ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ  ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗದಗ: ಸಂಡೇ ಲಾಕ್ ಡೌನ್ ಎಲ್ಲ ಎಲ್ಲವೂ ಬಂದ್ . ಹೊಟೆಲ್, ಬೇಕರಿ, ಖಾನಾವಳಿ ಎಲ್ಲ ಬಂದ್ ಇರುವುದರಿಂದ ೀ ತಿಂಡಿ-ಊಟದ  ಅಂಗಡಿಗಳ ಸುತ್ತಲು ಚೆಲ್ಲಿದ ಮುಸುರೆ, ಚೂರುಪಾರು ಬ್ರೆಡ್, ಬನ್ ತುಣುಕುಗಳನ್ನು ಆಶ್ರಯಿಸಿ ಬದುಕುವ ನಾಯಿ, ಕಾಗೆಗಳಂತಹ ಪ್ರಾಣಿ-ಪಕ್ಷಿಗಳಿಗೆ ಅಗುಳು ತುತ್ತು ಸಿಗದಂತಹ ಸಂದರ್ಭ. ಹಳ್ಳಿ ಕಡೆ ಹೋದ ಕಾಗೆಗಳಿಗೇನೋ ಭರಪೂರ ಕಾಳು-ಕಡಿ ಸಿಕ್ಕಾವು. ಆದರೆ ಈ ಸಿಟಿ ಕಾಗೆಗಳ ಪಾಡು ಹೇಳತೀರದು.

ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ  ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗದಗ ನಗರದ  ಗಾಂಧಿವೃತ್ತದ ಮುಚ್ಚಿರುವ ಹೊಟೆಲ್ಗಳ ಸುತ್ತ  ಭಾನುವಾರ ಮುಂಜಾನೆ ಹಸಿವಿನಿಂದ ಕಂಗಾಲಾಗಿದ್ದ ನೂರಾರು ಕಾಗೆಗಳು ಕಾವ್ ಕಾವ್ ಎಂದು ಆಕ್ರಂದಿಸುತ್ತಿದ್ದವು. ದಿನವೂ ತನ್ನ ಹೊಟೆಲಿನ ಅಳಿದುಳಿದ ಆಹಾರ ತಂದು ಬದುಕುವ ಕಾಗೆಗಳು ಹೀಗೆ ಹಸಿವಿನಿಂದ ಗೋಳಾಡುವುದನ್ನು ನೋಡಿ ಮರುಗಿದ ಮಹಾಲಕ್ಷ್ಮಿ ಹೊಟೆಲಿನ ಮಾಲೀಕರು ಅವಕ್ಕೆ ಆಹಾರ ನೀಡಿ ಮಾನವೀಯತೆ ಮೆರೆದರು.

ಇವತ್ತು ಮಹಾಲಕ್ಷ್ಮಿ ಹೊಟೆಲ್ಲೂ ಬಂದ್ ಇತ್ತು. ಹೀಗಾಗಿ ಅಲ್ಲೂ ತಿಂಡಿ ಇರಲಿಲ್ಲ. ಾದರೆ ಕೊಡುವ ಮನಸ್ಸ್ಉ ಮಾಡಿದ ಮೇಲೆ ನೂರು ದಾರಿ. ಅಂಗಡಿಯಲ್ಲಿದ್ದ ಖಾರಾ-ಡಾಣಿ-ಪುಗ್ಗಿಯನ್ನು ತಂದು ಕಾಗೆಗಳ ಹಿಂಡಿಗೆ ನೀಡುವ ಮೂಲಕ ಹೊಟೆಲ್ ಮಾಲೀಕರು ತಾವೂ ಸಮಾಧಾನ ಪಟ್ಟರು, ಕಾಗೆಗಳ ಹಸಿವನ್ನೂ ನೀಗಿಸಿದರು.

