ತುಮಕೂರು: ನಾನು ಕೂಡ ಸ್ವಾಭಿಮಾನಿ, ಹಾಗಂತ ನಮ್ಮ ನಾಯಕರು ನನ್ನನ್ನು ಕರೆದು ರೈತ ಮಹಿಳೆಯ ವಿಚಾರವಾಗಿ ರಾಜೀನಾಮೆ ಕೇಳಿದ್ರೆ ಒಂದು ಕ್ಷಣವೂ ಸುಮ್ಮನಿರೋದಿಲ್ಲ. ಇನ್ನು ಈ ಘಟನೆಯಿಂದ ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದ್ರೆ ನಾನು ಅಪಾಲಜಿ ಕೇಳುತ್ತೇನೆ ಎಂದು ಸಚಿವ ಮಧುಸ್ವಾಮಿ ಹೇಳಿದರು.
ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು
ನಾವು ಆ ಭಾಗಕ್ಕೆ ನೀರು ಸಿಕ್ತಿಲ್ಲ ಎಂಬ ಕಾರಣಕ್ಕೆ ಅಲ್ಲಿಗೆ ಹೋಗಿದ್ವಿ, ಚಿಂತಾಮಣಿಯಲ್ಲಿ ಕೆರೆಗೆ ನೀರು ಬಿಡುವ ವಿಚಾರಕ್ಕೆ ಪರಿಶೀಲನೆಗಾಗಿ ತೆರಳಿದ್ವಿ. ಅಲ್ಲಿಗೆ ಒಂದಷ್ಟು ಜನ ಬಂದು ಸೇರಿದರು. ಅವರು ರೈತಸಂಘದವರೆಂದು ನಮಗೆ ಗೊತ್ತಿರಲಿಲ್ಲ. ಅಲ್ಲಿದ್ದ ಈ ಮಹಿಳೆ 130 ಎಕರೆ ಒತ್ತುವರಿಯಾಗಿದೆ ಎಂದು ಮಾತನಾಡಿದರು. ಆಗ ನಾನು ಸೆಕ್ರೆಟಯವರಿಗೆ ಇದಕ್ಕೆ ನಿಮ್ಮ ಉತ್ತರ ಹೇಳಿ ಎಂದು ಕೇಳಿದೆ. ಆಗ ಮಹಿಳೆ ನನಗೇ ಜೋರಾಗಿ ಮಾತನಾಡಿದರು. ಆಗ ನಾನು, ಏನಮ್ಮ ಈ ಪ್ರಶ್ನೆ ನನ್ನ ಕೇಳ್ತಿಯ ಅಂತ ಕೇಳ್ದೆ. ಮತ್ತೆ ಏನ್ರಿ ಮಾಡ್ತಿದ್ದೀರಿ? ಅಂತ ನನ್ನನ್ನೇ ಕೇಳಿದ್ರು. ನನಗೂ ಸ್ವಾಭಿಮಾನವಿದೆ. ನೋಡಮ್ಮ ನಾನು ಕೆಟ್ಟವನು, ನೀನು ಸ್ವಲ್ಪ ರಿಕ್ವೆಸ್ಟ್ ಮಾಡಿಕೊಬೇಕು. ಈ ರೀತಿ ಆದೇಶ ಕೊಡಲಿ ಅಂತ ನಾನು ಬಂದಿಲ್ಲ. ಅಂತ ಸಿಟ್ಟಿನಲ್ಲಿ ಮುಚ್ಚಮ್ಮ ಬಾಯಿ ರಾಸ್ಕಲ್ ಅಂತ ಹೇಳಿದೆ ಎಂದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ನಾನೇಕೆ ರಾಜೀನಾಮೆ ನೀಡಬೇಕು? ನನ್ನನ್ನು ತಬ್ಬಿಕೊಂಡು ಯಾವ ಮಹಿಳೆಯೂ ಮುತ್ತುಕೊಟ್ಟಿಲ್ಲ! ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ: ಕಾಮಗಾರಿ ಮುಗಿದರೂ ಹಸ್ತಾಂತರವಾಗದ ಅಂಗನವಾಡಿ

ಬಡ ಮಕ್ಕಳ ಬದುಕಿನಲ್ಲಿ ಶಿಕ್ಷಣ ದಿವಿಗೆಯನ್ನು ಹಚ್ಚಬೇಕಾದ ಅಂಗನವಾಡಿ ಕೇಂದ್ರ ಇದ್ದು ಇಲ್ಲದಂತಾಗಿ ತಾಲೂಕಿನ ಆದರಹಳ್ಳಿ ಗ್ರಾಮದ 2ನೇ ವಾರ್ಡಿನ ಅಂಗನವಾಡಿ ಕೇಂದ್ರ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಕೊಡುತ್ತಾ ಬಂದಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದರೂ ಇದುವರೆಗೆ ಅಂಗನವಾಡಿ ಕೇಂದ್ರವನ್ನು ಗುತ್ತಿಗೆದಾರರು ಹಸ್ತಾಂತರ ಮಾಡಿಲ್ಲ ಹಾಗೂ ಗ್ರಾ.ಪಂ.ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಆದರೆ ಅಂಗನವಾಡಿ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು 2 ವಾರ್ಡಿನ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೋರ ಹಾಕುತ್ತಿದ್ದಾರೆ.

ನಾಳೆ ಮೀಡಿಯಾ ಕ್ಲಬ್ ನಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ

ಕೊಪ್ಪಳ: ಕರ್ನಾಟಕ ಪತ್ರಿಕಾ ದಿನಾಚರಣೆಯನ್ನು ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಜು. 1ರಂದು ಬೆಳಿಗ್ಗೆ 10.30ಕ್ಕೆ…

ಭಾರತ ಸೈನಿಕರ ಮೇಲೆ ನಿಗಾ: ಪಾಕ್ ಕುತಂತ್ರ ಬುದ್ದಿ

ಭಾರತದ ಸೈನಿಕರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪಾಕ್ ಕುತಂತ್ರ ಬುದ್ಧಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯ : ಜುಲೈನಲ್ಲಿ ನಡೆಯಲಿದೆಯೇ ಪರೀಕ್ಷೆ

ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿದ ಶಿಕ್ಷಣ ಲಾಖೆ ಸಚಿವ ಸುರೇಶ್ ಕುಮಾರ ಅವರು ಜುಲೈ ತಿಂಗಳಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದ್ದು, ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಸರ್ಕಾರದಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.