ಆತ್ಮಿಯರೇ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ದಾವಣಗೆರೆಯ ಟಿ.ಆರ್.ಹೇಮಂತ್ ಕುಮಾರ್ ಅವರು. ನ್ಯಾಯಾಂಗ ಇಲಾಖೆಯ ಉದ್ಯೋಗಿಯಾಗಿರುವ ಹೇಮಂತಕುಮಾರ್ ಅವರು ನೆಲ, ಜಲ ಸಂರಕ್ಷಿಸುವ ಮೂಲಕ ಇರುವ ಒಂದೇ ಜನ್ಮವನ್ನು ಸಾರ್ಥಕಗೊಳಿಸುವ ಕುರಿತು ಜೊತೆಗೆ ಸಾರ್ಥಕ ಬದುಕನ್ನು ಹುಡುಕುವ ಸಂದೇಶ ನೀಡಿದ್ದಾರೆ. ನೆಪವಾದ ಕೊರೋನಾ ದಿಂದ ನಾವು ತಿಳಿಯಬೇಕಾದದ್ದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

ಸಾರ್ಥಕ ಜನ್ಮ

ಇರುವುದೊಂದೇ ಜನ್ಮ ಸಾರ್ಥಕವಾಗಲಿ

ಸ್ವಾರ್ಥತೆಯ ಕರ್ಮ ದೂರವಾಗಲಿ

ನೆಲ, ಜಲ, ಗಾಳಿಯಷ್ಟೇ ಅಲ್ಲ ಬದುಕು

ಅದರಾಚೆಯೂ ಇದೆ ಸ್ವಲ್ಪ ಹುಡುಕು !

ಕೊರೊನೆಯದು ಜಾಡ್ಯವಲ್ಲ, ನೆಪವಷ್ಟೇ!

ನೇಪಥ್ಯ ದಾರಿಗೆ ಎಚ್ಚರಿಕೆಯ ಪರಾಕಾಷ್ಠೆ

ಶಿಕ್ಷಿಸುತ್ತಿಲ್ಲ ಏಕದು ಪ್ರಾಣಿ ಪಕ್ಷಿಗಳನು?

ಕಕ್ಷೆಗಳ ಮೀರದ ನಿರುಪದ್ರವಿಗಳನು

ನೀನೇ ತೋಡಿದ ಖೆಡ್ಡಾ ಮುಚ್ಚಿದೆ ನಿನ್ನನೇ;

ಸೆಡ್ಡು ಹೊಡೆದು ಬೀಗುತಿದೆ ಸುಖಾಸುಮ್ಮನೆ

ಪದೇ ಪದೇ ಕೈಯಿ, ಬಾಯಿ ತೊಳೆದರಾಯಿತೆ?

ಮನಸು ಆಗಲಿ ಸ್ವಚ್ಚ, ಪಾಲಿಸುತ ಭಾವೈಕ್ಯತೆ

ಭಕ್ಷಿಸುತಿರೆ ನೀ ಎಲ್ಲವ ರಕ್ಷಕನ ರೂಪದಿ

ಆವರಿಸಿದೆ ಕರ್ಮ ಫಲ ಕೊರೋನ ತೆರದಿ

ದುಷ್ಟ ಬುದ್ಧಿ ಬಿಡದೇ ನೀ ಮನೆಯಲ್ಲೇ ಇದ್ದರೂ

ಕಷ್ಟವಂತೂ ಅಳಿಯದು; ನಷ್ಟವೆಂದೂ ತಪ್ಪದು;

ತಪ್ಪಲ್ಲ ಈ ದೈಹಿಕ, ಸಾಮಾಜಿಕ ಅಂತರ

ಸೊಪ್ಪು ಹಾಕದಿರೆ ಹಿರಿಯರ ಆದರ್ಶಗಳಿಗೆ

ಉಪ್ಪು ತಿಂದರೂ ನೀರು ಸಿಗದು ನಂತರ

ತೆಪ್ಪಗಾಗಿಸುವುದು ನಿನ್ನ , ಕೊರೊನೆಯ ಬೆಂತರ

ಜಾಗರೂಕನಾಗು; ಆಗು ಹೋಗುಗಳ ನೆನೆಯುತ

ಸಾಗಿಸು ಬದುಕ; ದಾನ ಧರ್ಮಗಳ ಮಾಡುತ

ಭೋಗ ಲಾಲಸೆಗಳಿಗೆ ಮನಕೊಡುವ ಬದಲು

ನಾಗರೀಕನಾಗು ನೀ ಎಲ್ಲಕ್ಕಿಂತ ಮೊದಲು

ಟಿ.ಆರ್.ಹೇಮಂತ್ ಕುಮಾರ್, ದಾವಣಗೆರೆ

1 comment
  1. ಸುಂದರವಾಗಿ ಮೂಡಿ ಬರುತ್ತಿದೆ ನಿಮ್ಮ ಪತ್ರಿಕೆ.
    ಕೊರೊನಾ ಗೀತೆ ಸುಂದರವಾಗಿದೆ.

Leave a Reply

Your email address will not be published. Required fields are marked *

You May Also Like

ಪುಟಾಣಿಗಳ ಬಿಂದಾಸ್ ಸ್ಟೇಪ್ಸ್…ಬೊಂಬಾಟ್ ಪ್ರಫಾರ್ಮನ್ಸ್ ಗೆ ಜನ ಫಿದಾ…!

ವಿಶೇಷ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಫೂಲ್ ಜೋಶ್…

ಬದುಕು ಮುಗಿಸಿದ ಬಂಗಾರದ ಅವ್ವ :ಡಾ. ಗೀತಾ ನಾಗಭೂಷಣ

ಸನ್ 2010ರಲ್ಲಿ ಗದಗ ನಲ್ಲಿ ಜರುಗಿದ ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ…

ಸಂಡೇ ಲಾಕ್ ಡೌನ್ ಸಂಕಟ: ಕಂಗಾಲಾದ ಕಾಗೆಗಳಿಗೆ ಖಾರಾ-ಡಾಣಿ ಊಟ

ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಅಲ್ವಿದಾ ನಿಸಾರ್ ಚಾಚಾ ಎನ್ನಲು ಮನಸಾಗುತ್ತಿಲ್ಲ..!

ಅಲ್ವಿದಾ ನಿಸಾರ್ ಅಹ್ಮದ್ ಚಾಚಾ. ನಿಮ್ಮ ಪದ್ಯಗಳ ಸಂತೆಯಲ್ಲಿ ನಾವು ನಿತ್ಯ ಕಳೆದುಹೋಗುತ್ತೇವೆ. ನರಸಿಂಹರಾಜ ಕಾಲೋನಿಯ ದ್ವಾರಕಾ ಹೋಟೆಲ್ ಮುಂದೆ ನೀವು ಅಂದು ನಿಂತಿದ್ದ ಜಾಗದಲ್ಲೇ ನಿಂತಿರುತ್ತೀರಿ ಎಂದು ಭಾವಿಸುತ್ತೇನೆ. ಹೋಗಿ ಬನ್ನಿ.