 ನಮ್ಮ ಅಪದ್ಧ ಶಾಸ್ತ್ರಗಳು, ಟಿವಿ ಜ್ಯೋತಿಷಿಗಳು ಕಾಗೆ ಅಪಶಕುನ ಎಂಬ ಮೂಢನಂಬಿಕೆಯನ್ನು ಬಿತ್ತಿದ ಪರಿಣಾಮ ಕಾಗೆ ಎಂದರೆ ಜನರು ತಾತ್ಸಾರ ಪಡುತ್ತಾರೆ.  ಅವು ಸ್ಪರ್ಶಿಸಿದರೆ ಮನೆಯಲ್ಲಿ ಸಾವು ಖಚಿತ ಎಂದೆಲ್ಲ ತಲೆಬುಡವಿಲ್ಲದ ಸಂಗತಿಯನ್ನು ಜನರ ತಲೆಗೆ ತುಂಬಿದ್ದಾರೆ. ಇದನ್ನು ನಂಬಿದ ಕೆಲವರು ಕಾಗೆ ಸ್ಪರ್ಶವಾದಾಗ ಹೆದರಿ ಎಡವಟ್ಟು ಮಾಡಿಕೊಂಡಿದ್ದಾರೆ.

ಹೀಗೆ ತಾತ್ಸಾರಕ್ಕೊಳಪಟ್ಟ, ಅಪಶಕುನದ ಆರೋಪಕ್ಕೆ ಗುರಿಯಾದ ಕಾಗೆಗಳನ್ನು ಇತರೆಲ್ಲ ಪಕ್ಷಿಗಳಂತೆ ಪರಿಗಣಿಸಿ ಆಹಾರ ನೀಡಿದ ಹೊಟೆಲ್ ಮಾಲೀಕರ ನಡೆಗೆ ಒಂದು ಸಲಾಂ.

Leave a Reply

Your email address will not be published. Required fields are marked *

You May Also Like

ಅಕ್ರಮ ಸಾರಾಯಿ ಮಾರಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ. ಅದರಲ್ಲಿಯೂ ಹೋಟೆಲ್ ಹಾಗೂ ದಾಬಾಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಹನಮಂತ ಚಲವಾದಿ ಆರೋಪಿಸಿದರು.

ನೀರಿನ ಕರ ಹೆಚ್ಚಳಕ್ಕೆ ಕನ್ನಡ ಕ್ರಾಂತಿ ಸೇನೆ ವಿರೋಧ

ವರ್ಷಕ್ಕೆ 950 ರೂ ನೀರಿನ ಕರವನ್ನು ಪುರಸಭೆ ನಿಗದಿ ಮಾಡಿತ್ತು. ಆದರೆ ಇದೀಗ ಏಕಾಏಕಿ 1550 ರೂ, ಏಕಾಏಕಿ ಹೆಚ್ಚಿಗೆ ಮಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಗದಗ ಜಿಲ್ಲೆಯಲ್ಲಿಂದು 19 ಕೊರೊನಾ ಪಾಸಿಟಿವ್!

ಗದಗ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಈ ಮೂಲಕ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಕಪ್ಪತ್ತಗುಡ್ಡ ವನ್ಯಜೀವಿಧಾಮ: ಕೈಬಿಡಲು ಒತ್ತಾಯಿಸಿ ಮನವಿ

ಸರ್ಕಾರ ಅವೈಜ್ಞಾನಿಕವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿದ್ದು, ಶಿರಹಟ್ಟಿ ತಾಲೂಕಿನ‌ ಬ್ಲಾಕ್ ನಂ 3 ಮತ್ತು 4 ರ ಅರಣ್ಯ ಕ್ಷೇತ್ರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಹಿಂದ್ ಸಂಘ ಹಾಗೂ‌ ಕ್ರಷರ್ ಮತ್ತು‌ ಕಲ್ಲು ಗಣಿಗಾರಿಕೆ ಕಾರ್ಮಿಕ ಒಕ್ಕೂಟ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ‌ ಮನವಿ‌ ಸಲ್ಲಿಸಲಾಯಿತು.