ಬಳ್ಳಾರಿ: ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ 45 ದಿನಗಳ ಕಾಲ ಸಂಪೂರ್ಣ ಸಾರಾಯಿ ಮಾರಾಟ ನಿಶೇಧಿಸಿತ್ತು. ಆದರೆ ಇದೀಗ ಮತ್ತೆ ಸಾರಾಯಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಬಹುತೇಕ ಕುಟುಂಬಗಳ ನೆಮ್ಮದಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಸಾರಾಯಿ ಮಾರಾಟ ಸಂಪೂರ್ಣ ನಿಶೇಧಿಸಬೇಕು ಎಂದು ಗೋರ್ ಸೇನಾ ಸಂಘಟನೆಯಿಂದ ಹೂವಿನ ಹಡಗಲಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಮತ್ತೆ ಮದ್ಯ ಮಾರಾಟ ಮಾಡುತ್ತಿರುವುದರಿಂದ ಸಮಾಜದ ನೆಮ್ಮದಿಗೆ ಭಂಗ ಬರುತ್ತಿದೆ. ಸಾರಾಯಿ ಬಂದ್ ವೇಳೆ ಊರುಗಳು ಶಾಂತವಾಗಿದ್ದವು ಜನರು ದುಶ್ಚಟಗಳಿಂದ ಮುಕ್ತರಾಗುವತ್ತ ಸಾಗಿದ್ದರು. ಅಷ್ಟರಲ್ಲಿ ಮತ್ತೆ ಸಾರಾಯಿ ಮಾರಾಟ ಆರಂಭಿಸಿದ್ದು ಜನರನ್ನು ದುಶ್ಚಟಗಳ ದಾಸರಾಗುವಂತೆ ಮಾಡಿದೆ. ಕೂಡಲೇ ಸರ್ಕಾರ ಮದ್ಯೆ ಮಾರಾಟ ಸಂಪೂರ್ಣ ನಿಷೇಧಿಸಬೇಕು. ಅದರಲ್ಲೂ ತಾಂಡಾಗಳಲ್ಲಿ ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗೋರಾ ಸೇನಾ ಗೌರವ ಅಧ್ಯಕ್ಷ ರವಿ ನಾಯ್ಕ್ ಎಸ್, ಅಧ್ಯಕ್ಷ ಸೇವ್ಯಾ ನಾಯ್ಕ್ ಎಸ್, ಕಾರ್ಯದರ್ಶಿ ನೀಲಾ ನಾಯ್ಕ್ ವಿ,ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ನಾಯ್ಕ್, ಕೃಷ್ಣಾ ನಾಯ್ಕ್, ಲೋಕ್ಯಾ ನಾಯ್ಕ್, ರವಿ ನಾಯ್ಕ್, ಸಂತೋಷ ನಾಯ್ಕ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಜೂಜಾಟ: ಹತ್ತು ಜನರ ಬಂಧನ

ರೋಣ: ಇಲ್ಲಿನ ಬಿಸಿಎಂ ಹಾಸ್ಟೇಲ್ ಸಮೀಪದಲ್ಲಿರುವ ರಸ್ತೆಯ ಬದಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಹತ್ತು ಜನರನ್ನು ರೋಣ ಪೋಲಿಸರು ಬಂಧಿಸಿದ್ದಾರೆ, ಬಂಧಿತರಿಂದ 21,160 ರೂ, ವಶಪಡಿಸಿಕೊಳ್ಳಲಾಗಿದೆ.

ಮಾಗಡಿಯಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ

ತಾಲೂಕಿನ ಮಾಗಡಿ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಮಾಗಡಿಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ ಜರುಗಿತು.

ರೈತ ಸಂಘದ ನಿಡಗುಂದಿ ನಗರ ಘಟಕದ ಉದ್ಘಾಟನೆ
ರೈತ ಸಂಘ ರೈತ ಸ್ನೇಹಿ ಕಾರ್ಯ ಗೈಯಲಿ-ಶಿವಾನಂದ ಅವಟಿ

ಉತ್ತರಪ್ರಭ ಸುದ್ದಿನಿಡಗುಂದಿ: ಯಾವುದೇ ಸರಕಾರ ಇರಲಿ ಸದಾ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿ ರೈತರ ಸಮಸ್ಯೆ ನಿವಾರಿಸಲು…

ಗದಗ ಜಿಲ್ಲೆಯಲ್ಲಿ ಮತ್ತೆ 10 ಕಂಟೇನ್ ಮೆಂಟ್ ಪ್ರದೇಶಗಳ ಘೋಷಣೆ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜುಲೈ 10ರಂದು 10 ಪ್ರತಿಬಂಧಿತ ಪ್ರದೇಶಗಳನ್ನು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಘೋಷಿಸಿದ್ದಾರೆ.