ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ  ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗದಗ: ಸಂಡೇ ಲಾಕ್ ಡೌನ್ ಎಲ್ಲ ಎಲ್ಲವೂ ಬಂದ್ . ಹೊಟೆಲ್, ಬೇಕರಿ, ಖಾನಾವಳಿ ಎಲ್ಲ ಬಂದ್ ಇರುವುದರಿಂದ ೀ ತಿಂಡಿ-ಊಟದ  ಅಂಗಡಿಗಳ ಸುತ್ತಲು ಚೆಲ್ಲಿದ ಮುಸುರೆ, ಚೂರುಪಾರು ಬ್ರೆಡ್, ಬನ್ ತುಣುಕುಗಳನ್ನು ಆಶ್ರಯಿಸಿ ಬದುಕುವ ನಾಯಿ, ಕಾಗೆಗಳಂತಹ ಪ್ರಾಣಿ-ಪಕ್ಷಿಗಳಿಗೆ ಅಗುಳು ತುತ್ತು ಸಿಗದಂತಹ ಸಂದರ್ಭ. ಹಳ್ಳಿ ಕಡೆ ಹೋದ ಕಾಗೆಗಳಿಗೇನೋ ಭರಪೂರ ಕಾಳು-ಕಡಿ ಸಿಕ್ಕಾವು. ಆದರೆ ಈ ಸಿಟಿ ಕಾಗೆಗಳ ಪಾಡು ಹೇಳತೀರದು.

ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ  ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗದಗ ನಗರದ  ಗಾಂಧಿವೃತ್ತದ ಮುಚ್ಚಿರುವ ಹೊಟೆಲ್ಗಳ ಸುತ್ತ  ಭಾನುವಾರ ಮುಂಜಾನೆ ಹಸಿವಿನಿಂದ ಕಂಗಾಲಾಗಿದ್ದ ನೂರಾರು ಕಾಗೆಗಳು ಕಾವ್ ಕಾವ್ ಎಂದು ಆಕ್ರಂದಿಸುತ್ತಿದ್ದವು. ದಿನವೂ ತನ್ನ ಹೊಟೆಲಿನ ಅಳಿದುಳಿದ ಆಹಾರ ತಂದು ಬದುಕುವ ಕಾಗೆಗಳು ಹೀಗೆ ಹಸಿವಿನಿಂದ ಗೋಳಾಡುವುದನ್ನು ನೋಡಿ ಮರುಗಿದ ಮಹಾಲಕ್ಷ್ಮಿ ಹೊಟೆಲಿನ ಮಾಲೀಕರು ಅವಕ್ಕೆ ಆಹಾರ ನೀಡಿ ಮಾನವೀಯತೆ ಮೆರೆದರು.

ಇವತ್ತು ಮಹಾಲಕ್ಷ್ಮಿ ಹೊಟೆಲ್ಲೂ ಬಂದ್ ಇತ್ತು. ಹೀಗಾಗಿ ಅಲ್ಲೂ ತಿಂಡಿ ಇರಲಿಲ್ಲ. ಾದರೆ ಕೊಡುವ ಮನಸ್ಸ್ಉ ಮಾಡಿದ ಮೇಲೆ ನೂರು ದಾರಿ. ಅಂಗಡಿಯಲ್ಲಿದ್ದ ಖಾರಾ-ಡಾಣಿ-ಪುಗ್ಗಿಯನ್ನು ತಂದು ಕಾಗೆಗಳ ಹಿಂಡಿಗೆ ನೀಡುವ ಮೂಲಕ ಹೊಟೆಲ್ ಮಾಲೀಕರು ತಾವೂ ಸಮಾಧಾನ ಪಟ್ಟರು, ಕಾಗೆಗಳ ಹಸಿವನ್ನೂ ನೀಗಿಸಿದರು.

 ನಮ್ಮ ಅಪದ್ಧ ಶಾಸ್ತ್ರಗಳು, ಟಿವಿ ಜ್ಯೋತಿಷಿಗಳು ಕಾಗೆ ಅಪಶಕುನ ಎಂಬ ಮೂಢನಂಬಿಕೆಯನ್ನು ಬಿತ್ತಿದ ಪರಿಣಾಮ ಕಾಗೆ ಎಂದರೆ ಜನರು ತಾತ್ಸಾರ ಪಡುತ್ತಾರೆ.  ಅವು ಸ್ಪರ್ಶಿಸಿದರೆ ಮನೆಯಲ್ಲಿ ಸಾವು ಖಚಿತ ಎಂದೆಲ್ಲ ತಲೆಬುಡವಿಲ್ಲದ ಸಂಗತಿಯನ್ನು ಜನರ ತಲೆಗೆ ತುಂಬಿದ್ದಾರೆ. ಇದನ್ನು ನಂಬಿದ ಕೆಲವರು ಕಾಗೆ ಸ್ಪರ್ಶವಾದಾಗ ಹೆದರಿ ಎಡವಟ್ಟು ಮಾಡಿಕೊಂಡಿದ್ದಾರೆ.

ಹೀಗೆ ತಾತ್ಸಾರಕ್ಕೊಳಪಟ್ಟ, ಅಪಶಕುನದ ಆರೋಪಕ್ಕೆ ಗುರಿಯಾದ ಕಾಗೆಗಳನ್ನು ಇತರೆಲ್ಲ ಪಕ್ಷಿಗಳಂತೆ ಪರಿಗಣಿಸಿ ಆಹಾರ ನೀಡಿದ ಹೊಟೆಲ್ ಮಾಲೀಕರ ನಡೆಗೆ ಒಂದು ಸಲಾಂ.

Leave a Reply

Your email address will not be published. Required fields are marked *

You May Also Like

ನರೇಗಲ್ಲ: ವಿದ್ಯುತ್ ನಿಲುಗಡೆ

110/11ಕೆವ್ಹಿ ನರೇಗಲ್ಲ, ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ನವೆಂಬರ್ 10 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5.30 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಗದಗ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ

ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2020-21ನೇ ಸಾಲಿನಲ್ಲಿ ಜಿಲ್ಲೆಯ ಶಾಲಾ ಹಾಗೂ ಕಾಲೇಜಿನಲ್ಲಿ ನಾನಾ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ, ಕ್ರ‍್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಪಿ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.

ಗದಗ ಜಿಲ್ಲೆಯಲ್ಲಿ ಸೋಂಕಿನ ಸರಣಿ ಸ್ಪೋಟ!: ಇಂದು 40 ಪಾಸಿಟಿವ್..!

ದಿನಕ್ಕೆ ಗದಗ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ನಗರಕ್ಕೆ ಸೀಮಿತವಾಗಿದ್ದ ಸೋಂಕು ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು ತೀವ್ರ ಆತಂಕ ಸೃಷ್ಟಿಸಿದೆ.

ಲಕ್ಷ್ಮೇಶ್ವರ: ಕೆಸರು ಗದ್ದೆಯಂತಾದ ರಸ್ತೆಗಳು

ಲಕ್ಷ್ಮೀ ನಗರದ 5 ಮತ್ತು 6 ನೇ ವಾರ್ಡಿನ ರಸ್ತೆಗಳು ಕೆಸರುಗದ್ದೆಯಂತಾಗಿದೆ. ಮಳೆಯಿಂದಾಗಿ ಓಡಾಡುವುದಕ್ಕೆ ತೊಂದರೆ ಆಗುತ್ತಿದೆ. ಮನೆಯಿಂದ ಹೊರಗಡೆ ಬರುವುದಕ್ಕೆ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರ ಗೋಳಂತು ಹೇಳತೀರದು. ರಸ್ತೆಯಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ.