ಬಳ್ಳಾರಿ: ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ 45 ದಿನಗಳ ಕಾಲ ಸಂಪೂರ್ಣ ಸಾರಾಯಿ ಮಾರಾಟ ನಿಶೇಧಿಸಿತ್ತು. ಆದರೆ ಇದೀಗ ಮತ್ತೆ ಸಾರಾಯಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಬಹುತೇಕ ಕುಟುಂಬಗಳ ನೆಮ್ಮದಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಸಾರಾಯಿ ಮಾರಾಟ ಸಂಪೂರ್ಣ ನಿಶೇಧಿಸಬೇಕು ಎಂದು ಗೋರ್ ಸೇನಾ ಸಂಘಟನೆಯಿಂದ ಹೂವಿನ ಹಡಗಲಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಮತ್ತೆ ಮದ್ಯ ಮಾರಾಟ ಮಾಡುತ್ತಿರುವುದರಿಂದ ಸಮಾಜದ ನೆಮ್ಮದಿಗೆ ಭಂಗ ಬರುತ್ತಿದೆ. ಸಾರಾಯಿ ಬಂದ್ ವೇಳೆ ಊರುಗಳು ಶಾಂತವಾಗಿದ್ದವು ಜನರು ದುಶ್ಚಟಗಳಿಂದ ಮುಕ್ತರಾಗುವತ್ತ ಸಾಗಿದ್ದರು. ಅಷ್ಟರಲ್ಲಿ ಮತ್ತೆ ಸಾರಾಯಿ ಮಾರಾಟ ಆರಂಭಿಸಿದ್ದು ಜನರನ್ನು ದುಶ್ಚಟಗಳ ದಾಸರಾಗುವಂತೆ ಮಾಡಿದೆ. ಕೂಡಲೇ ಸರ್ಕಾರ ಮದ್ಯೆ ಮಾರಾಟ ಸಂಪೂರ್ಣ ನಿಷೇಧಿಸಬೇಕು. ಅದರಲ್ಲೂ ತಾಂಡಾಗಳಲ್ಲಿ ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗೋರಾ ಸೇನಾ ಗೌರವ ಅಧ್ಯಕ್ಷ ರವಿ ನಾಯ್ಕ್ ಎಸ್, ಅಧ್ಯಕ್ಷ ಸೇವ್ಯಾ ನಾಯ್ಕ್ ಎಸ್, ಕಾರ್ಯದರ್ಶಿ ನೀಲಾ ನಾಯ್ಕ್ ವಿ,ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ನಾಯ್ಕ್, ಕೃಷ್ಣಾ ನಾಯ್ಕ್, ಲೋಕ್ಯಾ ನಾಯ್ಕ್, ರವಿ ನಾಯ್ಕ್, ಸಂತೋಷ ನಾಯ್ಕ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.