್, ಅಧ್ಯಕ್ಷ ಸೇವ್ಯಾ ನಾಯ್ಕ್ ಎಸ್, ಕಾರ್ಯದರ್ಶಿ ನೀಲಾ ನಾಯ್ಕ್ ವಿ,ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ನಾಯ್ಕ್, ಕೃಷ್ಣಾ ನಾಯ್ಕ್, ಲೋಕ್ಯಾ ನಾಯ್ಕ್, ರವಿ ನಾಯ್ಕ್, ಸಂತೋಷ ನಾಯ್ಕ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಬೆಂಗಳೂರು ಗಲಭೆ ಪ್ರಕರಣ – ಮಾಜಿ ಮೇಯರ್ ಪತ್ತೆಗಾಗಿ ವಿಶೇಷ ತಂಡ ರಚನೆ!

ಬೆಂಗಳೂರು : ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಅವರ ಪತ್ತೆಗಾಗಿ ಸಿಸಿಬಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10118…

ಮಾಗಡಿ : ಗ್ರಾಪಂ ಮಾಜಿ ಸದಸ್ಯರ ಬಣವಿಗೆ ಬೆಂಕಿ..!

ತಾಲೂಕಿನ ಮಾಗಡಿ ಗ್ರಾಪಂ ವ್ಯಾಪ್ತಿಯ ಪರಸಾಪೂರ (ವಾರ್ಡ ನಂ:6) ಗ್ರಾಮದಲ್ಲಿ ಶೇಂಗಾ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಮಾಜಿ ಗ್ರಾಪಂ ಸದಸ್ಯ ಬಸಪ್ಪ ಬೇರಗಣ್ಣವರ ಸದ್ಯ ನಡೆಯುತ್ತಿರುವ ಚುನಾವಣೆಗೆ ಅವರ ಮಗ‌ನನ್ನು ಕಣಕ್ಕೆ ಇಳಿಸಿದ್ದರು.

ಕೊರೊನಾ ವರದಿ ಕೊಡಿ ಇಲ್ಲವೇ ನಮ್ಮನ್ನು ಬಿಡಿ!

ಮಸ್ಕಿ: ಕ್ವಾರೆಂಟೈನ್ ಗೆ ಒಳಗಾಗಿ 20 ದಿನಗಳು ಕಳೆದು ಹೋದರು ಕೊರೊನಾ ವರದಿ ಬಂದಿಲ್ಲ ಮೊದಲು…