ಲಡಾಖ್‌: ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರೆದ ನಡುವೆಯೇ ಭಾರತ ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ನೀಡಿದೆ.

ಭಾರತೀಯ ಸೇನೆಯ ಎಂಜಿನಿಯರಿಂಗ್‌ ವಿಭಾಗ ಗಲ್ವಾನ್‌ ನದಿಗೆ 60 ಮೀಟರ್‌ ಉದ್ದನೆಯ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ಅಲ್ಲದೇ, ಈ ಸೂಕ್ಷ್ಮ ಪ್ರದೇಶದ ಮೇಲೆ ಭಾರತ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ. ಇದರೊಂದಿಗೆ ಭಾರತದ ಯುದ್ಧ ವಿಮಾನಗಳು ಗಡಿಯಲ್ಲಿ ಹಾರಾಟ ನಡೆಸಿ ಹದ್ದಿನ ಕಣ್ಣಿಟ್ಟಿವೆ.

ಗಲ್ವಾನ್‌ ನದಿ-ಶ್ಯೊಕ್‌ ನದಿ ಒಗ್ಗೂಡುವ ಸ್ಥಳದಿಂದ ಪೂರ್ವಕ್ಕೆ 3 ಕಿ.ಮೀ ಹಾಗೂ ಗಸ್ತು ಪಾಯಿಂಟ್‌ 14 (ಜೂನ್‌ 15ರಂದು ಮಾರಾಮಾರಿ ನಡೆದ ಸ್ಥಳ)ದಿಂದ 2 ಕಿ.ಮೀ ದೂರದಲ್ಲಿ ಸೇತುವೆ ನಿರ್ಮಾಣವಾಗಿದೆ. ಲಡಾಖ್‌ ಸಂಘರ್ಷವು ದಕ್ಷಿಣ ಚೀನಾ ಸಮುದ್ರ ವಿವಾದದಂತೆ ಅಲ್ಲ. ನಮ್ಮ ತಂಟೆಗೆ ಬಂದರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಒಪ್ಪಂದಗಳಿಗೆ ಬದ್ಧವಾಗಿ ನಡೆದುಕೊಳ್ಳಿ ಎಂದು ಭಾರತದ ಅಧಿಕಾರಿಗಳ ತಂಡವು ಚೀನಾಕ್ಕೆ ಖಡಕ್‌ ಎಚ್ಚರಿಕೆ ನೀಡಿದೆ.

ಗಲ್ವಾನ್‌ ಕಣಿವೆಯಲ್ಲಿ ಚೀನಾ ಪುಂಡಾಟಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಿಶ್ಚಯಿಸಿರುವ ಭಾರತೀಯ ವಾಯುಪಡೆ ತನ್ನ ಯುದ್ಧ ವಿಮಾನಗಳನ್ನು ಮುನ್ನೆಲೆಗೆ ತಂದು ಸನ್ನದ್ಧವಾಗಿಸಿದೆ. ಸುಖೋಯ್‌-30 ಎಂಕೆಐ, ಮಿರಾಜ್‌-2000, ಜಾಗ್ವಾರ್‌ ಯುದ್ಧ ವಿಮಾನಗಳು, ಅಪಾಚೆ ಹೆಲಿಕಾಪ್ಟರ್‌ ಹಾರಾಟ ನಡೆಸಿವೆ.

ಚೀನಾ ದೇಶ ನಮ್ಮ ದೇಶದ ಒಂದಿಂಚು ಭೂ ಭಾಗವನ್ನೂ ಅತಿಕ್ರಮಿಸಿಲ್ಲ. ಏಕಕಾಲದಲ್ಲಿ ಹಲವು ಕಡೆ ಸಂಚರಿಸಿ ದಾಳಿ ನಡೆಸಬಲ್ಲ ಸಾಮರ್ಥ್ಯ ಭಾರತದ ಸಶಸ್ತ್ರ ಪಡೆಗಳಿಗೆ ಇದೆ ಎಂದು ಮೋದಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ – ನಟಿಮಣಿಯರ ರಕ್ಷಣೆ!

ಮುಂಬಯಿ : ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಓರ್ವ ಸಿನಿಮಾ ನಟಿ ಸೇರಿದಂತೆ ಮೂವರು ಧಾರವಾಹಿ ನಟಿಯರನ್ನು ರಕ್ಷಿಸಲಾಗಿದೆ.

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಆಕಾಂಕ್ಷಿಗಳಿಗೆ ಅಚ್ಚರಿ

ಇದೇ 19 ರಂದು ರಾಜ್ಯದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಮಾರಾಟವಾದ ಸಾರಿ ಎಷ್ಟು ಗೊತ್ತಾ?

ಒಂದೇ ದಿನ ಹಾವೇರಿಯಲ್ಲಿ ಕೊಟ್ಯಾಂತರ ಮದ್ಯ ಬಿಕರಿಯಾಗಿದ್ದು ಇದರಿಂದ ನಿನ್ನೆ ಒಂದೇ ದಿನಕ್ಕೆ ಅಬಕಾರಿ ಇಲಾಖೆಗೆ ಕೋಟ್ಯಾಂತರ ಕಮಾಯಿಯಾಗಿದೆ.

ಗದಗನಲ್ಲಿ ಗುಣಮುಖನಾಗಿ ಮನೆಗೆ ಮರಳಿದ ಸೋಂಕಿತ

ಗದಗ:ಕೊರೋನಾ ಸೋಂಕಿತ 62 ವರ್ಷದ ವ್ಯಕ್ತಿ ಇಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನಗರದ ಜಿಮ್ಸ್ ಆಸ್ಪತ್ರೆಯಿಂದ…